ಆ್ಯಪ್ನಗರ

ವಿಜಯಪುರದಲ್ಲಿ ಸುರಂಗ ಮಾರ್ಗ ಪತ್ತೆ

ಆದಿಲ್‌ಶಾಹಿ ಕಾಲದ ಸುರಂಗ ಮಾರ್ಗ (ಕರೇಜ್‌) ಪುನರುಜ್ಜೀವನಗೊಳಿಸಲು ಸಚಿವ ಎಂ.ಬಿ. ಪಾಟೀಲ ಚಾಲನೆ ನೀಡಿದ ಬೆನ್ನಲ್ಲೇ, ಇಲ್ಲಿನ ಕಲ್ಯಾಣ ನಗರದಲ್ಲಿ ರಸ್ತೆ ಕಾಮಗಾರಿ ಮಾಡುವ ವೇಳೆ ಆದಿಲ್‌ಶಾಹಿ ಕಾಲದ ಸುರಂಗ ಮಾರ್ಗ ಪತ್ತೆಯಾಗಿದೆ.

Vijaya Karnataka 15 Sep 2017, 9:13 pm

ವಿಜಯಪುರ: ಆದಿಲ್‌ಶಾಹಿ ಕಾಲದ ಸುರಂಗ ಮಾರ್ಗ (ಕರೇಜ್‌) ಪುನರುಜ್ಜೀವನಗೊಳಿಸಲು ಸಚಿವ ಎಂ.ಬಿ. ಪಾಟೀಲ ಚಾಲನೆ ನೀಡಿದ ಬೆನ್ನಲ್ಲೇ, ಇಲ್ಲಿನ ಕಲ್ಯಾಣ ನಗರದಲ್ಲಿ ರಸ್ತೆ ಕಾಮಗಾರಿ ಮಾಡುವ ವೇಳೆ ಆದಿಲ್‌ಶಾಹಿ ಕಾಲದ ಸುರಂಗ ಮಾರ್ಗ ಪತ್ತೆಯಾಗಿದೆ.

ಈ ರಸ್ತೆಯಲ್ಲಿ ಬೃಹದಾಕಾರದ ಕಂದಕ ಬಿದ್ದಿದೆ. ಆ ಕಂದಕದಲ್ಲಿ ಇಣುಕಿ ನೋಡಿದಾಗ ಅಲ್ಲಿ ಸುರಂಗ ಮಾರ್ಗ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಬೃಹದಾಕಾರದ ಈ ಕಂದಕ ನೋಡಿದ ರಸ್ತೆ ಕಾಮಗಾರಿ ಕಾರ್ಮಿಕರು ಅದನ್ನು ಮುಚ್ಚದೇ ಹೋಗಿದ್ದಾರೆ. ಆದರೆ ಈ ಗುಂಡಿಯಲ್ಲಿ ಯಾರಾದರೂ ಬಿದ್ದರೆ ಹೇಗೆ? ಎಂಬ ಚಿಂತೆ ಕಲ್ಯಾಣನಗರ ನಿವಾಸಿಗಳನ್ನು ಬಾಧಿಸುತ್ತಿದೆ.

ಕಂದಕ ಮುಚ್ಚಿಸಿ: ಬೃಹದಾಕಾರದ ಈ ಕಂದಕ ಮುಚ್ಚದ ಪಾಲಿಕೆ ಅಧಿಕಾರಿಗಳ ವಿರುದ್ಧ ನಗರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವಘಡ ಸಂಭವಿಸುವ ಮುನ್ನ ಮುಚ್ಚಿಸಬೇಕೆಂದು ನಿವಾಸಿಗಳು ಪಾಲಿಕೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಮೇಲ್ನೋಟಕ್ಕೆ ಅದು ಸುರಂಗ ಮಾರ್ಗದಂತೆ ಗೋಚರಿಸುತ್ತಿದೆ. ಭಾರತೀಯ ಪುರಾತತ್ತ್ವ ಸಂರಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇವೆ.

Vijaya Karnataka Web tunnel in vijayapur
ವಿಜಯಪುರದಲ್ಲಿ ಸುರಂಗ ಮಾರ್ಗ ಪತ್ತೆ

ಹರ್ಷ ಶೆಟ್ಟಿ, ಆಯುಕ್ತ, ಮಹಾನಗರ ಪಾಲಿಕೆ, ವಿಜಯಪುರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ