ಆ್ಯಪ್ನಗರ

ಕುರಿ‌ ಕಾಯ್ದ ನನಗೆ ಕಂಬಳಿ ‌ಹಾಕಿಕೊಳ್ಳುವ ಯೋಗ್ಯತೆಯಿದೆ: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ತಿರುಗೇಟು

ಕಂಬಳಿ ಹಾಕೋಕೆ ಯೋಗ್ಯತೆ ಬೇಕು ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬೊಮ್ಮಾಯಿ ನೀನು ಎಂದಾದರೂ ಕುರಿ ಕಾದಿದ್ದೀಯಾ ಎಂದು ಎದಿರೇಟು ನೀಡಿದರು.

Vijaya Karnataka Web 24 Oct 2021, 4:41 pm

ಹೈಲೈಟ್ಸ್‌:

  • ಕಂಬಳಿ ಹಾಕೋಕೆ ಯೋಗ್ಯತೆ ಬೇಕು ಎಂದಿದ್ದ ಬಸವರಾಜ ಬೊಮ್ಮಾಯಿಗೆ ಸಿದ್ದರಾಮಯ್ಯ ತಿರುಗೇಟು
  • ಬೊಮ್ಮಾಯಿ ನೀನು ಎಂದಾದರೂ ಕುರಿ ಕಾದಿದ್ದೀಯಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ
  • ಸಿಂದಗಿಯಲ್ಲಿ‌‌ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web siddaramaiah new
ವಿಜಯಪುರ: ಕಂಬಳಿ ಹಾಕೋಕೆ ಯೋಗ್ಯತೆ ಬೇಕು ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬೊಮ್ಮಾಯಿ ನೀನು ಎಂದಾದರೂ ಕುರಿ ಕಾದಿದ್ದೀಯಾ ಎಂದು ಎದಿರೇಟು ನೀಡಿದರು.
ಸಿಂದಗಿಯಲ್ಲಿ‌‌ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಂಬಳಿ ಹೊತ್ತುಕೊಳ್ಳಲು ಯೋಗ್ಯತೆ ಬೇಕು, ನೀನು ಎಂದಾದರೂ ಕುರಿ ಕಾಯ್ದಿಯಾ ಎಂದು‌ ಬೊಮ್ಮಾಯಿ ವಿರುದ್ದ ಹರಿಹಾಯ್ದ ಸಿದ್ದರಾಮಯ್ಯ, ನಾನು ಕುರುಬ, ಕುರುಬ ಎಂದು 3 ಬಾರಿ ಡಯಾಸ್ ಗುದ್ದಿ, ನಾನು ಕುರಿ ಕಾಯ್ದಿರುವೆ‌. ನನಗೆ ಕಂಬಳಿ ಯೋಗ್ಯತೆ ಗೊತ್ತಿದೆ ಎಂದು‌ ವೇದಿಕಯಲ್ಲಿ ಕಂಬಳಿ ಹೆಗಲಿಗೆ ಹೊತ್ತೊಕೊಳ್ಳುವ ಮೂಲಕ ಪ್ರತ್ಯುತ್ತರ ನೀಡಿದರು.

ಕಾಗಿನೆಲೆ ಅಭಿವೃದ್ಧಿ ಮಾಡಿದ್ದು ಯಾರು..? ನಾನು ಕಾಗಿನೆಲೆ ಅಭಿವೃದ್ಧಿ ಮಾಡಿದ್ದೇನೆ. ಅದಕ್ಕಾಗಿ ರಾಜ್ಯ ಸುತ್ತಿದ್ದೇನೆ. ಕನಕಪೀಠ ಉದ್ಘಾಟನೆ ಮಾಡಲು ಈಶ್ವರಪ್ಪ ಬರಲಿಲ್ಲ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಎಲ್ಲಿದೆ ಈಶ್ವರಪ್ಪ ಎಂದು ಸಿದ್ದರಾಮಯ್ಯ
ಪ್ರಶ್ನಿಸಿದರು.

ಸಿಂದಗಿ ಉಪ ಚುನಾವಣೆ: ಜೆಡಿಎಸ್ ಲೆಕ್ಕಕ್ಕೇ ಇಲ್ಲ ಎಂದ ಸಿದ್ದರಾಮಯ್ಯ

ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದರೆ ಸಿದ್ದರಾಮಯ್ಯಗೆ ನೀಡಿದಂತೆ
ಸಿಂದಗಿ ಉಪಚುನಾವಣೆಗೆ ನಿಂತಿರೋದು ಅಶೋಕ ಮನಗೂಳಿ ಅಲ್ಲ, ಸಿದ್ದರಾಮಯ್ಯ. ಹಾಗಾಗಿ ಇಲ್ಲಿ ನೀವು ಕಾಂಗ್ರೆಸ್ ಗೆ ಮತ ನೀಡಿದರೆ ಸಿದ್ದರಾಮಯ್ಯಗೆ ಮತ ನೀಡಿದಂತಾಗುವುದು ಎಂದು‌ ಮಾಜಿ‌ ಸಿದ್ದರಾಮಯ್ಯ ಹೇಳಿದರು.‌

ಸಿಂದಗಿಯಲ್ಲಿ ಮಾತನಾಡಿದ ಅವರು, ಸಿಂದಗಿ ಕ್ಷೇತ್ರದ ಜನತೆಗೆ ಕೈ‌ಮುಗಿದು ಪ್ರಾರ್ಥಿಸುವೆ. ಈ ಬಾರಿ ನಿಮ್ಮ ಮತವನ್ನು ಮನಗೂಳಿ ಅವರಿಗೆ ನೀಡಿದರೆ ಸಿದ್ದರಾಮಯ್ಯ ಗೆ ನೀಡಿದಂತಾಗುವುದು ಎಂದರು. ಬಿಜೆಪಿಗೆ ಮತ ನೀಡಿದರೆ ಬೊಮ್ಮಾಯಿಗೆ ನೀಡಿದಂತೆ, ನನಗೆ‌ ಮತ ನೀಡಿದರೆ ಸಿದ್ದರಾಮಯ್ಯ ಗೆ‌ ಮತ ನೀಡಿದಂತಾಗುವುದೆಂದರು‌.

ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ: ಯಡಿಯೂರಪ್ಪ ಚಾಟಿ

ಅಂದಿನ ಸರ್ಕಾರ ಮೀಸಲಾತಿ ತಿದ್ದುಪಡಿ ತಂದಿದಕ್ಕಾಗಿ ನಮಗೆ ಬಹಳ ಅನುಕೂಲವಾಯಿತು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ತತ್ವ ತತ್ವ ಅಪಾರವಾಗಿದೆ. ಹಿಂದುಳಿದ ವರ್ಗಕ್ಕೆ ನೀಡಿದ್ದ ಮೀಸಲಾತಿ ಯನ್ನು ರಾಮಾಜೋಯಿಸ್ ವಿರೋಧಿಸಿದ್ದರು. ಆಗ ಬಿಜೆಪಿ ನಾಯಕರು ಯಾಕೆ ಸುಮ್ಮನಾಗಿದ್ದರು. ಎಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ