ಆ್ಯಪ್ನಗರ

ನಾರಿನಾಂಶವಿರುವ ಸಿರಿಧಾನ್ಯ ಬಳಕೆ ಮಾಡಿ

ವಿಜಯಪುರ : ನಮ್ಮ ಪೂರ್ವಜರು ಸಿರಿಧಾನ್ಯಗಳನ್ನು ಬೆಳೆದು, ಅದೇ ಆಹಾರ ಸೇವಿಸುತ್ತಿದ್ದುದರಿಂದ ಅವರು ಬಿಪಿ, ಸುಗರ್‌ನಂಥ ಕಾಯಿಲೆಗಳಿಲ್ಲದೇ ದೀರ್ಘಾಯುಷಿಗಳಾಗಿ ಬಾಳಿದರು. ಆದರೆ ಕಲುಷಿತ ಆಹಾರ ಸೇವಿಸಿ ಆಸ್ಪತ್ರೆಗೆ ಎಡತಾಕುತ್ತಿದ್ದೇವೆ. ಹೀಗಾಗಿ ಆಸ್ಪತ್ರೆಗಳು ನಾಯಿಕೊಡೆಗಳಂತೆ ತಲೆಎತ್ತುತ್ತಿವೆ ಎಂದು ಸಿರಿಧಾನ್ಯ ಹೊಟೆಲ್‌ ಉದ್ಯಮಿ ಮಲ್ಲಿಕಾರ್ಜುನ ಹಟ್ಟಿ ಹೇಳಿದರು.

Vijaya Karnataka 14 Jan 2019, 5:00 am
ವಿಜಯಪುರ : ನಮ್ಮ ಪೂರ್ವಜರು ಸಿರಿಧಾನ್ಯಗಳನ್ನು ಬೆಳೆದು, ಅದೇ ಆಹಾರ ಸೇವಿಸುತ್ತಿದ್ದುದರಿಂದ ಅವರು ಬಿಪಿ, ಸುಗರ್‌ನಂಥ ಕಾಯಿಲೆಗಳಿಲ್ಲದೇ ದೀರ್ಘಾಯುಷಿಗಳಾಗಿ ಬಾಳಿದರು. ಆದರೆ ಕಲುಷಿತ ಆಹಾರ ಸೇವಿಸಿ ಆಸ್ಪತ್ರೆಗೆ ಎಡತಾಕುತ್ತಿದ್ದೇವೆ. ಹೀಗಾಗಿ ಆಸ್ಪತ್ರೆಗಳು ನಾಯಿಕೊಡೆಗಳಂತೆ ತಲೆಎತ್ತುತ್ತಿವೆ ಎಂದು ಸಿರಿಧಾನ್ಯ ಹೊಟೆಲ್‌ ಉದ್ಯಮಿ ಮಲ್ಲಿಕಾರ್ಜುನ ಹಟ್ಟಿ ಹೇಳಿದರು.
Vijaya Karnataka Web use fiber concentrate
ನಾರಿನಾಂಶವಿರುವ ಸಿರಿಧಾನ್ಯ ಬಳಕೆ ಮಾಡಿ


ಜಿಲ್ಲಾಡಳಿತ, ಜಿಪಂ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಎಸ್‌ಎಸ್‌ ಪ್ರೌಢಶಾಲೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಾವಯವ ಕೃಷಿ ಮತ್ತು ಸಿರಿಧಾನ್ಯ ಮೇಳದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಅಮೆರಿಕೆ ಮತ್ತಿತರೆ ರಾಷ್ಟ್ರಗಳಲ್ಲಿ ರೈತರಿಗೆ ಊಳಲು ಜಮೀನಿಲ್ಲ. ಅಲ್ಲಿ ಹಿಮ ಬೀಳುತ್ತದೆ. ಇನ್ನೊಂದೆಡೆ ಬರಡು ಜಮೀನು. ಆದರೆ ನಮ್ಮಲ್ಲಿ ಯಥೇಚ್ಛ ಸಂಪನ್ಮೂಲಗಳಿವೆ. ಆದಾಗ್ಯೂ ಅವುಗಳನ್ನು ಸದ್ಭಳಕೆ ಮಾಡಿಕೊಳ್ಳುತ್ತಿಲ್ಲ. ಬದಲಿಗೆ ಜಂಕ ಫುಡ್‌ ಮೊರೆ ಹೋಗಿದ್ದರಿಂದಾಗಿ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದೇವೆ ಎಂದರು.

ಆದರೆ ಸಿರಿಧಾನ್ಯದ ಆಹಾರ ಸೇವಿಸುವುದರಿಂದ ಶ್ವಾಸಕೋಶ ತೊಂದರೆ, ಮಧುಮೇಹ, ಸಂಧಿವಾತ, ಮುಷ್ಠಿರೋಗ, ಕಾಮಾಲೆ, ನರದೌರ್ಬಲ್ಯದಂಥ ರೋಗಗಳಿಂದ ಮುಕ್ತಿ ಪಡೆದುಕೊಳ್ಳಬಹುದಾಗಿದೆ. ಈ ಆಹಾರ ಪದ್ಧತಿಯಲ್ಲಿ ನಾರಿನಾಂಶ ಅಧಿಕವಾಗಿದ್ದರಿಂದ ದೇಹಕ್ಕೆ ಅನುಕೂಲವಾಗಿದೆ ಎಂದರು.

ಶಿವಮೊಗ್ಗದ ಪ್ರಗತಿಪರ ರೈತ ಈಶ್ವರನ್‌ ಮಾತನಾಡಿ, ರಾಗಿ ಹಾಗೂ ಸಜ್ಜೆ ಆಫ್ರಿಕಾ ಖಂಡದ ಮಹತ್ವದ ಆಹಾರ ಪದ್ಧತಿಯಾಗಿದೆ. ಆಫ್ರಿಕಾದಲ್ಲಿ ಇಂದಿಗೂ ಯಥೇಚ್ಛವಾಗಿ ಸಜ್ಜೆ ಹಾಗೂ ರಾಗಿ ಉತ್ಪನ್ನಗಳನ್ನು ಬಳಕೆ ಮಾಡುತ್ತಿದ್ದಾರೆ. ಸಿರಿಧಾನ್ಯಗಳಿಗೆ ಅತ್ಯಂತ ಪ್ರಾಚೀನವಾದ ಇತಿಹಾಸವಿದೆ ಎಂದರು.

ಪ್ರಗತಿಪರ ರೈತ ಬಸನಗೌಡ ಕನಕರೆಡ್ಡಿ ಮಾತನಾಡಿ, ಭವಿಷ್ಯದ ಪೀಳಿಗೆಯ ಹಿತದೃಷ್ಟಿಯಿಂದ ಫಲವತ್ತಾದ ಭೂಮಿ ಬಿಟ್ಟುಕೊಡಬೇಕಿದೆ. ಹಾಗಾಗಿ ರಸಾಯನಿಕ ಬಳಸಿ ಭೂಮಿಯನ್ನು ವಿಷ ಮಾಡುವುದನ್ನು ಬಿಡಬೇಕೆಂದರು.

ಪ್ರಗತಿಪರ ರೈತರಾದ ರಾಜಶೇಖರ ನಿಂಬರಗಿ, ಮಲ್ಲಿಕಾರ್ಜುನ ಹಟ್ಟಿ, ಸಿದ್ಧಣ್ಣ ಬಾಲಗೊಂಡ, ಭೂಸಗೊಂಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ, ಕೃಷಿ ಅಧಿಕಾರಿಗಳಾದ ಶಿವನಗೌಡ ಪಾಟೀಲ, ಎ.ಪಿ. ಬಿರಾದಾರ, ಮಂಜುಳಾ ಬಂಕಾಪುರ (ಸುರಪುರ) ಮತ್ತಿತರರಿದ್ದರು.

----------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ