ಆ್ಯಪ್ನಗರ

ನುಗ್ಗಿದ ಮಳೆ ನೀರು, ತೊಗರಿ ಬೆಳೆ ಜಲಾವೃತ

ಬಸವನಬಾಗೇವಾಡಿ: ಇಲ್ಲಿನ ತಹಸೀಲ್ದಾರ್‌ ವಸತಿ ಗೃಹದ ಸುತ್ತಲಿನ ನಾನಾ ಮನೆಗಳು, ಸರಕಾರಿ ಉರ್ದು ಶಾಲೆ ಆವರಣ, ಪಕ್ಕದ ವಸತಿ ನಿಲಯ ಆವರಣಕ್ಕೆ ನುಗ್ಗಿದ ಮಳೆ ನೀರಿನಿಂದ ಜನರು ಪರದಾಡಿದರು.

Vijaya Karnataka 20 Oct 2019, 5:00 am
ಬಸವನಬಾಗೇವಾಡಿ: ಇಲ್ಲಿನ ತಹಸೀಲ್ದಾರ್‌ ವಸತಿ ಗೃಹದ ಸುತ್ತಲಿನ ನಾನಾ ಮನೆಗಳು, ಸರಕಾರಿ ಉರ್ದು ಶಾಲೆ ಆವರಣ, ಪಕ್ಕದ ವಸತಿ ನಿಲಯ ಆವರಣಕ್ಕೆ ನುಗ್ಗಿದ ಮಳೆ ನೀರಿನಿಂದ ಜನರು ಪರದಾಡಿದರು.
Vijaya Karnataka Web rushing rain water bark crop water
ನುಗ್ಗಿದ ಮಳೆ ನೀರು, ತೊಗರಿ ಬೆಳೆ ಜಲಾವೃತ


ಶುಕ್ರವಾರ ರಾತ್ರಿ ಸುರಿದ ರಭಸದ ಮಳೆ ಹಲವು ಆವಾಂತರ ಸೃಷ್ಟಿಸಿತು. ಆದರೆ, ಜನರು ತೊಂದರೆಗೆ ಒಳಗಾಗಲು ಅಧಿಕಾರಿಗಳ ಅವೈಜ್ಞಾನಿಕ ಕ್ರಮವೇ ಕಾರಣ. ಈ ಬಗ್ಗೆ ಜನರು ಪದೇ ಪದೆ ಆಕ್ರೋಶ ಹೊರ ಹಾಕುತ್ತಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ.

ಮುಖ್ಯಾಧಿಕಾರಿ ಸೌದಾಗರ ಹಿಂದಿನಿಂದಲೂ ಕ್ರಮದ ಭರವಸೆ ನೀಡುತ್ತ ಬಂದಿದ್ದಾರೆ. ಆದರೆ, ಕೆಲಸವಾಗುತ್ತಿಲ್ಲ. ಇನ್ನಾದರೂ ಕ್ರಮ ಕೈಗೊಳ್ಳಿ ಎಂದು ಮನೆಗಳಿಗೆ ಮಳೆ ನೀರು ಹೊಕ್ಕು ತೊಂದರೆ ಅನುಭವಿಸಿದ ಜನರು ಮುಖ್ಯಾಧಿಕಾರಿಗಳನ್ನು ಮತ್ತೊಮ್ಮೆ ಖುದ್ದು ಭೇಟಿ ಮಾಡಿ ಕ್ರಮಕೈಗೊಳ್ಳಲು ಆಗ್ರಹಿಸಿದರು. ಈ ಬಾರಿ ಹಳೆ ಬಂಡೆಪ್ಪನ ಬೋಕಿ ಹಾಗೂ ಅದರ ಪಕ್ಕದ ವಿಶಾಲ ಜಾಗೆಯ ಮೂಲಕ ಮಳೆ ನೀರು ಹರಿಯುತ್ತಿದೆ. ಈ ರಭಸದ ನೀರು ಈಗಿದ್ದ ಸಣ್ಣ ಚರಂಡಿಯಲ್ಲಿಸಾಕಾಗದೇ ನೀರು ಹೊರಗೆ ಹರಿಯುತ್ತಿದೆ ಎಂದು ದೂರಿದರು.

ದೊಡ್ಡ ಮೋರಿ ನಿರ್ಮಾಣವಾಗಲಿ:
ಉರ್ದುಶಾಲೆ, ವಸತಿ ನಿಲಯ ಮೂಲೆಯಲ್ಲಿರುವ ಮಳೆ ನೀರು ಹರಿದು ಹೋಗಲಿರುವ ಸಣ್ಣದಾದ ಮೋರಿ(ಕಿಂಡಿ) ದೊಡ್ಡದಾಗಿ ನಿರ್ಮಿಸಲು ಜನರು ಆಗ್ರಹಿಸಿದ್ದಾರೆ. ಶನಿವಾರ ಜೆಸಿಬಿ ಮೂಲಕ ನಂದಿವನ ಎದುರಿನ ಆವರಣಗೋಡೆ ಪುರಸಭೆ ಸಿಬ್ಬಂದಿ ಕೆಡವದೇ ಇದ್ದಿದ್ದರೆ ಶಾಲೆ ಆವರಣದ ತುಂಬೆಲ್ಲಾನಿಂತ ಮೊಳಕಾಲುದ್ದುದ ನೀರು ಹಿಂದಿನ ಮನೆಗಳಿಗೂ ಹೊಕ್ಕು ಜನರಿಗೆ ಮತ್ತಷ್ಟು ತೊಂದರೆ ಮಾಡುತ್ತಿತ್ತು. ಎರಡನೆ ಬಾರಿ ಆವರಣ ಗೋಡೆ ಒಡೆಯಲಾಗಿದ್ದು , ಈ ಬಾರಿಯಾದರೂ ಪುರಸಭೆ ಶಾಶ್ವತ ಕೆಲಸ ಮಾಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ನೀರಲ್ಲಿನಿಂತ ತೊಗರಿ
ಶುಕ್ರವಾರ ರಾತ್ರಿ ಸುರಿದ ಮಳೆಗೆ ಬಸವನಬಾಗೇವಾಡಿ ಭಾಗದ ಜಮೀನುಗಳಲ್ಲಿನ ತೊಗರಿ ಬೆಳೆ ನೀರಲ್ಲಿನಿಂತಿದೆ. ಜತೆಗೆ ಮೆಕ್ಕೆಜೋಳ, ಶೇಂಗಾ, ಹಾನಿಯಾಗುವ ಆತಂಕವನ್ನು ರೈತರು ಹೊರ ಹಾಕಿದ್ದಾರೆ. ಈಗ ಮಳೆ ನೀರಿನಿಂದ ತೊಗರಿ ಬೆಳೆ ನಿಂತರೆ, ಮೆಕ್ಕೆಜೋಳ ರಾಶಿ ಮಾಡಲು ತೊಂದರೆಯಾಗಿದೆ ಎನ್ನುತ್ತಾರೆ. ಆದರೆ, ಮಳೆಯಿಂದ ಜಾನುವಾರುಗಳಿಗೆ ಹಸಿರು ಮೇವು ಮೇಯಿಸಲು ಅನುಕೂಲವಾಗುತ್ತಿದೆ ಎಂದೂ ಅನ್ನದಾತರು ಹೇಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ