ಆ್ಯಪ್ನಗರ

ಶ್ರೀಗಂಧ ಕಟಾವು, ಇಬ್ಬರ ಬಂಧನ

ವಿಜಯಪುರ: ಜಮೀನಿನಲ್ಲಿಬೆಳೆದಿದ್ದ ಶ್ರೀಗಂಧ ಗಿಡಗಳನ್ನು ತುಂಡರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ 34,200 ರೂ. ಕಿಮ್ಮತ್ತಿನ ಶ್ರೀಗಂಧ ವಶಪಡಿಸಿಕೊಂಡಿದ್ದಾರೆ.

Vijaya Karnataka 16 Sep 2019, 5:00 am
ವಿಜಯಪುರ: ಜಮೀನಿನಲ್ಲಿಬೆಳೆದಿದ್ದ ಶ್ರೀಗಂಧ ಗಿಡಗಳನ್ನು ತುಂಡರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ 34,200 ರೂ. ಕಿಮ್ಮತ್ತಿನ ಶ್ರೀಗಂಧ ವಶಪಡಿಸಿಕೊಂಡಿದ್ದಾರೆ.
Vijaya Karnataka Web sandalwood harvesting arrest of two
ಶ್ರೀಗಂಧ ಕಟಾವು, ಇಬ್ಬರ ಬಂಧನ


ಇಂಡಿ ತಾಲೂಕಿನ ಲೋಣಿ ಬಿಕೆ ಗ್ರಾಮದ ಮಶ್ಯಾಕ್‌ ದಸ್ತಗೀರ ಶೇಖ ಹಾಗೂ ರಾಯಗೊಮಡ ಬಾಪುರಾಯ ಬನಸೋಡೆ ಬಂಧಿತರು. ಇವರಿಬ್ಬರೂ ಮಣಂಕಲಗಿ ಗ್ರಾಮದ ಅಪ್ಪಾಶ್ಯಾ ಸತ್ಯೆಪ್ಪ ಕೋಳಿ ಜಮೀನಿನಲ್ಲಿಬೆಳೆದಿದ್ದ ಶ್ರೀಗಂಧ ಕಟ್ಟಿಗೆಗಳನ್ನು ಅಕ್ರಮವಾಗಿ ಕಡಿಯುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಬಂಧಿತರಿಂದ 57 ಕೆಜಿ ತೂಕದ ಹಸಿ ತೊಗಟೆಯಿರುವ ಶ್ರೀಗಂಧ ವಶಪಡಿಸಿಕೊಂಡಿದ್ದಾಗಿ ಪ್ರಕರಣ ದಾಖಲಿಸಿಕೊಂಡಿರುವ ಝಳಕಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ