ಆ್ಯಪ್ನಗರ

ಅಳಿಯರಿಂದಲೇ ಮಾವನ ಕೊಲೆ

ಅಳಿಯಂದಿರೇ ಮಾವನನ್ನು ಭೀಕರವಾಗಿ ಕೊಲೆ ಮಾಡಿ ಘಟನೆ ಗುಮ್ಮಟನಗರಿಯ ಜಲನಗರ ಠಾಣೆ ವ್ಯಾಪ್ತಿಯಲ್ಲಿನಡೆದಿದೆ.

Vijaya Karnataka Web 31 May 2020, 5:00 am
ವಿಜಯಪುರ: ಅಳಿಯಂದಿರೇ ಮಾವನನ್ನು ಭೀಕರವಾಗಿ ಕೊಲೆ ಮಾಡಿ ಘಟನೆ ಗುಮ್ಮಟನಗರಿಯ ಜಲನಗರ ಠಾಣೆ ವ್ಯಾಪ್ತಿಯಲ್ಲಿನಡೆದಿದೆ.
Vijaya Karnataka Web the father in laws murder
ಅಳಿಯರಿಂದಲೇ ಮಾವನ ಕೊಲೆ


ಜಲನಗರ ನಿವಾಸಿ ಉಸ್ಮಾನ್‌‍ಪಾಷಾ ಇನಾಂದಾರ (71) ಕೊಲೆಗೀಡಾದ ವಯೋವೃದ್ಧ. ಮುಶ್ರೀಫ್‌ ಕಾಲೊನಿಯ ಜಿಲಾನಿಪಾಶಾ ಜಾಗೀರದಾರ (45), ನದೀಂ ಜಾಗೀರದಾರ್‌ (40), ಖಾದ್ರಿ ಜಾಗೀರದಾರ (38) ಕೊಲೆ ಮಾಡಿದ ಆರೋಪಿಗಳು. ಇವರೆಲ್ಲಕೊಲೆಗೀಡಾದ ವ್ಯಕ್ತಿಯ ಅಕ್ಕನ ಮಕ್ಕಳು.

ಆರೋಪಿಗಳ ಸಹೋದರ ಜಮೀಲ್‌ ಮದುವೆಯ ವಿಷಯವಾಗಿ ಜಗಳವಾಗಿತ್ತು. ಆದರೆ ಕೊಲೆಗೀಡಾದ ವ್ಯಕ್ತಿ ಜಮೀಲ್‌ ಪರವಾಗಿ ಮಾತನಾಡುತ್ತಿದ್ದ. ಇದರಿಂದಾಗಿ ಮೂವರು ಆರೋಪಿಗಳು ಉಸ್ಮಾನ್‌‍ಪಾಷಾ ವಿರುದ್ಧ ಕುಪಿತಗೊಂಡಿದ್ದರು. ಹೀಗಾಗಿ ಶುಕ್ರವಾರ ರಾತ್ರಿ ಕಾರಿನಲ್ಲಿಹಿಟ್ಟಿನ ಗಿರಣಿಯ ಮುಂದೆ ಎಳೆದುಕೊಂಡು ಹೋಗಿ, ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ಬಾರಾಕುಟ್ರಿ ತಾಂಡಾ ಕ್ರಾಸ್‌ ಬಳಿ ಬಿಸಾಕಿ ಪರಾರಿಯಾಗಿದ್ದಾರೆ ಎಂದು ಕೊಲೆಗೀಡಾದ ಉಸ್ಮಾನ್‌‍ಪಾಷಾ ಪುತ್ರ ಮಹಮ್ಮದ ಯೂನುಸ್‌ ಜಲನಗರ ಠಾಣೆಗೆ ನೀಡಿದ ದೂರಿನಲ್ಲಿತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಿನಾರಾಯಣ, ಸಿಪಿಐ ಬಸವರಾಜ ಮುಕಾರ್ತಿಹಾಳ, ಪಿಎಸ್‌‍ಐ ರಾಯಗೊಂಡ ಭೇಟಿ ನೀಡಿ, ಪರಿಶೀಲಿಸಿದ್ದು, ಆರೋಪಿಗಳ ಬಂಧನಕ್ಕೂ ಜಾಲ ಬೀಸಿದ್ದಾರೆ. ಜಲನಗರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ