ಆ್ಯಪ್ನಗರ

ಬಾಯಿ ಬಡೆದುಕೊಂಡ ನೀರೆಯರು

ಸಿಂದಗಿ : ಕುಡಿವ ನೀರಿನ ಸಮಸ್ಯೆ ಪರಿಹರಿಸದ ಪುರಸಭೆ ಅಧಿಕಾರಿ ಹಾಗೂ ಆಡಳಿತ ವರ್ಗ ಮತ್ತು ಸ್ಥಳೀಯ ಸದಸ್ಯರ ನಿರ್ಲಕ್ಷ್ಯ ಖಂಡಿಸಿ ಪಟ್ಟಣದ 7ನೇ ವಾರ್ಡ್‌ನ ವಡ್ಡರ ಓಣಿಯ ನಿವಾಸಿಗಳು ಹಲಗೆ ಬಾರಿಸುತ್ತ ಪುರಸಭೆ ಕಚೇರಿಗೆ ಕೆಲಕಾಲ ಬೀಗ ಜಡಿದು, ಖಾಲಿ ಕೊಡಗಳನ್ನು ತಲೆಯ ಮೇಲೆ ಹೊತ್ತು ಗುರುವಾರ ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka 22 Feb 2019, 5:00 am
ಸಿಂದಗಿ : ಕುಡಿವ ನೀರಿನ ಸಮಸ್ಯೆ ಪರಿಹರಿಸದ ಪುರಸಭೆ ಅಧಿಕಾರಿ ಹಾಗೂ ಆಡಳಿತ ವರ್ಗ ಮತ್ತು ಸ್ಥಳೀಯ ಸದಸ್ಯರ ನಿರ್ಲಕ್ಷ್ಯ ಖಂಡಿಸಿ ಪಟ್ಟಣದ 7ನೇ ವಾರ್ಡ್‌ನ ವಡ್ಡರ ಓಣಿಯ ನಿವಾಸಿಗಳು ಹಲಗೆ ಬಾರಿಸುತ್ತ ಪುರಸಭೆ ಕಚೇರಿಗೆ ಕೆಲಕಾಲ ಬೀಗ ಜಡಿದು, ಖಾಲಿ ಕೊಡಗಳನ್ನು ತಲೆಯ ಮೇಲೆ ಹೊತ್ತು ಗುರುವಾರ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web water problem
ಬಾಯಿ ಬಡೆದುಕೊಂಡ ನೀರೆಯರು


ಸ್ಥಳೀಯ ನಿವಾಸಿ ತಾಯಮ್ಮ ಮತ್ತು ಕೆಲ ಮಹಿಳೆಯರು, ಕಳೆದ ಒಂದು ತಿಂಗಳಿಂದಲೂ ಕುಡಿವ ನೀರು ಒದಗಿಸುತಿಲ್ಲ ಎಂದು ಆರೋಪಿಸಿ, ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಹಾರಿಕೆ ಉತ್ತರಗಳೇ ಜಾಸ್ತಿ. ಕುಡಿಯಲು ನೀರಿಲ್ಲದೇ ಸಂಕಟಪಡುತ್ತಿರುವ ನಮ್ಮ ಸಮಸ್ಯೆ ಆಲಿಸುತ್ತಿಲ್ಲ. ಜತೆಗೆ ಟ್ಯಾಂಕರ್‌ ನೀರು ಕೊಡುತ್ತೇವೆ ಎಂದು ಹೇಳಿ ನಮ್ಮೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ದೂರಿದರು.

ವಾರ್ಡ್‌ನಲ್ಲಿ ಶೌಚಾಲಯ ಸಮಸ್ಯೆ ಎಂದಿನಂತೆಯೇ ಇದೆ. ಮಹಿಳೆಯರು ಮಾನಬಿಟ್ಟು ರಸ್ತೆಗೆ ಕುಳಿತುಕೊಳ್ಳುವ ದುರ್ದೈವ ಬಂದಿದೆ. ಈ ಬಗ್ಗೆಯೂ ಅಧಿಕಾರಿ ಅಥವಾ ಸದಸ್ಯರಾಗಲಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ. ಕೂಡಲೇ ಕುಡಿಯುವ ನೀರು ಒದಗಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.

ಪುರಸಭೆಯ 15 ಮತ್ತು 16ನೇ ವಾರ್ಡ್‌ನ ಮಹಿಳಾ ನಿವಾಸಿಗಳು ಖಾಲಿ ಕೊಡಗಳೊಂದಿಗೆ ಪ್ರತಿಭಟಿಸಿದ ಘಟನೆ ಮಾಸುವ ಮುನ್ನವೇ ಮತ್ತೆ ಕುಡಿಯುವ ನೀರಿಗೆ ಆಗ್ರಹಿಸಿ ಮಹಿಳಾ ನಿವಾಸಿಗಳ ಪ್ರತಿಭಟನೆ ಎರಡನೇ ದಿನವೂ ಮುಂದುವರಿದಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ