ಆ್ಯಪ್ನಗರ

ಆಲಮಟ್ಟಿ ಜಲಾಶಯದಿಂದ 5.70 ಕ್ಯುಸೆಕ್‌ ನೀರು ಹೊರಕ್ಕೆ

ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನುಸಾರ ಪರಿಹಾರ ಧನವನ್ನು ನೀಡುವ ಕುರಿತು ವಿಳಂಬ ತಪ್ಪಿಸಲು ಮುದ್ದೆಬಿಹಾಳ ಮತ್ತು ನಿಡಗುಂದಿ ತಹಶೀಲ್ದಾರರಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದಾರೆ.

Vijaya Karnataka Web 15 Aug 2019, 6:46 pm
ವಿಜಯಪುರ: ಜಿಲ್ಲೆಯ ಆಲಮಟ್ಟಿ ಜಲಾಶಯದಿಂದ 5.70 ಲಕ್ಷ ಕ್ಯುಸೆಕ್ ನೀರನ್ನು ನಾರಾಯಣಪುರ ಜಲಾಶಯಕ್ಕೆ ಬಿಡಲಾಯತು.
Vijaya Karnataka Web ಆಲಮಟ್ಟಿ
ಆಲಮಟ್ಟಿ


ಇದರಿಂದಾಗಿ ಮುದ್ದೆಬಿಹಾಳ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳ ನೀರಿನ ಮಟ್ಟ ಯಥಾಸ್ಥಿತಿಯಲ್ಲಿರುವುದರಿಂದ ಕಾಳಜಿ ಕೇಂದ್ರಗಳನ್ನು ಸಹ ಮುಂದುವರಿಸಲಾಗಿದೆ.

ಮುದ್ದೆಬಿಹಾಳ ತಾಲೂಕಿನ ಗಂಗೂರು, ಅಂಡರ್‌ಗಲ್, ನಾಗರಾಳ್, ಮುದೂರ, ದೇವೂರ್, ಕಮಲದಿಮ್ಮಿ, ಹೊಳೆಮಸೂತಿ, ಬಬಲಾದಿ, ಶಿರಗೂರ, ಚಿಕ್ಕ್‌ಗಲಗಲಿ ಗ್ರಾಮಗಳ ನಿರಾಶ್ರಿತರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಕೃಷ್ಣಾ ನದಿ ಮತ್ತು ಪ್ರವಾಹದಿಂದಾಗಿ ಹಾನಿಗೀಡಾದ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿ ನಾಶವಾದ ವಸ್ತುಗಳು ಸಂತ್ರಸ್ತರಿಗೆ ಸೂಕ್ತ ಸಮಯದಲ್ಲಿ ತಲುಪಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ