ಆ್ಯಪ್ನಗರ

ಕಾರ್ಮಿಕರಿಗೆ ಕೇಂದ್ರ ಯೋಜನೆ ತಲುಪಿಸದಿದ್ದರೆ ಕಠಿಣ ಕ್ರಮ

ಕೇಂದ್ರ ಸರಕಾರ ಕಾರ್ಮಿಕರು ಪೌರಕಾರ್ಮಿಕರಿಗಾಗಿ ಹಮ್ಮಿಕೊಂಡ ನಾನಾ ಯೋಜನೆಗಳನ್ನು ಅರ್ಹರಿಗೆ ತಲುಪಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗುವುದು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ ಹಿರೇಮನಿ ಹೇಳಿದರು.

Vijaya Karnataka 5 Aug 2019, 5:00 am
ವಿಜಯಪುರ : ಕೇಂದ್ರ ಸರಕಾರ ಕಾರ್ಮಿಕರು ಪೌರಕಾರ್ಮಿಕರಿಗಾಗಿ ಹಮ್ಮಿಕೊಂಡ ನಾನಾ ಯೋಜನೆಗಳನ್ನು ಅರ್ಹರಿಗೆ ತಲುಪಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗುವುದು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ ಹಿರೇಮನಿ ಹೇಳಿದರು.
Vijaya Karnataka Web strict action if workers do not deliver a central plan
ಕಾರ್ಮಿಕರಿಗೆ ಕೇಂದ್ರ ಯೋಜನೆ ತಲುಪಿಸದಿದ್ದರೆ ಕಠಿಣ ಕ್ರಮ


ಆಲಮಟ್ಟಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಸಫಾಯಿ ಕಾರ್ಮಿಕರನ್ನು ಗುರುತಿಸುವ ಕಾರ್ಯ ಆರಂಭಗೊಂಡಿದ್ದು, ವಿಜಯಪುರ, ಬಾಗಲಕೋಟೆ ಜಿಲ್ಲೆ ಸೇರಿ ರಾಜ್ಯದ ಏಳು ಜಿಲ್ಲೆಗಳನ್ನು ಈ ಕಾರ್ಯಕ್ಕೆ ಪೈಲೆಟ್‌ ಯೋಜನೆಗೆ ಆಯ್ಕೆ ಮಾಡಲಾಗಿದೆ. ಕೇಂದ್ರ ಸಫಾಯಿ ಕರ್ಮಚಾರಿ ಫೈನಾನ್ಸ್‌ ಆಂಡ್‌ ಡೆವೆಲಪ್‌ಮೆಂಟ್‌ದಿಂದ ಇಂತಹ ಕಾರ್ಮಿಕರ ಖಾತೆಗೆ 40 ಸಾವಿರ ರೂ ಅನುದಾನ ನೀಡಲಾಗುವುದು, ಪರ್ಯಾಯ ಉದ್ಯೋಗ ಕೈಗೊಳ್ಳಲು 25 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ನೀಡಲಾಗುವುದು ಎಂದರು.

ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಆಯೋಗದಿಂದ ಸಕ್ಕಿಂಗ್‌ ಯಂತ್ರ ಖರೀದಿಸಿ ನೀಡಲಾಗುವುದು, ಆ ಯಂತ್ರಗಳ ಸೇವೆ ಬಳಸಿಕೊಳ್ಳಲು ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಜತೆ ಒಡಂಬಡಿಕೆ ಮಾಡಿಕೊಳ್ಳಲು ಸೂಚಿಸಲಾಗಿದೆ, ಇದು ಅಲ್ಲದೇ ಪ್ರತಿ ಸ್ಥಳೀಯ ಸಂಸ್ಥೆಗಳು ಸಕ್ಕಿಂಗ್‌ ಯಂತ್ರವನ್ನು ಖರೀದಿಸಲು ಆಯೋಗದಿಂದ ಸಹಾಯಧನ ನೀಡಲಾಗುವುದು ಎಂದರು.

ರಾಜ್ಯದಲ್ಲಿ 13000 ಪೌರಕಾರ್ಮಿಕರನ್ನು ಕಾಯಂಗೊಳಿಸಲಾಗಿದೆ, ಇನ್ನುಳಿದವರನ್ನು ಕಾಯಂಗೊಳಿಸುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಲಾಗುವುದು. ಕೇಂದ್ರ ಸರಕಾರ ಕಳೆದ 2 ದಿನಗಳ ಹಿಂದಷ್ಟೇ ಸಿ ಮತ್ತು ಡಿ ವರ್ಗದ ದಿನಗೂಲಿ ಕೆಲಸಗಾರರನ್ನು ಕಾಯಂ ಮಾಡಲು ಆದೇಶಿಸಿದೆ, ಇದೊಂದು ಮಹತ್ವದ ತೀರ್ಮಾನ, ಇದರಿಂದ ದೇಶದ 1.5 ಕೋಟಿ ಜನರಿಗೆ ನೆಮ್ಮದಿ ಮೂಡಲಿದೆ ಎಂದರು.

ನಿವೃತ್ತ ಪೌರಕಾರ್ಮಿಕರು ಸೇರಿ ಎಲ್ಲ ಪೌರಕಾರ್ಮಿಕರ ಮಕ್ಕಳ ಅಧ್ಯಯನಕ್ಕಾಗಿ ಆಯೋಗದಿಂದ ಹಣಕಾಸಿನ ಸೌಲಭ್ಯ ಒದಗಿಸಲಾಗುವುದು, 2022ರ ವೇಳೆಗೆ ಪೌರಕಾರ್ಮಿಕರಿಗೆ ಶಾಶ್ವತ ಉದ್ಯೋಗ, ಆರೋಗ್ಯ, ಶಿಕ್ಷ ಣ, ವಸತಿ ಸೌಲಭ್ಯ ಕಲ್ಪಿಸಬೇಕೆಂಬುದು ಆಯೋಗದ ಗುರಿಯಾಗಿದೆ ಎಂದರು.

ಡಾ.ಅಮರೇಶ ಮಿಣಜಗಿ, ಅಭಿಷೇಕ ಚಕ್ರವರ್ತಿ, ಕರವೀರ ಮಡಿವಾಳರ, ಶೇಖರ ದೊಡಮನಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ