ಆ್ಯಪ್ನಗರ

ಸಿದ್ದರಾಮಯ್ಯ ಬಾಯಲ್ಲಿ 'ಜಯಮ್ಮ' ಆದರು ಕಿತ್ತೂರು ರಾಣಿ 'ಚೆನ್ನಮ್ಮ'! ನಗೆಗಡಲಲ್ಲಿ ತೇಲಿದ್ರು ಜನ!

ಕಿತ್ತೂರು ರಾಣಿ ಚೆನ್ನಮ್ಮ ಎನ್ನುವ ಬದಲು ಕಿತ್ತೂರು ರಾಣಿ ಜಯಮ್ಮ ಎನ್ನುವ ಮೂಲಕ, ಸಮಾವೇಶಕ್ಕೆ ಆಗಮಿಸಿದ್ದ ಜನರನ್ನು ಸಿದ್ದರಾಮಯ್ಯ ನಗೆಗಡಲಲ್ಲಿ ತೇಲಿಸಿದರು. ಬಳಿಕ, ಬಾಯ್ತಪ್ಪಿನಿಂದ ಆ ರೀತಿ ಹೇಳಿದ್ದಾಗಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

Vijaya Karnataka 12 Nov 2019, 8:57 pm
ವಿಜಯಪುರ: ಭಾಷಣ ಮಾಡುವ ಭರದಲ್ಲಿ ಹಲವು ಬಾರಿ ಎಡವಟ್ಟುಗಳನ್ನು ಮಾಡಿರುವ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ, ವಿಜಯಪುರದಲ್ಲೂ ಅದೇ ಎಡವಟ್ಟುಗಳ ಸರಣಿ ಮುಂದುವರೆಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಎನ್ನುವ ಬದಲು ಕಿತ್ತೂರು ರಾಣಿ ಜಯಮ್ಮ ಎನ್ನುವ ಮೂಲಕ, ಸಮಾವೇಶಕ್ಕೆ ಆಗಮಿಸಿದ್ದ ಜನರನ್ನು ಸಿದ್ದರಾಮಯ್ಯ ನಗೆಗಡಲಲ್ಲಿ ತೇಲಿಸಿದರು. ಬಳಿಕ, ಬಾಯ್ತಪ್ಪಿನಿಂದ ಆ ರೀತಿ ಹೇಳಿದ್ದಾಗಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
Vijaya Karnataka Web vijayapura former cm siddaramaiah mistake siddu told jayamma instred of chennamma
ಸಿದ್ದರಾಮಯ್ಯ ಬಾಯಲ್ಲಿ 'ಜಯಮ್ಮ' ಆದರು ಕಿತ್ತೂರು ರಾಣಿ 'ಚೆನ್ನಮ್ಮ'! ನಗೆಗಡಲಲ್ಲಿ ತೇಲಿದ್ರು ಜನ!


ಸಿದ್ದರಾಮಯ್ಯ ವಿರುದ್ಧ 'ಮೂಲ ಮತ್ತು ನಿಷ್ಠ' ಕಾಂಗ್ರೆಸಿಗರಿಂದ ಅಸಹಕಾರ ಸಂದೇಶ

ವಿಜಯಪುರ ನಗರದ ದರಬಾರ್‌ ಹೈಸ್ಕೂಲ್‌ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಮಾವೇಶದುದ್ದಕ್ಕೂ ಬಿಜೆಪಿ ಹಾಗೂ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದು

ಯುಪಿಎ ಸರಕಾರವಿದ್ದಾಗ ದೇಶದಲ್ಲಿ ನಿರುದ್ಯೋಗ ಶೇ.2.5ರಷ್ಟಿತ್ತು, ಈಗ ಶೇ.8.5ಕ್ಕೇರಿದೆ ಎಂದು ಕಿಡಿಕಾರಿದ ಸಿದ್ದು, ಕಳೆದ ಚುನಾವಣೆಯಲ್ಲಿ ಮೋದಿ ಯುವಜನತೆಯಲ್ಲಿ ಭಾವನಾತ್ಮಕ ವಿಚಾರ ಬಿತ್ತಿ ಅಧಿಕಾರಕ್ಕೆ ಬಂದರು. ಇಂದು ಅದೇ ಯುವಜನತೆಗೆ ಪಂಗನಾಮ ಹಾಕಿದ್ದಾರೆ. ಇದೇನಾ ಮೋದಿಯವರ ಸಾಧನೆ ಎಂದು ಲೇವಡಿ ಮಾಡಿದರು.

ದೇವೇಗೌಡ - ಬಿಎಸ್ ವೈ ಒಳ ಒಪ್ಪಂದ ಸ್ಪಷ್ಟ: ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ ಮಾಡಿದ ನೋಟ್‌ ಬ್ಯಾನ್‌ನಿಂದ ಅಂಬಾನಿ, ಅದಾನಿ ತಮ್ಮ ಕಪ್ಪು ಹಣವನ್ನು ಬ್ಯಾಂಕ್‌ ಮೂಲಕ ವೈಟ್‌ ಮಾಡಿಕೊಂಡರೇ ವಿನಃ ಬಡವರಿಗೆ ಸ್ವಲ್ಪವೂ ಅನುಕೂಲ ಆಗಲಿಲ್ಲ. ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಶೇ.8ರಷ್ಟಿದ್ದ ಜಿಡಿಪಿ ಈಗ ಶೇ.3ಕ್ಕೆ ಕುಸಿದಿದೆ. ಸುಳ್ಳು ಹೇಳೋದೇ ಬಿಜೆಪಿಯವರ ಸಾಧನೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಸಬ್‌ ಕಾ ವಿನಾಶ್‌: ಮೋದಿ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎನ್ನುತ್ತಾರೆ. ಆದರೆ ಇಂದು ಕೇಂದ್ರ ಸರಕಾರದ ದಿಕ್ಕು ದಿಸೆಯಿಲ್ಲದ ಆರ್ಥಿಕ ನೀತಿಯಿಂದ ಸಬ್‌ ಕಾ ವಿನಾಶ್‌ ನಡೆದಿದೆ. ಮಾತೆತ್ತಿದರೆ ಮೋದಿ ನನ್ನದು 56 ಇಂಚು ಎದೆ ಇದೆ ಎನ್ನುತ್ತಾರೆ. ಅದು ಬಹಳ ಜನರಿಗೆ ಇರುತ್ತದೆ. ಎಷ್ಟು ಇಂಚು ಎದೆ ಇದೆ ಎನ್ನೋದು ಮುಖ್ಯವಲ್ಲ. ಅದರಲ್ಲಿ ಮಾತೃ ಹೃದಯ ಇರೋದು ಮುಖ್ಯ ಎಂದು ಸಿದ್ದರಾಮಯ್ಯ ಟಾಂಗ್‌ ನೀಡಿದರು.

ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ : ಮಹಾರಾಷ್ಟ್ರ, ಹರಿಯಾಣ ಚುನಾವಣೆಯಲ್ಲಿ ಮೋದಿ ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡಲಿಲ್ಲ. ಕೇವಲ ಬಾಲಾಕೋಟ್‌, ಪುಲ್ವಾಮ ದಾಳಿ ವಿಚಾರ ಹೇಳಿ ಚುನಾವಣೆ ಎದುರಿಸಿದರು. ಅವರೆಡೂ ರಾಜ್ಯಗಳಲ್ಲಿ ನಮ್ಮ ಪಕ್ಷ ಗಂಭೀರವಾಗಿ ಫೈಟ್‌ ಮಾಡಿದ್ದರೆ ಇನ್ನೂ ಹೆಚ್ಚಿನ ಸ್ಥಾನ ಬರುತ್ತಿದ್ದವು. ನಾವು ಕಾಂಗ್ರೆಸ್ಸಿನವರು ಒಂದೇ ಧ್ವನಿಯಲ್ಲಿ ಮಾತಾಡುತ್ತಿಲ್ಲ. ಒಂದು ವೇಳೆ ನಾವೆಲ್ಲ ಒಂದೇ ಧ್ವನಿಯಿಂದ ಮಾತಾಡಿದರೆ ಕರ್ನಾಟಕ ಮಾತ್ರವಲ್ಲ ದೇಶದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಿದ್ದರಾಮಯ್ಯ ಭವಿಷ್ಯ ನೀಡಿದರು.

ಸಿದ್ದರಾಮಯ್ಯ ಹೇಳುವಂತೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರುವವರು ಯಾರು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ