ಆ್ಯಪ್ನಗರ

ಸುಮಲತಾ, ಖರ್ಗೆ ಸೋಲು-ಗೆಲುವು ಲೆಕ್ಕಾಚಾರ

ವಿಜಯಪುರ : ಸುಮಲತಾ ಅಂಬರೀಶ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ವಿಜಯಪುರ ಕ್ಷೇತ್ರದಲ್ಲಿ ಸ್ಪರ್ಧಿಸದಿದ್ದರೂ ಇವರಿಬ್ಬರ ಗೆಲುವು-ಸೋಲಿನ ಬಗ್ಗೆ ಜಿಲ್ಲೆಯಲ್ಲಿ ಬೆಟ್ಟಿಂಗ್‌ ನಡೆದಿದೆ. ಬಂಗಾರ, ರೊಕ್ಕ ಬಾಜಿ ಜೋರಾಗಿದೆ.

Vijaya Karnataka 25 Apr 2019, 5:00 am
ವಿಕ ವಿಶೇಷ ವಿಜಯಪುರ
Vijaya Karnataka Web sumalatha kharge defeated win calculation
ಸುಮಲತಾ, ಖರ್ಗೆ ಸೋಲು-ಗೆಲುವು ಲೆಕ್ಕಾಚಾರ


ಸುಮಲತಾ ಅಂಬರೀಶ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ವಿಜಯಪುರ ಕ್ಷೇತ್ರದಲ್ಲಿ ಸ್ಪರ್ಧಿಸದಿದ್ದರೂ ಇವರಿಬ್ಬರ ಗೆಲುವು-ಸೋಲಿನ ಬಗ್ಗೆ ಜಿಲ್ಲೆಯಲ್ಲಿ ಬೆಟ್ಟಿಂಗ್‌ ನಡೆದಿದೆ. ಬಂಗಾರ, ರೊಕ್ಕ ಬಾಜಿ ಜೋರಾಗಿದೆ.

ಎಲ್ಲಿ ಮಂಡ್ಯ, ಎಲ್ಲಿಯ ವಿಜಯಪುರ. ಆದರೂ ರಾಜ್ಯದ ಹೈವೋಲ್ಟೇಜ್‌ ಕ್ಷೇತ್ರ ಮಂಡ್ಯದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್‌ ಗೆಲುವಿನ ಬಗ್ಗೆ ಸಿಂದಗಿ ಪಟ್ಟಣದಲ್ಲಿ ಬೆಟ್ಟಿಂಗ್‌ ನಡೆದಿದೆ. ಇಲ್ಲಿನ ಅಂಬರೀಶ್‌ ಅಭಿಮಾನಿಗಳು ಸುಮಲತಾ ಗೆದ್ದೇ ಗೆಲ್ಲುತ್ತಾರೆ, ಯಾರೂ ಬೇಕಾದರೂ ಬಾಜಿ ಕಟ್ಟಬಹುದು ಎಂದು ಮುಂದಾಗಿದ್ದಾರೆ. 1 ತೊಲೆ ಬಂಗಾರ ಕಟ್ಟಿದರೆ ಅಷ್ಟೇ ಬಂಗಾರ ಕೊಡುವುದಾಗಿ ಆಫರ್‌ ನೀಡಿದ್ದಾರೆ.

ಬೇಕಿದ್ದರೆ ರೊಕ್ಕವನ್ನೂ ಆಡಬಹುದು ಎಂಬ ಬೆಟ್ಟಿಂಗ್‌ ಆಡಲು ಆಹ್ವಾನಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಖರ್ಗೆ ಗೆಲುವಿಗೂ ಬಾಜಿ : ವಿಜಯಪುರ ಜಿಲ್ಲೆಯ ಪಕ್ಕದ ಕಲಬುರಗಿ ಕ್ಷೇತ್ರ ಕೂಡ ಪ್ರತಿಷ್ಠಿತ ಕಣವಾಗಿದ್ದರಿಂದ ಅಲ್ಲಿನ ಸ್ಪರ್ಧಿಸಿರುವ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಗೆದ್ದೇ ಗೆಲ್ಲುತ್ತಾರೆ, 1 ಸಾವಿರಕ್ಕೆ 1 ಸಾವಿರ ರೂ. ಕೊಡುವುದಾಗಿ ಖರ್ಗೆ ಅಭಿಮಾನಿಗಳು ಕೂಡ ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ.

ಖರ್ಗೆ ಅವರು ಸತತ ಗೆದ್ದವರು. ಈ ಸಲ ಅವರಿಗೆ ಬಿಜೆಪಿ ಪ್ರಬಲ ಪೈಪೋಟಿ ಒಡ್ಡಿದ್ದರಿಂದ ಹೈ ವೋಲ್ಟೇಜ್‌ ಕ್ಷೇತ್ರವಾಗಿದೆ. ಕೆಲವರು ಖರ್ಗೆ ಸೋಲುತ್ತಾರೆನ್ನುತ್ತಿದ್ದಾರೆ. ಆದರೆ, ಖರ್ಗೆ ಅವರು ಯಾವ ಕಾರಣಕ್ಕೂ ಸೋಲಲ್ಲ. ಯಾರೂ ಬೇಕಾದರೂ ಬೆಟ್ಟಿಂಗ್‌ ಕಟ್ಟಬಹುದೆಂದು ಸಿಂದಗಿಯಲ್ಲಿ ಅನೇಕರು ಆಹ್ವಾನಿಸಿದ್ದಾರೆ. ಸಿಂದಗಿ ಪಟ್ಟಣದ 100ಕ್ಕೂ ಹೆಚ್ಚು ಮಂದಿ ಸುಮಲತಾ ಅಂಬರೀಶ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ಗೆಲುವಿನ ಬಗ್ಗೆ ಬೆಟ್ಟಿಂಗ್‌ ಆಡಿದ್ದಾರೆ.

-------------

ಕ್ರಿಕೆಟ್‌ ಬೆಟ್ಟಂಗ್‌ ಬಿಟ್ಟು ಈ ಬಾರಿ ಎಲೆಕ್ಷನ್‌ ಜಿದ್ದ ಕಟ್ಟೀವಿ, ಮಂಡ್ಯದಲ್ಲಿ ಸುಮಲತಾ ಗೆಲ್ತಾರಾ, ನಿಖಿಲ್‌ ಗೆಲ್ತಾರಾ ಅಂತಾ 1 ತೊಲಿ ಬಂಗಾರಕ ಇನ್ನೊಂದು ತೊಲಿ ಬಂಗಾರ ಕಟ್ಟೀವಿ. ಸಾವಿರಕ್ಕ ಸಾವಿರ ರೊಕ್ಕ ಐತಿ. ನೂರಾರು ಮಂದಿ ಕೇಳಲಿಕತ್ತಾರ, ಕ್ರಿಕೆಟ್‌ ಬಾಜಿ ಬಿಟ್ಟು ರಾಜಕಾರಣದ ಜಿದ್‌ ಚಾಲು ಮಾಡ್ಯಾರ.

ಹೆಸರು ಹೇಳಲಿಚ್ಚಿಸದ ವ್ಯಕ್ತಿ, ಸಿಂದಗಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ