ಆ್ಯಪ್ನಗರ

ವಿಜಯಪುರದ ಬುರಾಣಾಪುರದಲ್ಲೇ ವಿಮಾನ ನಿಲ್ದಾಣ ಸ್ಥಾಪನೆ; ಗೊಂದಲಗಳಿಗೆ ತೆರೆ

ವಿಜಯಪುರದಲ್ಲಿ ಉದ್ದೇಶಿತ ವಿಮಾನ ನಿಲ್ದಾಣ ಎಲ್ಲಿ ಸ್ಥಾಪನೆ ಮಾಡಬೇಕು ಎಂಬ ಗೊಂದಲಗಳು ಇತ್ಯರ್ಥಗೊಂಡಿದ್ದು, ಬುರಣಾಪುರದಲ್ಲೇ ವಿಮಾನ ನಿಲ್ದಾಣ ಸ್ಥಾಪಿಸಲಾಗುವುದು ಎಂದು ಸಂಸದ ರಮೇಶ ಜಿಗಜಿಣಗಿ ಮಾಹಿತಿ ನೀಡಿದ್ದಾರೆ.

Vijaya Karnataka Web 20 Sep 2019, 11:12 am
ವಿಜಯಪುರ: ನಗರದಲ್ಲಿ ಉದ್ದೇಶಿತ ವಿಮಾನ ನಿಲ್ದಾಣ ಎಲ್ಲಿ ಸ್ಥಾಪನೆಯಾಗುತ್ತದೆ ಎಂಬ ಗೊಂದಲ‌ ಇತ್ಯರ್ಥವಾಗಿದ್ದು, ಬುರಣಾಪುರದಲ್ಲೇ ವಿಮಾನ ನಿಲ್ದಾಣ ಸ್ಥಾಪಿಸಲಾಗುವುದು ಎಂದು ಸಂಸದ ರಮೇಶ ಜಿಗಜಿಣಗಿ ಸ್ಪಷ್ಟಪಡಿಸಿದರು.
Vijaya Karnataka Web Ramesh Jihajinagi


ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತತಕ್ಷಣಕ್ಕೆ ರನ್ ವೇ ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಕೇಂದ್ರ ವಿಮಾನಯಾನ ಸಚಿವ ಹರ್ ದೀಪ ಸಿಂಗ್ ಪುರಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾಗಿ ತಿಳಿಸಿದರು. ವಿಮಾನ ನಿಲ್ದಾಣ ಎಲ್ಲಿ ಸ್ಥಾಪನೆಯಾಗಬೇಕೆಂಬ ಗೊಂದಲ ಈಗಿಲ್ಲ. ಅದು ಬುರಣಾಪುರದಲ್ಲಿ ನಿರ್ಮಿಸಲು‌ ಕೇಂದ್ರ ವಿಮಾನಯಾನ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂತಿಮ ತೀರ್ಮಾನವಾಗಿದೆ ಎಂದರು.

೨೦೦೯ ರಲ್ಲಿ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿದ್ದ ಗುತ್ತಿಗೆದಾರ ಕಂಪನಿಯ ತಪ್ಪು‌ ಮಾಹಿತಿಯಿಂದಾಗಿ ಜನರು ಹಾಗೂ ಸರಕಾರದ ಮಟ್ಟದಲ್ಲಿ ವೃಥಾ ಗೊಂದಲ‌ ಉಂಟಾಗಿತ್ತು. ಆತ ಕಾಮಗಾರಿಯಿಂದ‌ ವಿಮುಖನಾಗಬೇಕೆಂಬ ದುರುದ್ದೇಶದಿಂದ ಈ ರೀತಿ‌ ಗೊಂದಲ ಸೃಷ್ಠಿಸಿದ್ದಾನೆ ಎಂದರು.

ವಾಸ್ತವದಲ್ಲಿ ೧೦೦ ಕೋಟಿ ರೂ. ಅವಶ್ಯಕತೆಯಿಲ್ಲ. ಮೊದಲ‌ ಹಂತವಾಗಿ ಒಂದು ಕಟ್ಟಡ ಹಾಗೂ ರನ್ ವೇ ಸ್ಥಾಪಿಸಲಾಗುವುದು. ಈಗಾಗಲೇ ಕೇಂದ್ರ ಸಚಿವರೇ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ. ನಾನು ಕೂಡಾ ಮೂಲಭೂತ ಸೌಕರ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಪೇಪರ್ ವರ್ಕ್ ಆಗಬೇಕು. ಒಟ್ಟಾರೆ ವಿಮಾನ ನಿಲ್ದಾಣ ಬುರಣಾಪುರದಲ್ಲಿ ನಿರ್ಮಾಣವಾಗುವುದರಲ್ಲಿ ಅನುಮಾನವೇ ಇಲ್ಲ ಎಂದರು.

ಕಾಂಗ್ರೆಸ್ ಸರಕಾರದ ಅನಾದರದಿಂದಾಗಿ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ವಿಳಂಬವಾಗಿದೆ ಎಂದು ಆರೋಪಿಸಿದ ಜಿಗಜಿಣಗಿ, ಅಂದಿನ ರಾಜ್ಯ ಸರಕಾರ‌ ಒಪ್ಪಲಿಲ್ಲ. ಶೇ.49 ರಷ್ಟು ದುಡ್ಡು ಕೊಡಲಿಲ್ಲ. ಹೀಗಾಗಿ ನಿರ್ಮಾಣ ಆಗಲಿಲ್ಲ. ಅದಕ್ಕೆ ರನ್ ವೇ ಹಾಗೂ ಕಟ್ಟಡಕ್ಕೆ 100 ಕೋಟಿ ರೂ. ಅಗತ್ಯವಿಲ್ಲ. ಆದರೆ 100 ಕೋಟಿ ಕೊಡಬೇಕಾ ಎಂಬ ಕಾರಣಕ್ಕೆ ವಿಳಂಬವಾಗಿದೆ ಎಂದರು.

ಹೊಸದಾಗಿ ಈಗ ಗೊಂದಲ ನಿವಾರಣೆಯಾಗಿದೆ. ಆದರೆ ಇದನ್ನು ಬಿಡಲ್ಲ. ತ್ವರಿತಗತಿಯಲ್ಲಿ‌ ಕೆಲಸ ಮಾಡುವುದಾಗಿ ತಿಳಿಸಿದರು.

ಮುಧೋಳ ಶಾಸಕ ಗೋವಿಂದ ಕಾರಜೋಳ‌ ಜತೆಗೆ ಸಮಾಲೋಚಿಸಿ ಈ ತೀರ್ಮಾನಕ್ಕೆ ಬಂದಿದ್ದಾಗಿ ತಿಳಿಸಿದರು. ಒಂದೇ ಅಂಬ್ರೆಲ್ಲಾದಲ್ಲಿ ಮಂಜೂರಾತಿ‌ ಆಗಿತ್ತು. ಆದರೆ ಜಿಲ್ಲೆಯ‌ ಜನತೆ ನಸೀಬು ಚೆನ್ನಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಆದರೆ ನಾನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಯಾವುದೇ ‌ಕಾರಣಕ್ಕೂ ವಿಬವಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ