ಆ್ಯಪ್ನಗರ

ಕಾರ್ಮಿಕರ ಬಲವರ್ಧನೆಗೆ ಮುಷ್ಕರ

ವಿಜಯಪುರ: ದೇಶದ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿಕಾರ್ಮಿಕರ ಬಲವರ್ಧನೆಗೆ ಜ.20ರಿಂದ ದೇಶಾದ್ಯಂತ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌.ವರಲಕ್ಷ್ಮಿ ಹೇಳಿದರು.

Vijaya Karnataka 18 Oct 2019, 5:00 am
ವಿಜಯಪುರ: ದೇಶದ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿಕಾರ್ಮಿಕರ ಬಲವರ್ಧನೆಗೆ ಜ.20ರಿಂದ ದೇಶಾದ್ಯಂತ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌.ವರಲಕ್ಷ್ಮಿ ಹೇಳಿದರು.
Vijaya Karnataka Web strike for workers consolidation
ಕಾರ್ಮಿಕರ ಬಲವರ್ಧನೆಗೆ ಮುಷ್ಕರ


ನಗರದ ರಾಜ್ಯ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿಗುರುವಾರ ನಡೆದ ಸಿಐಟಿಯುನ 3ನೇ ಜಿಲ್ಲಾಸಮ್ಮೇಳನದಲ್ಲಿಅವರು ಮಾತನಾಡಿದರು.

ಪಾಕಿಸ್ತಾನ ಕುರಿತು ಉನ್ಮಾದ ಸೃಷ್ಟಿಸಿ ಮತ ಪಡೆದ ಕೇಂದ್ರದ ಬಿಜೆಪಿ ಸರಕಾರ, ಜಿಲ್ಲೆಯ ಅಭಿವೃದ್ಧಿಗೆ ಬಗೆಗೆ ಕಿಂಚಿತ್ತು ಯೋಚಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿಆಗಮಿಸುವ ಪ್ರಧಾನಿ ಹಾಗೂ ಬಿಜೆಪಿ ಮುಖಂಡರು ನಂತರದಲ್ಲಿಜನರನ್ನು ಸಂಪೂರ್ಣ ಮರೆತಿದ್ದಾರೆ. ಜನರು ಪ್ರವಾಹದಿಂದ ತತ್ತರಿಸಿದ್ದಾರೆ. ಕೇಂದ್ರ ಸರಕಾರ ಉದ್ಯೋಗ ಸೃಷ್ಟಿಗೆ ಮಾರಕ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ. ಅಭಿವೃದ್ಧಿಗಾಗಿ ಜನರು ಹೆಚ್ಚೆಚ್ಚು ಸಂಘಟಿತರಾಗಿ ಸೂಕ್ತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದರು.

ರಾಜ್ಯ ಕಾರ್ಯದರ್ಶಿ ಎಂ.ಪ್ರತಾಪ ಸಿಂಹ ಮಾತನಾಡಿ, ದೇಶದ ಆರ್ಥಿಕ ಪರಿಸ್ಥಿತಿ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದೆ. ಕಳೆದ 5 ವರ್ಷಗಳಲ್ಲಿಕೇವಲ 60 ಲಕ್ಷ ಮಾತ್ರ ಉದ್ಯೋಗ ಸೃಷ್ಟಿಯಾಗಿದೆ. ಜಾಗತಿಕ ನಾಯಕರೆನ್ನುವ ಪ್ರಧಾನಿ ನರೇಂದ್ರ ಮೋದಿಯವರ ಕಾಲಘಟ್ಟದಲ್ಲಿತಮ್ಮದೇ ಹಣ ಪಡೆಯಲು ದೇಶದ ಜನರು ಕ್ಯೂನಲ್ಲಿನಿಂತು ನೂರಾರು ಜನರು ತೀರಿಕೊಂಡರು ಎಂದರು.

ಜಿಲ್ಲಾಗೌರವಾಧ್ಯಕ್ಷ ಭೀಮಶಿ ಕಲಾದಗಿ ಧ್ವಜಾರೋಹಣ ನೆರವೇರಿಸಿದರು. ಅಣ್ಣಾರಾಯ ಈಳಗೇರ, ಲಕ್ಷತ್ರ್ಮಣ ಹಂದ್ರಾಳ, ಭಾರತಿ ವಾಲಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ