ಆ್ಯಪ್ನಗರ

ಚಾಲಕನ ಸಮಯಪ್ರಜ್ಞೆ: ತಪ್ಪಿದ ಅನಾಹುತ

ವಿಜಯಪುರ: ಚಾಲಕನ ಸಮಯಪ್ರಜ್ಞೆಯಿಂದ ಸೋಲಾಪುರ-ಹುಬ್ಬಳಿ ಪ್ಯಾಸೆಂಜರ್ ರೈಲು ಅಪಘಾತದಿಂದ ಪಾರಾದ ಘಟನೆ ವರದಿಯಾಗಿದೆ.

ವಿಕ ಸುದ್ದಿಲೋಕ 12 Mar 2017, 11:17 am
ವಿಜಯಪುರ: ಚಾಲಕನ ಸಮಯಪ್ರಜ್ಞೆಯಿಂದ ಸೋಲಾಪುರ-ಹುಬ್ಬಳಿ ಪ್ಯಾಸೆಂಜರ್ ರೈಲು ಅಪಘಾತದಿಂದ ಪಾರಾದ ಘಟನೆ ವರದಿಯಾಗಿದೆ.
Vijaya Karnataka Web the drivers presence of mind
ಚಾಲಕನ ಸಮಯಪ್ರಜ್ಞೆ: ತಪ್ಪಿದ ಅನಾಹುತ


ಸೋಲಾಪುರದಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಸೋಲಾಪುರ-ಹುಬ್ಬಳಿ ಪ್ಯಾಸೆಂಜರ್ ರೈಲು ವಿಜಯಪುರ ತಾಲೂಕಿನ ಅಲಿಯಾಬಾದ್ ಬಳಿ ಬಂದಾಗ ಹಳಿಯಲ್ಲಿ ಬಿರುಕು ಬಿಟ್ಟಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಚಾಲಕ ರೈಲು ನಿಲ್ಲಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ.

ನಂತರ ರೈಲ್ವೆ ಹಳಿಯಲ್ಲಿ ಬಿರುಕು ಬಿದ್ದಿರುವುದನ್ನು ಗಮನಿಸಿ ಚಾಲಕ ಕೂಡಲೇ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಹಳಿ ಸರಿಪಡಿಸಿದರು. ಇದರಿಂದ ರೈಲುಗಳು ಒಂದು ಗಂಟೆ ತಡವಾಗಿ ಸಂಚರಿಸಿದವು.

ರೈಲು ಚಾಲಕನ ಸಮಯಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ