ಆ್ಯಪ್ನಗರ

ಉತ್ತರ ಪತ್ರಿಕೆ ಹರಿದ ಪ್ರಕರಣ: ನಿರ್ದೇಶಕರಿಗೆ ವರದಿ

ವಿಜಯಪುರ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತರ ಪತ್ರಿಕೆ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದ ಅಧೀಕ್ಷಕರನ್ನು ಶನಿವಾರ ವಿಚಾರಣೆಗೊಳಪಡಿಸಿದ ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಂಕರ ಅಮಾತೆಯವರು, ವಿಸ್ತೃತ ವರದಿಯನ್ನು ಇಲಾಖೆಯ ನಿರ್ದೇಶಕರಿಗೆ ಸಲ್ಲಿಸಲು ನಿರ್ಧರಿಸಿದ್ದಾರೆ.

Vijaya Karnataka 3 Mar 2019, 5:00 am
ವಿಜಯಪುರ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತರ ಪತ್ರಿಕೆ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದ ಅಧೀಕ್ಷಕರನ್ನು ಶನಿವಾರ ವಿಚಾರಣೆಗೊಳಪಡಿಸಿದ ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಂಕರ ಅಮಾತೆಯವರು, ವಿಸ್ತೃತ ವರದಿಯನ್ನು ಇಲಾಖೆಯ ನಿರ್ದೇಶಕರಿಗೆ ಸಲ್ಲಿಸಲು ನಿರ್ಧರಿಸಿದ್ದಾರೆ.
Vijaya Karnataka Web puc answer paper damage a report to director
ಉತ್ತರ ಪತ್ರಿಕೆ ಹರಿದ ಪ್ರಕರಣ: ನಿರ್ದೇಶಕರಿಗೆ ವರದಿ


ಹೂವಿನಹಿಪ್ಪರಗಿಯ ಪರೀಕ್ಷಾ ಕೇಂದ್ರದ ಅಧೀಕ್ಷಕರನ್ನು ಶನಿವಾರ ಕಚೇರಿಗೆ ಆಹ್ವಾನಿಸಿ, ಸಮಗ್ರ ವಿಚಾರಣೆ ನಡೆಸಿದರು. ಪರೀಕ್ಷಾರ್ಥಿ ಇಡೀ ಉತ್ತರ ಪತ್ರಿಕೆಯನ್ನು ಹರಿದು ಹಾಕಿಲ್ಲ. ಕೊನೆಯ ಪುಟವೊಂದನ್ನು ಮಾತ್ರ ಹರಿದಿದ್ದ. ಬಳಿಕ ಆತನನ್ನು ಕರೆದು, ಪರೀಕ್ಷೆ ಬರೆಯುವಂತೆ ಸೂಚಿಸಿದ್ದರಿಂದಾಗಿ ಕೊನೆಗೆ ಬಾಲಕ ಪರೀಕ್ಷೆಯನ್ನು ಬರೆದಿದ್ದಾನೆ ಎಂದು ಅಧೀಕ್ಷಕರು ವಿಚಾರಣೆ ವೇಳೆ ತಿಳಿಸಿದ್ದಾರೆ.

ಅವರ ಹೇಳಿಕೆಯನ್ನಾಧರಿಸಿ, ಇಲಾಖೆಯ ನಿರ್ದೇಶಕರಿಗೆ ಸಮಗ್ರ ವರದಿ ಕಳುಹಿಸುತ್ತೇನೆ. ಅಲ್ಲದೇ ಪರೀಕ್ಷಾ ಕೇಂದ್ರಕ್ಕೂ ತೆರಳಿ ಸಮಗ್ರವಾಗಿ ಪರಿಶೀಲಿಸುವುದಾಗಿ ಉಪನಿರ್ದೇಶಕ ಶಂಕರ ಅಮಾತೆ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ