ಆ್ಯಪ್ನಗರ

ರೋಹಿಣಿ ಮಳೆ ತಂದ ಹರ್ಷ

ಜಿಲ್ಲೆಯಾದ್ಯಂತ ಭಾನುವಾರ ಹದವಾಗಿ ಸುರಿದ ರೋಹಿಣಿ ಮಳೆ ಸೋಮವಾರವೂ ಅನೇಕ ಕಡೆಗಳಲ್ಲಿಸುರಿದು ಬಿಸಿಲಿನಿಂದ ಬಸವಳಿಗೆ ಜನತೆಗೆ ತಂಪೆರದರೆ, ರೈತರಲ್ಲಿಮುಂಗಾರು ಬಿತ್ತನೆ ಕೈಗೊಳ್ಳುವ ಖುಷಿ ತಂದಿದೆ.

Vijaya Karnataka Web 2 Jun 2020, 5:00 am
ವಿಜಯಪುರ: ಜಿಲ್ಲೆಯಾದ್ಯಂತ ಭಾನುವಾರ ಹದವಾಗಿ ಸುರಿದ ರೋಹಿಣಿ ಮಳೆ ಸೋಮವಾರವೂ ಅನೇಕ ಕಡೆಗಳಲ್ಲಿಸುರಿದು ಬಿಸಿಲಿನಿಂದ ಬಸವಳಿಗೆ ಜನತೆಗೆ ತಂಪೆರದರೆ, ರೈತರಲ್ಲಿಮುಂಗಾರು ಬಿತ್ತನೆ ಕೈಗೊಳ್ಳುವ ಖುಷಿ ತಂದಿದೆ.
Vijaya Karnataka Web RAIN-BJP1 (5)_38


ಸೋಮವಾರ ಮಧ್ಯಾಹ್ನದ ನಂತರ ಬಿಸಿಲು ಪ್ರಮಾಣ ಕಡಿಮೆಯಾಗಿ ಮೋಡ ಕವಿದ ವಾತಾವರಣ ಇತ್ತು. ಸಂಜೆ 6ರ ವೇಳೆ ವಿಜಯಪುರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸಾಧಾರಣ ಮಳೆ ಸುರಿಯಿತು. ನಿಡಗುಂದಿ ಭಾಗದಲ್ಲೂಮಳೆಯಾಗಿದೆ.

ಬಸವನಬಾಗೇವಾಡಿ ಭಾಗದಲ್ಲೂ ಸಂಜೆ ಮೋಡ ಕವಿದ ವಾತಾವರಣ ಇದ್ದು , ಮಳೆಯಾಗುವ ಸೂಚನೆ ಇತ್ತು.

ಬಿತ್ತನೆ ಆರಂಭಕ್ಕೆ ಕ್ಷಣಗಣನೆ: ಮೇ ತಿಂಗಳ 3ನೇ ವಾರದಲ್ಲಿಜಿಲ್ಲೆಯಾದ್ಯಂತ 2-3 ಬಾರಿ ಕೃತಿಕಾ ಮಳೆಯಾಗಿದ್ದರಿಂದ ರೈತರು ಮುಂಗಾರು ಬಿತ್ತೆನೆಗೆ ಜಮೀನು ಹದಗೊಳಿಸಿ, ಮಳೆಗಾಗಿ ಕಾಯುತ್ತಿದ್ದರು. ಆದರೀಗ ರೋಹಿಣಿ ಮಳೆ ಭಾನುವಾರ ಹಾಗೂ ಸೋಮವಾರ ಜಿಲ್ಲೆಯಾದ್ಯಂತ ಸುರಿದಿದೆ.

ಜಿಲ್ಲೆಯಾದ್ಯಂತ 10 ಮಿಮೀ ಮಳೆ : ಭಾನುವಾರ ಜಿಲ್ಲೆಯಾದ್ಯಂತ ಸರಾಸರಿ 10 ಮಿಮೀ ಮಳೆಯಾಗಿದೆ. ಸೋಮವಾರ ಸಂಜೆ ಕೂಡ ಎಲ್ಲೆಡೆ ಚದುರಿದ ಮಳೆಯಾಗಿದೆ.

ಜನವರಿಯಿಂದ ಮೇ ತನಕ 172 ಮಿಮೀ ಮಳೆಯಾಗಬೇಕಿದ್ದು , ಈವರೆಗೆ 96 ಮಿಮೀ ಮಳೆಯಾಗಿದೆ. ಮೇ ತಿಂಗಳಲ್ಲಿ 36 ಮಿಮೀ ಮಳೆಯಾಗಿದೆ ಎಂದು ಕೃಷಿ ಇಲಾಖಾಧಿಕಾರಿಗಳು ತಿಳಿಸಿದರು.

ಮುಂಗಾರು ಪ್ರವೇಶ ಹಾಗೂ ನಿಸರ್ಗ ಚಂಡಮಾರುತ ಪರಿಣಾಮ ಮಳೆಯಾಗುತ್ತಿದೆ. ಇನ್ನೂ 4 ದಿನ ಜಿಲ್ಲೆಯಲ್ಲಿಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ವರದಿಯಲ್ಲಿದೆ. ಉತ್ತಮ ಮಳೆಯ ನಿರೀಕ್ಷೆಯಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶಿವಕುಮಾರ್‌ ತಿಳಿಸಿದರು.

ರೈತ ಸಂಪರ್ಕ ಕೇಂದ್ರಗಳಲ್ಲಿಮೊದಲಿಗೆ ಹೆಸರು ಮತ್ತು ತೊಗರಿ ಬಿತ್ತನೆ ಬೀಜ ವಿತರಣೆ ಕ್ರಮ ಕೈಗೊಳ್ಳಲಾಗಿದೆ. 2 ದಿನಗಳಲ್ಲಿಜಿಲ್ಲೆಯಾದ್ಯಂತ ಪೂರ್ಣ ಪ್ರಮಾಣದಲ್ಲಿಬಿತ್ತನೆ ಬೀಜ, ಗೊಬ್ಬರ ವಿತರಣೆ ಆರಂಭವಾಗಲಿದೆ ಎಂದರು.

ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯಾಗುವುದು ಕಡಿಮೆ. ಜೂ.7ರ ನಂತರ ಮುಂಗಾರು ಮಳೆಯಾಗುವುದು ವಾಡಿಕೆ. ಆದರೆ ಈ ವರ್ಷ ಕೃತಿಕಾ ಹಾಗೂ ರೋಹಿಣಿ ಮಳೆಯಾಗಿದ್ದರಿಂದ ಬಿತ್ತನೆಯ ಖಾತ್ರಿ ಮೂಡಿಸಿದೆ. ಸಾಕಷ್ಟು ರೈತರು ಈಗಾಗಲೇ ಭೂಮಿ ಹದಗೊಳಿಸಿದ್ದು , ಮೊದಲಿಗೆ ಕಡಿಮೆ ಅವಧಿಯ ಹೆಸರು ಬಿತ್ತನೆ ಕೈಗೊಳ್ಳಲಿದ್ದಾರೆ.

ಜಿಲ್ಲೆಯಲ್ಲಿ4.84 ಲಕ್ಷ ಹೆಕ್ಟೇರ್‌ ಮುಂಗಾರು ಬಿತ್ತನೆ ಗುರಿ ಇದ್ದು , 2.80 ಲಕ್ಷ ಹೆಕ್ಟೇರ್‌ ತೊಗರಿ, 30 ಸಾವಿರ ಹೆಕ್ಟೇರ್‌ ಮೆಕ್ಕೆಜೋಳ, ಉಳಿದಂತೆ ಸಜ್ಜೆ, ಹೆಸರು, ಸೂರ್ಯಕಾಂತಿ ಬಿತ್ತನೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ