ಆ್ಯಪ್ನಗರ

ಸಹಸ್ರಾರು ದಾದಿಯರ ಸೇವೆಗೊಂದು ಸಲಾಂ

ನನ್ನ ಕೂಸಿಗೆ ಏಳು ತಿಂಗಳು. ಒಂದು ತಿಂಗಳೇ ದಾಟಿತು ಕೊರೊನಾ ಕೆಲಸಕ್ಕೆ ಬಂದು. ಮನೆಯಲ್ಲಿಮಗು. ನಾನಿಲ್ಲ. ನಮ್ಮಮ್ಮನೇ ಮಗುವಿನ ತಾಯಿಯೀಗ. ದೇಶದ ಕೆಲಸ ಬಂದಾಗ ಮಕ್ಕಳು, ಕುಟುಂಬ ನಂತರವೇ ಅಲ್ಲವೇ ?

Vijaya Karnataka Web 12 May 2020, 5:00 am
ಇಮಾಂಬಿ ನದಾಫ್‌, ವಿಜಯಪುರ: ನನ್ನ ಕೂಸಿಗೆ ಏಳು ತಿಂಗಳು. ಒಂದು ತಿಂಗಳೇ ದಾಟಿತು ಕೊರೊನಾ ಕೆಲಸಕ್ಕೆ ಬಂದು. ಮನೆಯಲ್ಲಿಮಗು. ನಾನಿಲ್ಲ. ನಮ್ಮಮ್ಮನೇ ಮಗುವಿನ ತಾಯಿಯೀಗ. ದೇಶದ ಕೆಲಸ ಬಂದಾಗ ಮಕ್ಕಳು, ಕುಟುಂಬ ನಂತರವೇ ಅಲ್ಲವೇ ?
Vijaya Karnataka Web salam is a service of millennial nurses
ಸಹಸ್ರಾರು ದಾದಿಯರ ಸೇವೆಗೊಂದು ಸಲಾಂ


ವಿಜಯಪುರ ಜಿಲ್ಲೆಬಬಲೇಶ್ವರ ತಾಲೂಕಿನಲ್ಲಿಕೊರೊನಾ ಸೇವೆಗೆ ನಿರತರಾಗಿರುವ ನರ್ಸ್‌ ಸೈನಾಜ್‌ ಬಾನು ಕನ್ನೂರ ಹೀಗೆ ಹೇಳುವಾಗ ಅವರ ಕಣ್ಣಲ್ಲಿನೀರು ಜಾರಿತು. ಕೊರೊನಾ ಬೇಗ ಮುಗಿದು ಸಹಜಸ್ಥಿತಿಗೆ ಬರಲಿ ಎನ್ನುವ ಹಂಬಲ ಅವರ ಮಾತಿನಲ್ಲಿಇಣುಕುತ್ತಿತ್ತು. ಕರ್ನಾಟಕದ ನಾನಾ ಜಿಲ್ಲೆಗಳಲ್ಲಿಹೀಗೆ ಸೇವಾ ನಿರತರಾಗಿರುವ ಆರು ಸಾವಿರಕ್ಕೂ ಹೆಚ್ಚು ದಾದಿಯರ ಭಾವನೆಯೂ ಇದೇ ಹೌದು.

ಅಮ್ಮಾ... ನೀನು ಯಾವಾಗ ಬರ್ತಿಯಾ, ನೋಡುವ ಆಸೆಯಾಗಿದೆ.. ಎಂದು ಪುಟ್ಟ ಕಂದಮ್ಮಗಳು ಕೇಳುವ ಪ್ರಶ್ನೆಗೆ ಕೋವಿಡ್‌ -19 ಕರ್ತವ್ಯ ನಿರತ ಸಹಸ್ರಾರು ದಾದಿಯರು ತೇವಗಣ್ಣು ಮಾಡಿಕೊಂಡು ಮೌನಕ್ಕೆ ಜಾರುತ್ತಿದ್ದಾರೆ.

ಕೋವಿಡ್‌ಗೆ ಸಿಲುಕಿ ಜಿಲ್ಲಾಸ್ಪತ್ರೆಗಳಲ್ಲಿಚಿಕಿತ್ಸೆ ಪಡೆಯುತ್ತಿರುವ ಜನರ ನಡುವೆ ಮಕ್ಕಳು ಹಾಗೂ ಮನೆಯವರನ್ನು ತಿಂಗಳುಗಟ್ಟಲೇ ದೂರ ಮಾಡಿ ಸೇವೆ ಮಾಡುವ ದಾದಿಯರು ಯಾವುದೇ ದಿನವನ್ನೂ ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಅಂಬೆಗಾಲಿಡುವ ಹಾಲುಗೆನ್ನೆ ನೂರಾರು ಕಂದಮ್ಮಗಳು ಪುಟ್ಟ ಹೆಜ್ಜೆ ಹಾಕುತ್ತ ಅಮ್ಮನ ಸೆರಗು ಹಿಡಿಯಲು ಹಂಬಲಿಸುವ, ಅಮ್ಮನ ತುತ್ತಿಗಾಗಿ ಹಠ ಮಾಡುವ ಕುಡಿಗಳನ್ನು 50 ದಿನದಿಂದ ಸಂತೈಸಲು ಆಗುತ್ತಲೇ ಇಲ್ಲ.

ಕೊರೊನಾದ ಅಟ್ಟಹಾಸಕ್ಕೆ ಮಟ್ಟಹಾಕಲು ಟೊಂಕಕಟ್ಟಿ ನಿಂತಿರುವ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿಕರ್ತವ್ಯ ನಿರ್ವಹಿಸುವ ಸಾವಿರಾರು ಮಹಿಳಾ ವೈದ್ಯರು, ನರ್ಸ ಗಳು ಹಾಗೂ ಆಶಾಗಳು ತಮ್ಮ ಮಕ್ಕಳೊಂದಿಗೆ ಆಚರಿಸದೇ ರೋಗಿಗಳ ಆರೈಕೆಯಲ್ಲಿನಿರತರಾದರೆ ಅನೇಕ ಮಕ್ಕಳು ತಮ್ಮ ತಾಯಿಗೆ ಸಪ್ರೈರ್‍ಜ್‌ ಕೊಡಲು ತುದಿಗಾಲಲ್ಲಿನಿಂತಿದ್ದಾರೆ.

ಕರುಳು ತೊರೆದ ಗಟ್ಟಿಗಿತ್ತಿಯರು
ರಾಜ್ಯದಲ್ಲಿಕೋವಿಡ್‌ ಕರ್ತವ್ಯದಲ್ಲಿ2 ಸಾವಿರ ಮಹಿಳಾ ವೈದ್ಯರು, 6 ಸಾವಿರ ನರ್ಸ್‌ ಗಳು, 9 ಸಾವಿರ ಎಎನ್‌ಎಂಗಳು ಹಾಗೂ 41 ಸಾವಿರ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿಶೇ.60 ರಷ್ಟು ಮಹಿಳೆಯರು ತಮ್ಮ ಮಕ್ಕಳನ್ನು ಬಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಮೊದಲು ರೋಗಿ ನಂತರ ಮಕ್ಕಳು, ಮನೆ ಎಂದು ಕೊರೊನಾ ಸೋಂಕಿತರಿಗೆ ಚಿಕಿತ್ಸೆ, ಜಾಗೃತಿ ಕಾರ್ಯದಲ್ಲಿತೊಡಗಿದ್ದಾರೆ.

ಆಚರಿಸಲು ಅವಕಾಶ ಇಲ್ಲ
ಈಗಾಗಲೇ ಬೆಳಗಾವಿ, ಶಿವಮೊಗ್ಗ, ಗದಗ ಸೇರಿದಂತೆ ಇನ್ನಿತರ ಜಿಲ್ಲೆಯ ಪುಟ್ಟ, ಪುಟ್ಟ ಕಂದಮ್ಮಗಳು ತಮ್ಮ ತಾಯಿಗೆ ಯಾವಾಗ ಬರ್ತಿಯಾ ಅಮ್ಮಾ ಎಂದು ಕೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಸಾಕಷ್ಟು ವೈರಲ್‌ ಆಗಿವೆ.

ಕೊರೊನಾ ಹಿನ್ನೆಲೆಯಲ್ಲಿಆಸ್ಪತ್ರೆಯಲ್ಲಾಗಲಿ, ಅವರು ತಂಗಿದ ತಾಣಗಳಲ್ಲಾಗಲಿ ಯಾವುದೇ ಸಂಭ್ರಮದ ದಿನ ಆಚರಿಸಲು ಅವಕಾಶವಿಲ್ಲ. ಅವರಿಗೆ ಸಮಯವೇ ಸಿಗುವುದಿಲ್ಲ. ಕೆಲವರಿಗಂತೂ ಸರಿಯಾಗಿ ಊಟ, ತಿಂಡಿ ಮಾಡಲು ಸಮಯ ಸಿಗುತ್ತಿಲ್ಲ. ವೈದ್ಯರು, ದಾದಿಯರಿಗೆ ರೋಗಿ ಚಿಕಿತ್ಸೆ, ಗುಣಮುಖಮಾಡುವುದು ಮುಖ್ಯ ಹೊರತು ದಿನಾಚರಣೆ ಅಲ್ಲ. ಅವರ ಸೇವೆಗೆ ಬೆಲೆ ಕಟ್ಟಲಾಗದು ಎನ್ನುತ್ತಾರೆ ಅಧಿಕಾರಿಗಳು.

ಆರೋಗ್ಯ ಇಲಾಖೆ ದಾದಿಯರು ಸೇರಿ ಸಾವಿರಾರು ಮಹಿಳೆಯರು ಪುಟ್ಟ ಮಕ್ಕಳನ್ನು ಬಿಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ. ಅವರೆ ಸೇವೆಗೆ ನಾವು ಎಷ್ಟು ಧನ್ಯವಾದ ಹೇಳಿದರೂ ಸಾಲದು. ಮಕ್ಕಳನ್ನು ಬಿಟ್ಟು ಸೇವೆ ಸಲ್ಲಿಸುವ ಅವರ ತ್ಯಾಗ, ಕಾರ್ಯ ಶ್ಲಾಘನೀಯ.
-ಡಾ.ರಾಜಕುಮಾರ.ಎನ್‌, ಉಪನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು.

ನಂದು ಏಳು ತಿಂಗಳ ಗಂಡು ಮಗುವಿದೆ. ಕೊರೊನಾ ಡ್ಯೂಟಿ ಹಾಕಿದಾರೆ. ಒಂದು ತಿಂಗಳ ಆಯ್ತು ಮನೆಗೆ ಹೋಗಿಲ್ಲ. ನನ್ನ ಮಗನನ್ನು ನಮ್ಮ ಅಮ್ಮಾ ನೋಡ್ಕೋತಾರು, ಗಂಜಿ, ಅನ್ನಾ, ಹಾಲು ಹಾಕ್ತಾರು. ಮನೆ, ಮನೆಗೆ ಹೋಗಿ ಜಾಗೃತಿ ಮೂಡಿಸುವುದು, ಜ್ವರ, ಕೆಮ್ಮು ಹಾಗೂ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿರುವವರ ಬಗ್ಗೆ ಮಾಹಿತಿ ಸಂಗ್ರಹಿಸುವುದು ನಮ್ಮ ಕೆಲಸ.
-ಸೈನಾಜ್‌ ಬಾನು ಕನ್ನೂರ, ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್‌, ಕಣಬೂರ, ಬಬಲೇಶ್ವರ ತಾಲೂಕು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ