ಆ್ಯಪ್ನಗರ

ಜಿಲ್ಲಾಧಿಕಾರಿ ಮನೆ ಆವರಣದಲ್ಲೇ ಶ್ರೀಗಂಧ ಗಿಡ ಕಳ್ಳತನ

ವಿಜಯಪುರ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣನವರ ಮನೆಯ ಕಂಪೌಂಡ್‌ ಒಳಗಿದ್ದ ಶ್ರೀಗಂಧ ಗಿಡಗಳನ್ನು ಭಾನುವಾರ ರಾತ್ರಿ ಕಳ್ಳತನ ಮಾಡಲಾಗಿದೆ.

Vijaya Karnataka Web 11 Feb 2019, 3:53 pm
ವಿಜಯಪುರ: ಜಿಲ್ಲಾಧಿಕಾರಿಗಳ ಮನೆಯ ಆವರಣದಲ್ಲಿರುವ ಶ್ರೀಗಂಧ ಗಿಡಗಳನ್ನೇ ಕಳ್ಳರು ರಾತ್ರೋರಾತ್ರಿ ಹೊತ್ತೊಯ್ದಿದ್ದಾರೆ.
Vijaya Karnataka Web tree


ವಿಜಯಪುರ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣನವರ ಮನೆಯ ಕಂಪೌಂಡ್‌ ಒಳಗಿದ್ದ ಶ್ರೀಗಂಧ ಗಿಡಗಳನ್ನು ಭಾನುವಾರ ರಾತ್ರಿ ಕಳ್ಳತನ ಮಾಡಲಾಗಿದೆ.

ಮನೆಯ ಬಳಿ 8ಕ್ಕೂ ಹೆಚ್ಚು ಶ್ರೀಗಂದಂಧ ಗಿಡಗಳನ್ನು ಕಡಿದು ಕಳ್ಳರು ಪರಾರಿಯಾಗಿದ್ದಾರೆ. ಆದರೆ ಮನೆಗೆ ರಾತ್ರಿ ಪೂರ್ತಿ ಪೋಲಿಸ್ ಕಣ್ಗಾವಲಿದ್ದರೂ, ಶ್ರೀಗಂಧ ಗಿಡಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.

ಜತೆಗೆ ಮನೆಯ ಆವರಣದಲ್ಲಿದ್ದ 10ಕ್ಕೂ ಹೆಚ್ಚು ಗಿಡಗಳನ್ನು ಕದಿಯಲೆಂದೇ ಕಳ್ಳರು ಮಾರ್ಕ್ ಮಾಡಿ ಗುರುತಿಸಿದ್ದರು. ಮನೆಯ ಸುತ್ತಲೂ ಎತ್ತರದ ಆವರಣ ಗೋಡೆಯಿದ್ದರೂ, ಅದನ್ನು ಜಿಗಿದು ಕಳ್ಳತನ ಮಾಡುವಲ್ಲಿ ಕಳ್ಳರು ಯಶಸ್ವಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ