ಆ್ಯಪ್ನಗರ

ರೋಡ್‌ ಸೈಕ್ಲಿಂಗ್‌ ಸ್ಪರ್ಧೆಯಲ್ಲಿಅಪಘಾತ

ವಿಜಯಪುರ: ಗುಮ್ಮಟ ನಗರಿಯಲ್ಲಿನಡೆದಿರುವ ಅಖಿಲ ಭಾರತ ಅಂತರ್‌ ವಿವಿಗಳ ಮಹಿಳಾ ರೋಡ ಸೈಕ್ಲಿಂಗ್‌ ಕ್ರೀಡಾಕೂಟದ ಸ್ಪರ್ಧೆಯಲ್ಲಿಭಾಗವಹಿಸಿದ್ದ ಅಂತಾರಾಜ್ಯದ ಸೈಕ್ಲಿಸ್ಟ್‌ಗಳು ಅಪಘಾತಕ್ಕೀಡಾಗಿದ್ದರಿಂದ 6 ಜನ ಸೈಕ್ಲಿಸ್ಟ್‌ಗಳು ಗಾಯಗೊಂಡ ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 50ರ ಹಿಟ್ನಳ್ಳಿಯಲ್ಲಿಸೋಮವಾರ ಬೆಳಗ್ಗೆ ನಡೆದಿದೆ.

Vijaya Karnataka 11 Feb 2020, 5:00 am
ವಿಜಯಪುರ: ಗುಮ್ಮಟ ನಗರಿಯಲ್ಲಿನಡೆದಿರುವ ಅಖಿಲ ಭಾರತ ಅಂತರ್‌ ವಿವಿಗಳ ಮಹಿಳಾ ರೋಡ ಸೈಕ್ಲಿಂಗ್‌ ಕ್ರೀಡಾಕೂಟದ ಸ್ಪರ್ಧೆಯಲ್ಲಿಭಾಗವಹಿಸಿದ್ದ ಅಂತಾರಾಜ್ಯದ ಸೈಕ್ಲಿಸ್ಟ್‌ಗಳು ಅಪಘಾತಕ್ಕೀಡಾಗಿದ್ದರಿಂದ 6 ಜನ ಸೈಕ್ಲಿಸ್ಟ್‌ಗಳು ಗಾಯಗೊಂಡ ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 50ರ ಹಿಟ್ನಳ್ಳಿಯಲ್ಲಿಸೋಮವಾರ ಬೆಳಗ್ಗೆ ನಡೆದಿದೆ.
Vijaya Karnataka Web road cycling competition
ರೋಡ್‌ ಸೈಕ್ಲಿಂಗ್‌ ಸ್ಪರ್ಧೆಯಲ್ಲಿಅಪಘಾತ


ರಾಜಸ್ತಾನದ ಬಿಕಾನೇರ ಮಹಾರಾಜಾ ಗಂಜ ವಿವಿಯ ಮುಸ್ಕಾನ್‌ ಹಾಗೂ ಕವಿತಾ, ಬೆಳಗಾವಿ ರಾಣಿಚನ್ನಮ್ಮ ವಿವಿಯ ದಾನೇಶ್ವರಿ ಪಾಯಣ್ಣವರ, ಪಂಜಾಬನ ಪಟಿಯಾಲ ವಿವಿಯ ಜಾಸ್ಮಿನ್‌ ಮತ್ತು ಅಮೃತಸರನ ಗುರುನಾನಕ ದೇವ ವಿವಿಯ ಮುಕುಲಾ, ಹರಿಯಾಣದ ಕುರುಕ್ಷೇತ್ರ ವಿವಿಯ ನಮ್ರತಾ ಗಾಯಗೊಂಡ ಸೈಕ್ಲಿಸ್ಟ್‌ಗಳು.

ಆಸ್ಪತ್ರೆಗೆ ದಾಖಲು:

ಸಣ್ಣ-ಪುಟ್ಟ ಗಾಯಗಳಾಗಿರುವ ಸೈಕ್ಲಿಸ್ಟ್‌ಗಳನ್ನು ತಕ್ಷಣಕ್ಕೆ ವಿಶೇಷ ಅಂಬ್ಯುಲೆನ್ಸ್‌ ಮೂಲಕ ನಗರದ ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಅಧೀಕ್ಷಕ ವಿಜಯಕುಮಾರ ಕಲ್ಯಾಣಪ್ಪಗೋಳ ವಿಜಯ ಕರ್ನಾಟಕಕ್ಕೆ ತಿಳಿಸಿದರು.

ಘಟನೆ ವಿವರ:

ನಗರ ಹೊರವಲಯದ ಟೋಲ್‌ ಪ್ಲಾಜಾ ಬಳಿ ಮಾಸ್‌ ಸ್ಟಾಟ್‌ 50 ಕಿ.ಮೀ ಸೈಕ್ಲಿಂಗ್‌ ಸ್ಪರ್ಧೆ ನಡೆದಿತ್ತು. ಸ್ಪರ್ಧೆಯಲ್ಲಿಭಾಗವಹಿಸಿದ್ದ ಕ್ರೀಡಾ ಪಟುಗಳು ಶರವೇಗದಲ್ಲಿಸೈಕಲ್‌ ಓಡಿಸುತ್ತಿದ್ದರು. ಸ್ಪರ್ಧೆಯ ಕೊನೆಯ ನಿಮಿಷದಲ್ಲಿಒಬ್ಬ ಸ್ಪರ್ಧಾಳುವಿನ ಸೈಕಲ್‌ ಇನ್ನೊಬ್ಬ ಸ್ಪರ್ಧಾಳುವಿನ ಸೈಕಲ್‌ಗೆ ತಾಗಿದ್ದರಿಂದ ಸೈಕಲ್‌ ಮೇಲೆ ನಿಯಂತ್ರಣ ಕಳೆದುಕೊಂಡು ನೆಲಕ್ಕುರುಳಿದ್ದಾರೆ. ಇದೇ ವೇಳೆ ಅವರ ಹಿಂದಿದ್ದ ಸೈಕ್ಲಿಸ್ಟ್‌ಗಳು ಇವರಿಗೆ ಡಿಕ್ಕಿ ಹೊಡೆಸಿದ್ದರಿಂದ ಕೆಳಕ್ಕೆ ಬಿದ್ದು, ಗಾಯಗೊಂಡಿದ್ದಾರೆ. ಒಬ್ಬ ಸೈಕ್ಲಿಸ್ಟ್‌ಗೆ ಹಲ್ಲುಮುರಿದಿದ್ದು, ಇನ್ನೊಬ್ಬರಿಗೆ ಭುಜದ ಮೂಲೆಗೆ ಪೆಟ್ಟಾಗಿದೆ. ಇನ್ನುಳಿದ ಸೈಕ್ಲಿಸ್ಟ್‌ಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಘಟನೆಯಲ್ಲಿಗಾಯಗೊಂಡ 6 ಸ್ಪರ್ಧಾಳುಗಳನ್ನು ಕಾರ್ಯನಿರತ ಅಂಬುಲೆನ್ಸ್‌ನಲ್ಲಿತಕ್ಷಣ ಬಿಎಲ್‌ಡಿಇ ಆಸ್ಪತ್ರೆಗೆ ಒಳರೋಗಿಗಳಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಗಾಯಗಳಾಗಿಲ್ಲ. ಕ್ರೀಡಾಪಟುಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಉಪವೈದ್ಯಕೀಯ ಅಧೀಕ್ಷಕ ಡಾ.ವಿಜಯಕುಮಾರ ವಾರದ ತಿಳಿಸಿದ್ದಾರೆ.

ಸ್ಪರ್ಧೆ ಮುಂದುವರಿಕೆ:

ಘಟನೆ ಬಳಿಕ ಸೈಕ್ಲಿಂಗ್‌ ಸ್ಪರ್ಧೆ ಮುಂದುವರಿಯಿತು. ಸ್ಪರ್ಧೆಯಲ್ಲಿಪ್ರಥಮ ಪಂಜಾಬ್‌ ಪಟಿಯಾಲಾ ವಿವಿಯ ಬ್ರಿಸ್ಟಿ ಕಂಗಕೊನಾ, ದ್ವಿತೀಯ ಬೆಳಗಾವಿ ರಾಣಿ ಚನ್ನಮ್ಮ ವಿವಿಯ ಸಾವಿತ್ರಿ ಹೆಬ್ಬಾಳಹಟ್ಟಿ ಹಾಗೂ ತೃತೀಯ ಮುಂಬಯಿನ ಶ್ರೀಮತಿ ನಿತಿಬಾಯಿ ದಾಮೋದರ್‌ ಠಾಕರ್ಸಿ ವಿವಿಯ ರಂಜಿತಾ ಘೋರ್ಪಡೆ ಸ್ಥಾನಗಳನ್ನು ಗಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ