ಆ್ಯಪ್ನಗರ

ಪಿಯುಸಿ ಪರೀಕ್ಷೆ: ರಾಜ್ಯ ಟಾಪರ್‌ ವಿಜಯಪುರದ ಶ್ರೀಧರ ದೊಡಮನಿ ನೀಡಿದ ಟಿಫ್ಸ್‌

ವಿಜಯಪುರ : ಪರೀಕ್ಷೆ ಎಂದರೆ ಯುದ್ಧವಲ್ಲ. ಅದಕ್ಕೆ ವೃಥಾ ಹೆದರಿಕೆ ಬೇಡ. ಆರಾಮಾಗಿ ಪರೀಕ್ಷೆ ಬರೆಯಲಾರಂಭಿಸಿದರೆ ನೆನಪಿನ ಬುತ್ತಿಯೂ ತಂತಾನೆ ಬಿಚ್ಚುತ್ತದೆ. ತನ್ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯವಿದೆ.

Vijaya Karnataka 1 Mar 2019, 5:00 am
Vijaya Karnataka Web puc tiffs
ಪಿಯುಸಿ ಪರೀಕ್ಷೆ: ರಾಜ್ಯ ಟಾಪರ್‌ ವಿಜಯಪುರದ ಶ್ರೀಧರ ದೊಡಮನಿ ನೀಡಿದ ಟಿಫ್ಸ್‌

ಸಂಗಮೇಶ ಚೂರಿ, ವಿಜಯಪುರ

ಪರೀಕ್ಷೆ ಎಂದರೆ ಯುದ್ಧವಲ್ಲ. ಅದಕ್ಕೆ ವೃಥಾ ಹೆದರಿಕೆ ಬೇಡ. ಆರಾಮಾಗಿ ಪರೀಕ್ಷೆ ಬರೆಯಲಾರಂಭಿಸಿದರೆ ನೆನಪಿನ ಬುತ್ತಿಯೂ ತಂತಾನೆ ಬಿಚ್ಚುತ್ತದೆ. ತನ್ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯವಿದೆ.

ಕಳೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು, ಸಿಇಟಿ ಹಾಗೂ ನೀಟ್‌ ಪರೀಕ್ಷೆಗಳೆರಡರಲ್ಲೂ ರಾಜ್ಯಕ್ಕೆ ಫಸ್ಟ್‌ ರಾರ‍ಯಂಕ್‌ ಪಡೆದ ವಿಜಯಪುರ ಎಕ್ಸಲೆಂಟ್‌ ಪಿಯು ಕಾಲೇಜ್‌ನ ವಿದ್ಯಾರ್ಥಿ ಶ್ರೀಧರ ದೊಡಮನಿ ಟಿಫ್ಸ್‌ಗಳು.

ಹಿಂದಿನ ದಿನ ಚೆನ್ನಾಗಿ ನಿದ್ರೆ ಮಾಡಿ. ಎಂದಿನಂತೆ ಕ್ಲಾಸ್‌ಗೆ ಹೋಗುವ ಮಾದರಿಯಲ್ಲೇ 1 ಗಂಟೆ ಮುಂಚೆ ಪರೀಕ್ಷಾ ಕೇಂದ್ರ ಪ್ರವೇಶಿಸಿ. ಚೆನ್ನಾಗಿ ಓದಿದ ವಿಷಯದ ಮೇಲೆಯೇ ಹೆಚ್ಚು ಪ್ರಶ್ನೆಗಳಿದ್ದರೆ, ಮೊದಲು ಅವುಗಳಿಗೆ ಉತ್ತರಿಸಿ. ಬಳಿಕ ಕ್ಲಿಷ್ಟಕರ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. ನಿಗದಿತ ಅವಧಿಧಿಯ ಅರ್ಧ ಗಂಟೆಗೂ ಮುಂಚೆಯೇ ಬರೆಯುವುದನ್ನು ಮುಗಿಸಿ. ಬಳಿಕ ಉಳಿದರ್ಧ ಗಂಟೆ ಅವಧಿಯಲ್ಲಿ ಮುಖ್ಯ ಸಂಗತಿಗಳಿಗೆ ಅಂಡರ್‌ಲೈನ್‌ ಇಲ್ಲವೇ ಬೋಲ್ಡ್‌ ಮಾಡಿ.

ಪರೀಕ್ಷೆ ಇದೆ ಎಂಬ ಕಾರಣಕ್ಕೆ ಕೆಲವರು ಕಣ್ಣಿಗೆ ಎಣ್ಣೆ ಹಾಕಿಕೊಂಡು ಓದುತ್ತಾರಂತೆ. ಅಂಥ ಓದಿನ ಅವಶ್ಯಕತೆಯಿಲ್ಲ. ಕಷ್ಟಪಟ್ಟು ಓದುವ ಬದಲಿಗೆ ಇಷ್ಟಪಟ್ಟು ಏಕಾಗ್ರತೆಯಿಂದ ಓದಿದರೆ, ಅದು ಪರೀಕ್ಷೆಯನ್ನು ಸಲೀಸಾಗಿಸುತ್ತದೆ.

ಪರೀಕ್ಷೆ ಹಾಜರಾಗುತ್ತಿದ್ದಂತೆಯೇ, ಓದಿದ್ದನ್ನು ಮೆಲಕು ಹಾಕುತ್ತಿರಬೇಕು. ಈ ಅವಧಿಯಲ್ಲಿ ಹೊಸ ಟಾಪಿಕ್‌ ಓದುವ ಊಸಾಬರಿ ಬೇಡ. ಓದಿದ್ದ ಟಾಪಿಕ್‌ಗಳ ಮೇಲೆಯೇ ಹೆಚ್ಚು ಕಣ್ಣಾಡಿಸಿ. ಅದು ಪರೀಕ್ಷೆಯಲ್ಲಿ ಪ್ರಯೋಜನಕಾರಿಯಾಗುತ್ತದೆ.

ಭಾಷಾ ವಿಷಯಗಳಿದ್ದರೆ, ಅರ್ಧ ಗಂಟೆ ಮೊದಲೇ ಪರೀಕ್ಷೆ ಮುಗಿಸಿ, ಬರೆದ ಪೇಪರ್‌ ಮತ್ತೆ ಪುನರ್‌ ವಿಮರ್ಶಿಸಬೇಕು. ರಸಾಯನಶಾಸ್ತ್ರ ಪತ್ರಿಕೆ ಬಿಡಿಸುವಾಗ ಪಾಯಿಂಟ್ಸ್‌ಗಳಿದ್ದರೆ ಚೆನ್ನ. ಜೀವಶಾಸ್ತ್ರ ಪತ್ರಿಕೆಯಲ್ಲಿ ಡೈಗ್ರಾಮ್ಸ್‌ ಹಾಕಬೇಕು. ಗಣಿತ ಪರೀಕ್ಷೆಯಲ್ಲಿ ಸ್ಟೆಪ್‌ ವೈಸ್‌ ಸೆಲ್ಯೂಶನ್‌ ಮಾಡುತ್ತಾ ಹೋದರೆ, ಹೆಚ್ಚು ಅಂಕಗಳನ್ನು ಗಳಿಸಬಹುದು

ಸಾಮಾನ್ಯವಾಗಿ ಈ ಪರೀಕ್ಷೆಯಲ್ಲಿ ಪ್ರತಿ ವಿಷಯಕ್ಕೆ ಸಾಕಷ್ಟು ಸಮಯವಿರುತ್ತದೆ. ಹೀಗಾಗಿ ಬರೆದ ಪತ್ರಿಕೆಗೆ ಎಷ್ಟು ಅಂಕ ಬರುತ್ತವೆ ಎಂದು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಬೇಡಿ. ಮುಂದಿನ ವಿಷಯದ ಮೇಲೆ ಏಕಾಗ್ರತೆಯಿಂದ ಓದುವುದರತ್ತಲೇ ಮನಸ್ಸು ಕೇಂದ್ರೀಕರಿಸಬೇಕು.

ಪೋಷಕರು ಮಕ್ಕಳಿಗೆ ಓದು ಓದು ಎಂಬ ಒತ್ತಡ ಹೇರುವುದು ತರವಲ್ಲ. ನಿಮ್ಮ ಮಕ್ಕಳನ್ನು ಫ್ರೀಯಾಗಿ ಬಿಡಿ. ನಿನ್ನ ಭವಿಷ್ಯ ನಿನ್ನ ಕೈಯ್ಯಲ್ಲಿದೆ ಎಂಬ ಮಾತನ್ನಷ್ಟೇ ಹೇಳಿ ಬಿಡಿ. ಪರೀಕ್ಷೆ ದಿನ ಆತನ ಮನಸ್ಸು ಘಾಷಿಗೊಳಿಸಬೇಡಿ. ಬದಲಿಗೆ ಶುಭಾಶಯಗಳನ್ನು ಹೇಳಿ ಬಿಡಿ. ಆತ ಚೆನ್ನಾಗಿ ಪರೀಕ್ಷೆ ಬರೆಯುತ್ತಾನೆ. ಉತ್ತಮ ಅಂಕಗಳನ್ನೂ ಗಳಿಸುತ್ತಾನೆ ಎನ್ನುವುದು ಶ್ರೀಧರ್‌ ವಿಶ್ವಾಸದ ನುಡಿ.


ಪರೀಕ್ಷೆ ಬಂತು. ಓದು, ಓದು ಎಂಬ ಒತ್ತಡ ಹೇರಿದ್ದಿಲ್ಲ. ಆತನಿಗೆ ಫುಲ್‌ ಫ್ರೀಡಂ ನೀಡಿದ್ದೇವು. ಬೇಡಿದ ಬುಕ್ಸ್‌ ಕೊಡಿಸಿದ್ದೇವು. ಕ್ಲಿಷ್ಟಕರ ಎನಿಸಿದ ಸಂಗತಿಗಳನ್ನು ಅವರ ಮೇಷ್ಟ್ರುಗಳ ಬಳಿ ತಿಳಿದುಕೊಳ್ಳದೇ ಬಿಡುತ್ತಿರಲಿಲ್ಲ. ಯಾವುದಕ್ಕೂ ಫೋರ್ಸ್‌ ಮಾಡಿದ್ದಿಲ್ಲ. ಹೀಗಾಗಿ ಆತನ ಪಾಲಿಗೆ ಆತ ಇಷ್ಟ ಪಟ್ಟು ಓದಿದ್ದರಿಂದಾಗಿ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ. ಮ್ತೆ ಸಿಇಟಿ ಹಾಗೂ ನೀಟ್‌ನಲ್ಲೂ ರಾಜ್ಯಕ್ಕೆ ಫಸ್ಟ್‌ ರಾರ‍ಯಂಕ್‌ ಪಡೆದ. ಈಗ ಬೆಂಗಳೂರಿನ ಮೆಡಿಕಲ್‌ ಕಾಲೇಜ್‌ನಲ್ಲಿ ಎಂಬಿಬಿಎಸ್‌ ಓದುತ್ತಿರುವುದು ನಮಗೆ ಸಂತಸವನ್ನುಂಟು ಮಾಡಿದೆ.

ಎಸ್‌.ಎಸ್‌. ದೊಡಮನಿ, ಶ್ರೀಧರ ತಂದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ