ಆ್ಯಪ್ನಗರ

ಕೈ ಮುಖಂಡೆ ರೇಷ್ಮಾ ಪಡೇಕನೂರ ಕೊಲೆ

ವಿಜಯಪುರ : ಕಾಂಗ್ರೆಸ್‌ ಯುವ ನಾಯಕಿ, ಜೆಡಿಎಸ್‌ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆ, ಕರವೇ ರಾಜ್ಯ ಪದಾಧಿಕಾರಿ ರೇಷ್ಮಾ ಪಡೇಕನೂರ (35)ಶವ ಅನುಮಾನಾಸ್ಪದ ರೀತಿಯಲ್ಲಿ ಶುಕ್ರವಾರ ಬೆಳಗ್ಗೆ ಕೊಲ್ಹಾರ-ಕೊರ್ತಿಯ ಕೃಷ್ಣಾ ನದಿ ಸೇತುವೆ ಕೆಳಗೆ ಪತ್ತೆಯಾಗಿದ್ದು, ಕೊಲೆ ಮೊಕದ್ದಮೆ ದಾಖಲಾಗಿದೆ.

Vijaya Karnataka 18 May 2019, 5:00 am
ವಿಜಯಪುರ : ಕಾಂಗ್ರೆಸ್‌ ಯುವ ನಾಯಕಿ, ಜೆಡಿಎಸ್‌ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆ, ಕರವೇ ರಾಜ್ಯ ಪದಾಧಿಕಾರಿ ರೇಷ್ಮಾ ಪಡೇಕನೂರ (35)ಶವ ಅನುಮಾನಾಸ್ಪದ ರೀತಿಯಲ್ಲಿ ಶುಕ್ರವಾರ ಬೆಳಗ್ಗೆ ಕೊಲ್ಹಾರ-ಕೊರ್ತಿಯ ಕೃಷ್ಣಾ ನದಿ ಸೇತುವೆ ಕೆಳಗೆ ಪತ್ತೆಯಾಗಿದ್ದು, ಕೊಲೆ ಮೊಕದ್ದಮೆ ದಾಖಲಾಗಿದೆ.
Vijaya Karnataka Web reshma murder
ಕೈ ಮುಖಂಡೆ ರೇಷ್ಮಾ ಪಡೇಕನೂರ ಕೊಲೆ


ಹತ್ತೇ ವರ್ಷದಲ್ಲಿ ಈ ಭಾಗದ ಪ್ರಮುಖ ರಾಜಕಾರಣಿಗಳ ಒಡನಾಟದಿಂದ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದು ಆರು ವರ್ಷದ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ರೇಷ್ಮಾ ಏಕಾಏಕಿ ಕೊಲೆಯಾಗಿರುವುದು ತೀವ್ರ ಚರ್ಚೆಗೆ ಕಾರಣವಾಗಿದ್ದು, ಸೊಲಾಪುರ ಮೂಲದ ವ್ಯಕ್ತಿ ವಿರುದ್ದ ಮೊಕದ್ದಮೆ ದಾಖಲಾಗಿದೆ. ಇದರಿಂದ ಪರಿಚಿತರೇ ಕೊಲೆ ಮಾಡಿರಬಹುದು ಎನ್ನುವ ಅನುಮಾನ ಪೊಲೀಸರಲ್ಲಿದ್ದು. ಇದನ್ನಾಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಘಟನೆ ಆಗಿದ್ದು ಹೇಗೆ?

ಗುರುವಾರ ರಾತ್ರಿ 12ರ ವೇಳೆ ಮೊಬೈಲ್‌ ಕರೆಯೊಂದು ಬಂದಿದ್ದರಿಂದ ರೇಷ್ಮಾ, ಪರಿಚಯಸ್ಥರನ್ನು ಭೇಟಿಯಾಗಿ ಬರುವುದಾಗಿ ನಮಗೆ ತಿಳಿಸಿ ವಿಜಯಪುರದ ಮನೆಯಿಂದ ಹೊರಹೋಗಿದ್ದರು. ಆದರೆ ಶುಕ್ರವಾರ ಬೆಳಗ್ಗೆಯಾದರೂ ಬಂದಿರಲಿಲ್ಲ.10.30ರ ಹೊತ್ತಿಗೆ ಶವವಾಗಿ ಪತ್ತೆಯಾಗಿದ್ದು, ಪತ್ನಿಯನ್ನು ಕೊಲೆ ಮಾಡಿರುವುದಾಗಿ ಆಕೆಯ ಪತಿ ಖಾಜಾ ಬಂದೇನವಾಜ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ರೇಷ್ಮಾಳನ್ನು ಮತ್ತೊಂದು ಕಡೆ ಕೊಲೆ ಮಾಡಿ, ಪ್ರಕರಣ ಮುಚ್ಚಿಹಾಕಲು ಶವವನ್ನು ಕೊಲ್ಹಾರ-ಕೊರ್ತಿ ಸೇತುವೆಯಲ್ಲಿ ಕೃಷ್ಣಾ ನದಿಗೆ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಕೃಷ್ಣಾ ನದಿಯಲ್ಲಿ ನೀರಿಲ್ಲದಿರುವುದರಿಂದ ಶವ ಸೇತುವೆ ಕೆಳಗಿನ ನೆಲದಲ್ಲಿ ಬಿದ್ದಿದೆ. ಎತ್ತರದ ಸೇತುವೆಯಿಂದ ಎಸೆದಿದ್ದು ರೇಷ್ಮಾಳ ಕೈ ಮೂಳೆ ಮುರಿದಿದೆ. ಕೈಗೆ ಮಚ್ಚಿನಿಂದ ಹೊಡೆದಿರುವ ಮತ್ತು ಮುಖಕ್ಕೆ ಗುದ್ದಿರುವ ಗಾಯಗಳಾಗಿದ್ದು, ಊದಿದ ಸ್ಥಿತಿಯಲ್ಲಿ ದೇಹ ದೊರೆತಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ನೇಮಗೌಡ, ಬಸವನಬಾಗೇವಾಡಿ ಡಿವೈಎಸ್‌ಪಿ ಮಹೇಶ್ವರಗೌಡ, ಸಿಪಿಐ ಮಹಾದೇವ ಶಿರಹಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ರೇಷ್ಮಾಳ ಪತಿ ಖಾಜಾ ಬಂದೇನವಾಜ್‌ ಹಾಗೂ ಸಂಬಂಧಿಕರನ್ನು ಸ್ಥಳಕ್ಕೆ ಕರೆಯಿಸಿದ ಪೊಲೀಸರು ಅವರ ಸಹಾಯದಿಂದ ಶವ ರೇಷ್ಮಾಳದ್ದೇ ಎಂದು ಖಚಿತಪಡಿಸಿಕೊಂಡರು. ಬಳಿಕ ವಿಜಯಪುರದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ರೇಷ್ಮಾ ಪಡೇಕನೂರ ಶವ ಕೊಲ್ಹಾರದ ಸೇತುವ ಕೆಳಗೆ ಪತ್ತೆಯಾಗಿದ್ದು , ಆಕೆಯ ಪತಿ ಕೊಲೆ ಮಾಡಿರುವುದಾಗಿ ದೂರು ನೀಡಿ, ಕೆಲವರು ಹೆಸರನ್ನು ತಿಳಿಸಿದ್ದಾರೆ. ಅದರನ್ವಯ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ.

ಬಿ.ಎಸ್‌.ನೇಮಗೌಡ, ಅಡಿಷನಲ್‌ ಎಸ್ಪಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ