ಆ್ಯಪ್ನಗರ

ಕೃಷ್ಣಾ ನದಿ ತೀರ, ದೇಗುಲದ ಬಳಿ ಸ್ವಚ್ಛತಾ ಕಾರ್ಯ: ಟ್ರ್ಯಾಕ್ಟರ್ ಓಡಿಸಿ, ಕಸ ಎತ್ತಿ ಗಮನ ಸೆಳೆದ ಸ್ವಾಮೀಜಿ..!

ನಾಲ್ಕಾರು ವರ್ಷದಿಂದ ಯಾರೊಬ್ಬರೂ ಸ್ವಚ್ಛಗೊಳಿಸದೆ ಕಲ್ಮಶಗೊಂಡಿದ್ದ ಈ‌ ನದಿ ತೀರದ ಮಾಹಿತಿ ಪಡೆದ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಳವೇಡೆ ತಾಲೂಕಿನ ಸುಕ್ಷೇತ್ರ ಶ್ರೀ ಮಹಾಳಿಂಗರಾಯ ದೇವಸ್ಥಾನದ ಪಟ್ಟದ ದೇವರು ಮತ್ತು ಮಹಾಳಿಂಗರಾಯರ ವಂಶಸ್ಥರಾದ ಶ್ರೀ ಮಹಾಳಿಂಗರಾಯರು ನೂರಾರು ಯುವಕರೊಂದಿಗೆ ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ​​ನದಿಯಲ್ಲಿ ನೀರು ಪಾಲಾಗಿದ್ದ ಮತ್ತು ನದಿ ದಡಕ್ಕೆ ಬಂದು ಬಿದ್ದಿದ್ದ ಬಟ್ಟೆ ಮತ್ತಿತರ ತ್ಯಾಜ್ಯಗಳನ್ನು ತಾವೇ ಖುದ್ದಾಗಿ‌ ಸಂಗ್ರಹಿಸಿದ್ದಾರೆ. ಸಂಗ್ರಹಿಸಲಾದ ಕಸವನ್ನು ಸ್ವಯಂ ಸೇವಕರ ಸಹಾಯದಿಂದ ಟ್ರ್ಯಾಕ್ಟರ್‌ಗೆ ತುಂಬಿದ್ದಾರೆ.

Edited byದಿಲೀಪ್ ಡಿ. ಆರ್. | Lipi 27 Jun 2022, 12:22 pm

ಹೈಲೈಟ್ಸ್‌:

  • ಮೈಲಿಗೆ ತೊಳೆಯುವ ಹೆಸರಿನಲ್ಲಿ ನದಿಗೆ ಬಟ್ಟೆ ಎಸೆಯುವ ಭಕ್ತರು
  • ತಾವು ಪವಿತ್ರರಾಗುವ ಹೆಸರಿನಲ್ಲಿ ನದಿಗಳು ಮಲಿನ..!
  • ನದಿ ತೀರದ ಗ್ರಾಮಗಳಲ್ಲಿ ಈ ರೀತಿಯ ದೃಶ್ಯ ಸರ್ವೆ ಸಾಮಾನ್ಯ..!
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web sw
ಕೃಷ್ಣಾ ನದಿ ತೀರ, ದೇಗುಲದ ಬಳಿ ಸ್ವಚ್ಛತಾ ಕಾರ್ಯ: ಟ್ರ್ಯಾಕ್ಟರ್ ಓಡಿಸಿ, ಕಸ ಎತ್ತಿ ಗಮನ ಸೆಳೆದ ಸ್ವಾಮೀಜಿ..!
ವಿಜಯಪುರ: ಮೈಲಿಗೆ ತೊಳೆಯುವ ಹೆಸರಿನಲ್ಲಿ ಭಕ್ತರು ನದಿ ತೀರಕ್ಕೆ ತೆರಳಿ ತಾವು ಧರಿಸಿದ ಬಟ್ಟೆ‌ ಮತ್ತಿತರ ವಸ್ತುಗಳನ್ನು ನೀರಿಗೆ ಎಸೆಯುವ ಪರಿಪಾಠ ಹೆಚ್ಚಾಗುತ್ತಿದೆ. ತಾವು ಪವಿತ್ರರಾಗುವ ಹೆಸರಿನಲ್ಲಿ ಭಕ್ತರು ನದಿಗಳನ್ನು ಮಲಿನಗೊಳಿಸುತ್ತಿದ್ದಾರೆ. ನದಿ ತೀರದ ಗ್ರಾಮಗಳಲ್ಲಿ ಈ ರೀತಿಯ ದೃಶ್ಯ ಹೆಚ್ಚಾಗಿ ಕಂಡು ಬರುತ್ತದೆ. ನದಿ ತೀರದಿಂದ ದೇವಸ್ಥಾನಗಳು ಅಣತಿ ದೂರದಲ್ಲಿದ್ದರೆ ಸಾಕು, ತ್ಯಾಜ್ಯಗಳನ್ನು ನೀರಿಗೆ ಎಸೆಯುವ ಕಾರ್ಯ ಹೆಚ್ಚಾಗಿಯೇ ನಡೆಯುತ್ತದೆ.
ಇದೇ ರೀತಿ ಉತ್ತರ ಕರ್ನಾಟಕದ ಜೀವ ನದಿ ಕೃಷ್ಣಾ ತೀರದಲ್ಲೂ ಸುಮಾರು ಎರಡು ಕಿ. ಮೀ. ಗೂ ಹೆಚ್ಚಿನ ತ್ಯಾಜ್ಯ ಹರಡಿತ್ತು. ಇದನ್ನು ಸ್ವಚ್ಛಗೊಳಿಸುವ ಮೂಲಕ ಬಸವ ನಾಡಿನ ಸ್ವಾಮೀಜಿಯೊಬ್ಬರು ಗಮನ ಸೆಳೆದಿದ್ದಾರೆ.

ಸ್ವಚ್ಛತೆ ಆಂದೋಲನವಾಗಲಿ: ಚುಂಚಶ್ರೀ
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯದ ಬಳಿ ಇರುವ ಕೃಷ್ಣಾ ತೀರದ ಶ್ರೀ ಚಂದ್ರಗಿರಿ ಚಂದ್ರಮ್ಮ ತಾಯಿ ದೇವಸ್ಥಾನದ ಹತ್ತಿರ ಈ ಸ್ವಚ್ಛತಾ ಕಾರ್ಯ ನಡೆದಿದೆ. ಸ್ವಾಮೀಜಿ ನೀಡಿದ ಕರೆಗೆ ಓಗೊಟ್ಟ 'ಕನ್ನಡಿಗ ನಿಮ್ಮ ಸೇವೆಗೆ ಸದಾ ಸಿದ್ಧ' ಯುವಕರ ತಂಡ ಈ ಅಭಿಯಾನಕ್ಕೆ ಕೈ ಜೋಡಿಸಿ ಸ್ವಯಂಸೇವಕರಾಗಿ ದುಡಿದಿದ್ದಾರೆ. ಸುಮಾರು 200 ಟ್ರ್ಯಾಕ್ಟರ್ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ.

ನಾಲ್ಕಾರು ವರ್ಷದಿಂದ ಯಾರೊಬ್ಬರೂ ಸ್ವಚ್ಛಗೊಳಿಸದೆ ಕಲ್ಮಶಗೊಂಡಿದ್ದ ಈ‌ ನದಿ ತೀರದ ಮಾಹಿತಿ ಪಡೆದ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಳವೇಡೆ ತಾಲೂಕಿನ ಸುಕ್ಷೇತ್ರ ಶ್ರೀ ಮಹಾಳಿಂಗರಾಯ ದೇವಸ್ಥಾನದ ಪಟ್ಟದ ದೇವರು ಮತ್ತು ಮಹಾಳಿಂಗರಾಯರ ವಂಶಸ್ಥರಾದ ಶ್ರೀ ಮಹಾಳಿಂಗರಾಯರು ನೂರಾರು ಯುವಕರೊಂದಿಗೆ ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ನದಿಯಲ್ಲಿ ನೀರು ಪಾಲಾಗಿದ್ದ ಮತ್ತು ನದಿ ದಡಕ್ಕೆ ಬಂದು ಬಿದ್ದಿದ್ದ ಬಟ್ಟೆ ಮತ್ತಿತರ ತ್ಯಾಜ್ಯಗಳನ್ನು ತಾವೇ ಖುದ್ದಾಗಿ‌ ಸಂಗ್ರಹಿಸಿದ್ದಾರೆ. ಸಂಗ್ರಹಿಸಲಾದ ಕಸವನ್ನು ಸ್ವಯಂ ಸೇವಕರ ಸಹಾಯದಿಂದ ಟ್ರ್ಯಾಕ್ಟರ್‌ಗೆ ತುಂಬಿದ್ದಾರೆ. ಅಲ್ಲದೇ ಆ ಟ್ರ್ಯಾಕ್ಟರ್‌ ಅನ್ನು ಚಲಾಯಿಸಿಕೊಂಡು ಮುಂದೆ ಸಾಗಿದ್ದಾರೆ. ಈ ಮೂಲಕ‌ ನದಿ ತೀರ ಮತ್ತು ದಡದಲ್ಲಿರುವ ದೇವಸ್ಥಾನ ಬಳಿ ಸುಮಾರು ಎರಡು ಕಿಲೋ ಮೀಟರ್ ಹೆಚ್ಚಿನ ಪ್ರದೇಶದಲ್ಲಿ ಬಿದ್ದಿದ್ದ ನಾನಾ ತ್ಯಾಜ್ಯವನ್ನು ಹೊರ ತೆಗೆದು ಭೇಷ್ ಎನಿಸಿಕೊಂಡಿದ್ದಾರೆ.

ದಾನ ಪ್ರದರ್ಶನವಾಗಬಾರದು: ಸ್ವಾಮೀಜಿ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಲಮೂಲಗಳನ್ನು ಮನುಷ್ಯರು ಮಲಿನಗೊಳಿಸುತ್ತಾರೆ. ಹೀಗಾಗಿ, ಅವರೇ ಇದನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ, ಈ ತ್ಯಾಜ್ಯದ ವಿಷಕಾರಿ ಅಂಶಗಳು ಪ್ರಾಣಿ, ಪಕ್ಷಿ, ಜಲಚರಗಳಿಗೆ ಕಂಟಕ ತಂದೊಡ್ಡುತ್ತವೆ. ಇಂಥ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಜೀವಕುಲ ಸಂರಕ್ಷಿಸಲು ಕೈ ಜೋಡಿಸಬೇಕು‌ ಎಂದು ಕರೆ ನೀಡಿದರು.

ಕನ್ನಡಿಗ ಸಂಘಟನೆ ಮುಖಂಡ ಮತ್ತು ನ್ಯಾಯವಾದಿ ಧರೆಪ್ಪ ಅರ್ಧಾವೂರ, ಮುಖಂಡರಾದ ವಿಕಾಸ ಜೋಗಿ, ಆಕಾಶ ಕಾರಿಕೋಳ, ರಮೇಶ ಮಾಗಿ, ಯಲಗುರೇಶ್ ಮೇಟಿ, ಸಿದ್ದು ಗುಣಕಿ, ರವಿ ಚವ್ಹಾಣ, ರವಿ ವಡ್ಡೋಡಗಿ, ಶ್ರೀಶೈಲ ಬಂಚೋಡಿ, ಸೋಮ ಪೂಜಾರಿ, ಲಕ್ಷ್ಮಣ ಖಣಿಮನಿ ಮತ್ತು ಸರ್ವ ಧರ್ಮದ ಯುವ ಮುಖಂಡರು ಪಾಲ್ಗೊಂಡಿದ್ದರು. ಅಲ್ಲದೇ, ಸುತ್ತಮುತ್ತಲಿನ ನಾನಾ ಗ್ರಾಮಗಳ ಯುವಕರೂ ಕೈ ಜೋಡಿಸಿದ್ದರು. ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಏಳು ಗಂಟೆಗಳ ಕಾಲ ಸ್ವಚ್ಛತೆ ಕೈಗೊಂಡಿದ್ದರು. ಈ ಅಭಿಯಾನದಲ್ಲಿ ಪಾಲ್ಗೊಂಡ ಜನರಿಗೆ ನಿಡಗುಂದಿ ತಾಲೂಕಿನ ಭಕ್ತರು ಊಟದ ವ್ಯವಸ್ಥೆ ಮಾಡಿ ಬೆಂಬಲಿಸಿದರು.

ಸ್ವಚ್ಛತಾ ಕಾರ್ಯದ ಬಳಿಕ ಎಲ್ಲರೂ ಚಂದ್ರಮ್ಮ ದೇವಿಯ ದರ್ಶನ ಪಡೆದು ಚಂದ್ರಗಿರಿಯ ಧರ್ಮರ ಮಠಕ್ಕೆ ಭೇಟಿ ಕೊಟ್ಟು ವಿಜಯಪುರಕ್ಕೆ ಮರಳಿದರು.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ