ಆ್ಯಪ್ನಗರ

ವಿಜಯಪುರ ಹುದ್ದೆ ಪ್ರ ’ಭಾರ’

ವಿಜಯಪುರ: ವಿಜಯಪುರದಲ್ಲಿಅಧಿಕಾರಿಗಳ ಕೊರತೆಯಿಂದ ಆಡಳಿತದ ಭಾರ ಕೆಲವರ ಮೇಲೆಯೇ ಬೀಳುತ್ತಿದೆ.

Vijaya Karnataka 11 Feb 2020, 5:00 am
ವಿಜಯಪುರ: ವಿಜಯಪುರದಲ್ಲಿಅಧಿಕಾರಿಗಳ ಕೊರತೆಯಿಂದ ಆಡಳಿತದ ಭಾರ ಕೆಲವರ ಮೇಲೆಯೇ ಬೀಳುತ್ತಿದೆ.
Vijaya Karnataka Web vijayapura post office vacant
ವಿಜಯಪುರ ಹುದ್ದೆ ಪ್ರ ’ಭಾರ’


ಜಿಲ್ಲಾಪಂಚಾಯಿತಿ ಮುಖ್ಯಕಾರ‍್ಯನಿರ್ವಹಣಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಸೇರಿದಂತೆ ಪ್ರಮುಖ ಹುದ್ದೆಗಳು ಖಾಲಿ ಉಳಿದಿದ್ದು, ಕೆಲವೇ ಅಧಿಕಾರಿಗಳಲ್ಲಿಅಧಿಕಾರ ಉಳಿಯುವ ಜತೆಗೆ ಒತ್ತಡವೂ ಹೆಚ್ಚಿದೆ. ಕೆಲವು ಹುದ್ದೆಗಳಿಗೆ ಅಧಿಕಾರಿಗಳನ್ನು ಸರಕಾರ ನಿಯೋಜಿಸಿದ್ದರೂ ಅವರು ಇನ್ನೂ ಬಂದಿಲ್ಲ. ಮತ್ತಷ್ಟು ಹುದ್ದೆಗೆ ಯಾರೂ ಬಂದೇ ಇಲ್ಲ. ಉತ್ತರ ಕರ್ನಾಟಕದಲ್ಲಿಅಧಿಕಾರಿಗಳಿಲ್ಲದೇ ಅಭಿವೃದ್ಧಿಯಲ್ಲಿಜಿಲ್ಲೆಗಳು ಹಿಂದೆ ಬೀಳುತ್ತಿವೆ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಈಗ ಇದು ಇನ್ನಷ್ಟು ಹೆಚ್ಚಿದೆ.

ಸುಸ್ತಾದರೂ ಔದ್ರಾಮ್‌

ವಿಜಯಪುರದಲ್ಲಿಅತಿ ಹೆಚ್ಚು ಪ್ರಭಾರದ ಹೊಣೆ ಹೊತ್ತವರು ಕೆಎಎಸ್‌ ಅಧಿಕಾರಿ ಡಾ.ಔದ್ರಾಮ್‌. ಎರಡು ವರ್ಷದಿಂದ ಉಪವಿಭಾಗಾಧಿಕಾರಿ ದರ್ಜೆ ಹುದ್ದೆಯಲ್ಲಿಕಾರ‍್ಯನಿರ್ವಹಿಸುತ್ತಿರುವ ಔದ್ರಾಮ್‌ ಅವರು ಹುದ್ದೆ ಖಾಲಿಯಾದ ತಕ್ಷಣ ಹೆಚ್ಚುವರಿ ಕಾರ‍್ಯಭಾರ ವಹಿಸಿಕೊಳ್ಳುವಂತಾಗಿದೆ. ಸದ್ಯ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಜತೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಹುದ್ದೆಯನ್ನು ಹೆಚ್ಚುವರಿಯಾಗಿ ನೋಡಿಕೊಳ್ಳುತ್ತಿದ್ದಾರೆ. ಬೆಳಗ್ಗೆ ಪ್ರಾಧಿಕಾರ, ಮಧ್ಯಾಹ್ನ ಡಿಸಿ ಕಚೇರಿ, ಸಂಜೆ ಮತ್ತೆ ಪ್ರಾಧಿಕಾರ ಕಚೇರಿ ಎಂದು ಸಮಯ ನಿಗದಿಪಡಿಸಿಕೊಂಡು ಮೂರು ಕಚೇರಿಗೆ ನಿತ್ಯ ಹೋಗುತ್ತಾರೆ ಡಾ.ಔದ್ರಾಮ್‌. ಕೆಲವೊಮ್ಮೆ ರಾತ್ರಿಯಾದರೂ ಕಡತ ಮುಗಿಯದೇ ತಡರಾತ್ರಿ ಹೋಗಿರುವ ಉದಾಹರಣೆಯೂ ಇದೆ.

ಹೆಚ್ಚುವರಿ ಡಿಸಿಯಾಗಿ ರಮೇಶ್‌ ಕಳಸದ್‌ ಅವರನ್ನು 15 ದಿನದ ಹಿಂದೆಯೇ ಸರಕಾರ ನೇಮಿಸಿದರೂ ಬೆಳಗಾವಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಹುದ್ದೆಗೆ ಮತ್ತೊಬ್ಬರನ್ನು ನೇಮಿಸದೇ ಬಿಡುಗಡೆಯಾಗಿರಲಿಲ್ಲ. ಈಗ ಹೊಸ ಅಧಿಕಾರಿ ನಿಯೋಜನೆಗೊಂಡಿದ್ದು ಒಂದೆರಡು ದಿನದಲ್ಲಿಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ರಮೇಶ್‌ ಬರಬಹುದು ಎನ್ನಲಾಗುತ್ತಿದ್ದು. ಇನ್ನೂ ಖಚಿತವಾಗಿಲ್ಲ.

ಅದೇ ರೀತಿ ನಗರದ ಸ್ಥಳೀಯ ಸಂಸ್ಥೆಗಳ ಹೊಣೆ ನೋಡುವ ಯೋಜನಾ ನಿರ್ದೇಶಕರ ಹುದ್ದೆಯೂ ಪ್ರಮುಖವಾಗಿದ್ದು ಅಲ್ಲಿಯಾರನ್ನೂ ನಿಯೋಜಿಸದೇ ಆಡಳಿತಕ್ಕೆ ತೊಂದರೆಯಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಜಿಲ್ಲೆಯ ಸಮಾಜಕಲ್ಯಾಧಿಕಾರಿಯಾಗಿರುವ ಮಹೇಶ್‌ ಪೋತದಾರ್‌ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹುದ್ದೆ ಹೆಚ್ಚುವರಿಯಾಗಿ ಅಲಂಕರಿಸಿ ಆರು ತಿಂಗಳೇ ಆಗುತ್ತಾ ಬಂದಿದೆ. ಹಾಸ್ಟೆಲ್‌ಗಳ ಉಸ್ತುವಾರಿಯೇ ಭಾರವಾಗಿರುವಾಗ ಕನ್ನಡ ಮತ್ತು ಸಂಸ್ಕೃತಿಯ ಒತ್ತಡವೂ ಅವರನ್ನು ಕಾಡುತ್ತಿದೆ.

ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹುದ್ದೆಯೂ ಖಾಲಿ ಬಿದ್ದು ವರ್ಷವೇ ಆಗಿತ್ತು. ಈಗ ಹೊಸ ಅಧಿಕಾರಿ ನಿಯೋಜನೆಗೊಂಡಿರುವುದರಿಂದ ಉಪವಿಭಾಗಾಧಿಕಾರಿ ಸೋಮಲಿಂಗಗೆಣ್ಣೂರ ಅವರು ನಿರಾಳವಾಗುವಂತಾಗಿದೆ.

ಜಿಪಂ ಸಿಇ ನೇಮಿಸಿ

ಜಿಲ್ಲಾಪಂಚಾಯಿತಿ ಮುಖ್ಯಕಾರ‍್ಯನಿರ್ವಹಣಾಧಿಕಾರಿ ಹುದ್ದೆ ಪ್ರಭಾರ ಹೊಂದಿರುವ ಗೋವಿಂದ ರಡ್ಡಿ ಅವರು ಉಪಕಾರ‍್ಯದರ್ಶಿ ಕೆಲಸವನ್ನೂ ಮಾಡಬೇಕು. ಅಲ್ಲಿನ ಕಾರ‍್ಯಭಾರದೊಟ್ಟಿಗೆ ಸಿಇಒ ಹುದ್ದೆ ನೋಡಿಕೊಳ್ಳುತ್ತಿದ್ದು, ಪೂರ್ಣ ಪ್ರಮಾಣದ ಐಎಎಸ್‌ ಅಧಿಕಾರಿ ನಿಯೋಜಿಸಿದರೆ ಜಿಲ್ಲಾಪಂಚಾಯಿತಿ ಆಡಳಿತ ಚುರುಕುಗೊಳ್ಳಲಿದೆ ಎನ್ನುವ ಸಲಹೆ ಕೇಳಿ ಬಂದಿದೆ.

ಪಾಲಿಕೆಯಲ್ಲೂ

ವಿಜಯಪುರ ನಗರಪಾಲಿಕೆಯಂತೂ ಖಾಲಿ ಹುದ್ದೆಗಳಿಂದ ಕಂಗೆಟ್ಟಿದೆ. ಶಾಸಕ ಬಸನಗೌಡ ಯತ್ನಾಳರ ಪ್ರಯತ್ನದ ಫಲವಾಗಿ ಕೆಲ ಹುದ್ದೆಗಳಿಗೆ ಅಧಿಕಾರಿಗಳು ಬಂದರೂ ಹೆಚ್ಚುವರಿ ಆಯುಕ್ತ ಸೇರಿ ಹಲವು ಹುದ್ದೆಗಳು ಖಾಲಿಯೇ ಉಳಿದಿವೆ. ಅಲ್ಲಿಕನಿಷ್ಟ ಒಬ್ಬೊಬ್ಬರು ಎರಡರಿಂದ ಮೂರು ಕಾರ‍್ಯಭಾರ ನೋಡಿಕೊಳ್ಳುವ ಪರಿಸ್ಥಿತಿ ಈಗಲೂ ಇದೆ.

===========

ಸಹಜವಾಗಿಯೇ ಒಂದು ಹುದ್ದೆ ಇದ್ದಾಗಲೇ ಒತ್ತಡ ಇರುತ್ತದೆ. ಮೂರು ಹುದ್ದೆ ಎಂದರೆ ಹೆಚ್ಚಿನ ಕೆಲಸ ಬೇಡುತ್ತದೆ. ಇದರಿಂದ ಸಮಯ ಹೊಂದಾಣಿಕೆ ಮಾಡಿಕೊಂಡು ಎಲ್ಲಿಯೂ ಕಡತ ಉಳಿಯದಂತೆ ನೋಡಿಕೊಳ್ಳುತ್ತಿದ್ದೇನೆ.

- ಡಾ.ಔದ್ರಾಮ್‌, ಎಡಿಸಿ(ಪ್ರಭಾರ)

=======

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ