ಆ್ಯಪ್ನಗರ

ಉತ್ತರ ಪತ್ರಿಕೆ ಹರಿದು ಹಾಕಿದ ಭೂಪ...!

ಹೂವಿನಹಿಪ್ಪರಗಿಯ ಎಂಜಿ ಕೋರಿ ಮತ್ತು ಬಿಜಿಬಿ ಬ್ಯಾಕೋಡ್‌ ಪಿಯು ಕಾಲೇಜ್‌ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ.

Vijaya Karnataka 2 Mar 2019, 11:42 am
ವಿಜಯಪುರ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆ ಹರಿದು ಹಾಕಿದ ಘಟನೆ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
Vijaya Karnataka Web Exam ppr


ಹೂವಿನಹಿಪ್ಪರಗಿಯ ಎಂಜಿ ಕೋರಿ ಮತ್ತು ಬಿಜಿಬಿ ಬ್ಯಾಕೋಡ್‌ ಪಿಯು ಕಾಲೇಜ್‌ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ. ಉತ್ತರ ಪತ್ರಿಕೆ ತುಂಬಿದ ಬಳಿಕ ಹೆಚ್ಚುವರಿ ಪೇಪರ್‌ ನೀಡಲಿಲ್ಲ ಎಂಬ ನೆಪ ಹೇಳಿ ಬರೆದಿದ್ದ ಉತ್ತರ ಪತ್ರಿಕೆಯನ್ನೇ ಹರಿದು ಹಾಕಿದ್ದಾನೆ.

ವಿಷಯ ತಿಳಿದ ಪರೀಕ್ಷಾ ಕೇಂದ್ರದ ಅಧೀಕ್ಷಕರು, ವಿದ್ಯಾರ್ಥಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಆದರೆ ವಾಸ್ತವದಲ್ಲಿ ಆತ ಉತ್ತರವನ್ನೇ ಬರೆದಿರಲಿಲ್ಲ. ಉತ್ತರ ಪತ್ರಿಕೆಯೂ ಪೂರ್ಣ ತುಂಬಿರಲಿಲ್ಲ. ಬದಲಿಗೆ ಹೆಚ್ಚುವರಿ ಪೇಪರ್‌ ಕೊಡಲಿಲ್ಲ ಎಂಬ ಕುಂಟು ನೆಪ ಹೇಳಿ ಪತ್ರಿಕೆ ಹರಿದು ಹಾಕಿದ್ದಾನೆ ಎಂದು ಪರಿವೀಕ್ಷಕರು ತಿಳಿಸಿದ್ದಾರೆ.

ಹೂವಿನಹಿಪ್ಪರಗಿಯಲ್ಲಿ ನಡೆದ ಘಟನೆ ನಮ್ಮ ಗಮನಕ್ಕೆ ಬಂದಿಲ್ಲ. ನಡೆದಿದ್ದರೆ, ಆ ಪರೀಕ್ಷಾ ಕೇಂದ್ರದ ಅಧೀಕ್ಷಕರನ್ನು ವಿಚಾರಣೆ ಮಾಡುತ್ತೇನೆ. ಸಿಬ್ಬಂದಿಯಿಂದ ತಪ್ಪಾಗಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ.
ಶಂಕರ ವೈ.ಅಮಾತೆ, ಉಪನಿರ್ದೇಶಕ, ಪಪೂ ಶಿಕ್ಷಣ ಇಲಾಖೆ, ವಿಜಯಪುರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ