ಆ್ಯಪ್ನಗರ

ಬಿಸಿಲಿನ ತಾಪ, ಶಾಲೆ ಭಣ ಭಣ

ಹೂವಿನಹಿಪ್ಪರಗಿ : ಜಿಲ್ಲೆಯಲ್ಲಿ ಬುಧವಾರ ಶಾಲೆಗಳು ಪುನಾರಂಭಗೊಂಡರೂ ಹೂವಿನಹಿಪ್ಪರಗಿ ಹೋಬಳಿಯ ಕೆಲ ಶಾಲೆಗಳಿಗೆ ವಿಪರೀತ ಬಿಸಿಲಿಗೆ ಹೆದರಿ ಮಕ್ಕಳು ಬಾರದ್ದರಿಂದ ಕೆಲ ಶಾಲೆಗಳು ಭಣ, ಭಣ ಎನ್ನುತ್ತಿದ್ದವು.

Vijaya Karnataka 31 May 2019, 5:00 am
ಹೂವಿನಹಿಪ್ಪರಗಿ : ಜಿಲ್ಲೆಯಲ್ಲಿ ಬುಧವಾರ ಶಾಲೆಗಳು ಪುನಾರಂಭಗೊಂಡರೂ ಹೂವಿನಹಿಪ್ಪರಗಿ ಹೋಬಳಿಯ ಕೆಲ ಶಾಲೆಗಳಿಗೆ ವಿಪರೀತ ಬಿಸಿಲಿಗೆ ಹೆದರಿ ಮಕ್ಕಳು ಬಾರದ್ದರಿಂದ ಕೆಲ ಶಾಲೆಗಳು ಭಣ, ಭಣ ಎನ್ನುತ್ತಿದ್ದವು.
Vijaya Karnataka Web sunny temperatures
ಬಿಸಿಲಿನ ತಾಪ, ಶಾಲೆ ಭಣ ಭಣ


ಬಿಸಲಿನ ಪ್ರಖರತೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಬುಧವಾರವೂ 42 ರಿಂದ 43 ಡಿಗ್ರಿ ಉಷ್ಣತೆ ಇತ್ತು. ಇದು ಮಕ್ಕಳ ಆರೋಗ್ಯ ಮೇಲೂ ದುಷ್ಟಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಬೇಸಿಗೆ ರಜೆ ಅವಧಿಯನ್ನು ಇನ್ನೂ ಸ್ವಲ್ಪ ದಿನ ವಿಸ್ತರಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆದರೂ ಈಗ ಶಾಲೆಗಳು ಪುನಾರಂಭಗೊಂಡಿವೆ. ಮೊದಲ ದಿನ ಕೆಲ ಶಾಲೆಗಳಲ್ಲಿ ಮಕ್ಕಳೇ ಕಾಣಿಸಲಿಲ್ಲ. ಶಿಕ್ಷಕರಿಗೆ ಅನಿವಾರ್ಯವಾಗಿದ್ದರಿಂದ ಶಾಲೆಗೆ ಬರಬೇಕಾಯಿತು.

-------

ಈಗ ಬಿಸಿಲು ವಿಪರೀತವಾಗಿದೆ. ಇಂತಹ ಬಿಸಿಲಿನಲ್ಲಿ ಮಕ್ಕಳು ಹೂರಗಡೆ ಬಂದರೆ ನೀರಿನ ಅಂಶ ಕಡಿಮೆಯಾಗುತ್ತದೆ. ಆದಷ್ಟು ಮಕ್ಕಳು ನೆರಳಿನಲ್ಲಿ ಇರುವಂತೆ ನೋಡಿಕೊಳ್ಳಬೇಕು.

-ಮಹೇಶ ನಾಗರಬೆಟ್ಟ, ತಾಲೂಕು ಆರೋಗ್ಯಾಧಿಕಾರಿ

--------

ತಾಪಮಾನ ಹೆಚ್ಚಾಗಿದ್ದು, ವಿಜಯಪುರ ಜಿಲ್ಲೆಯಲ್ಲೂ ಮಕ್ಕಳ ಹಿತದೃಷ್ಟಿಯಿಂದ ಬೇಸಿಗೆ ರಜೆ ಅವಧಿಯನ್ನು ವಿಸ್ತರಿಸಬೇಕು.

- ಎ.ಎಂ. ಹಳ್ಳೂರ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ, ಬಸವನಬಾಗೇವಾಡಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ