ಆ್ಯಪ್ನಗರ

ಕೃಷಿಕನ ಕಣ್ಣೀರಿಗೆ ಕಾರಣವಾದ ಕಲ್ಲಂಗಡಿ, ಕರಬೂಜ

ಕಲ್ಲಂಗಡಿ, ಕರಬೂಜದಿಂದ ಕೈ ತುಂಬಾ ಕಾಸು ಕಾಣಬಹುದು ಎಂದು ಕನಸು ಕಂಡ ಕೃಷಿಕನಿಗೆ ಕಿಲ್ಲರ್‌ ಕೊರೊನಾ ಮಾತ್ರ ಕಣ್ಣೀರು ಕರುಣಿಸಿದೆ.

Vijaya Karnataka Web 20 May 2020, 5:00 am
ಮಹೇಶ ಅಡಾಳಿ ನಿಡಗುಂದಿ: ಕಲ್ಲಂಗಡಿ, ಕರಬೂಜದಿಂದ ಕೈ ತುಂಬಾ ಕಾಸು ಕಾಣಬಹುದು ಎಂದು ಕನಸು ಕಂಡ ಕೃಷಿಕನಿಗೆ ಕಿಲ್ಲರ್‌ ಕೊರೊನಾ ಮಾತ್ರ ಕಣ್ಣೀರು ಕರುಣಿಸಿದೆ.
Vijaya Karnataka Web 13CDN2_38


ಬೇಸಿಗೆಯಲ್ಲಿಕಲ್ಲಂಗಡಿ, ಕರಬೂಜಕ್ಕೆ ಇನ್ನಿಲ್ಲದ ಬೇಡಿಕೆ ಆದರೆ ಈ ಬಾರಿ ಕೊರೊನಾ ತಡೆಗೆ ಸರಕಾರ ಜಾರಿ ಮಾಡಿದ ಲಾಕ್‌ಡೌನ್‌ದಿಂದ ಸೂಕ್ತ ಮಾರುಕಟ್ಟೆ, ದರ ಸಿಗದೇ ರೈತ ಕಣ್ಣೀರು ಸುರಿಸುವಂತಾಗಿದೆ.

ಮೂಲತಃ ಆಂಧ್ರಪ್ರದೇಶದ ರೈತ ಆಂಜನೆಯಲು ಅವರು ಪಟ್ಟಣದ ರೈತರೊಬ್ಬರ 24 ಎಕರೆ ಜಮೀನನ್ನು ವರ್ಷಕ್ಕೆ ಲಕ್ಷಾಂತರ ರೂ.ಗಳಿಗೆ ಲೀಜ್‌ಗೆ ಪಡೆದು 10 ಎಕರೆ ಕಲ್ಲಂಗಡಿ, 6 ಕರಬೂಜ, 10 ಚೆಂಡು ಹೂವು ಮತ್ತು 6 ಮೆಣಸಿನಕಾಯಿ ಬೆಳೆದಿದ್ದರು. ಎಲ್ಲವೂ ಕಟಾವಿಗೆ ಬಂದಿದ್ದು, ಅಪಾರ ಹಾನಿ ಅನುಭವಿಸುವಂತಾಗಿದೆ. ಜನರ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲಾಗಿದೆ. ಜತೆಗೆ ಕಲ್ಲಂಗಡಿ, ಕರಬೂಜ ದೇಹಕ್ಕೆ ತಂಪು ತರುವುದರಿಂದ ಕೊರೊನಾ ಹರಡುವಿಕೆಗೆ ಸಹಕಾರಿ ಎಂಬ ನಂಬಿಕೆಯಿಂದ ರೈತರ ಬೆಳೆಗಳು ಸಂಪೂರ್ಣ ಮಾರಾಟವಾಗುತ್ತಿಲ್ಲ.

ಪ್ರತಿ ಕಲ್ಲಂಗಡಿ ಸಸಿಗೆ 3 ರೂ.ಗಳಂತೆ 3 ಲಕ್ಷ ರೂ. ವೆಚ್ಚದಲ್ಲಿ1 ಲಕ್ಷ ಸಸಿಗಳನ್ನು ಹಚ್ಚಲಾಗಿದೆ. ಸಸಿಗೆ 12-15 ರೂ.ಗಳಂತೆ ಪ್ರತಿ ಸಸಿಗೆ ಖರ್ಚು ಮಾಡಿ ಬೆಳೆಸಲಾಗಿದೆ. ಕರಬೂಜ ಸಸಿಗೆ 2.60ರೂ.ಗಳಂತೆ 60 ಸಾವಿರ ಸಸಿಗಳನ್ನು ಬೆಳೆಸಾಗಿದೆ. ಪ್ರತಿ ಸಸಿಗೆ 18 ರೂ.ಗಳ ವೆಚ್ಚ ಮಾಡಲಾಗಿದೆ.

ಕಲ್ಲಂಗಡಿ 2-6 ಕೆಜಿ, ಕರಬೂಜ 1-3 ಕೆಜಿ ತೂಕ ಹೊಂದಿದ್ದು, ಸದ್ಯ ಬೆಂಗಳೂರಿನ ವ್ಯಾಪಾರಿಗಳು ಜಮೀನಿಗೆ ಬಂದು ಕಲ್ಲಂಗಡಿಗೆ ಕೆಜಿಗೆ 5 ರೂ., ಕರಬೂಜ ಕೆಜಿಗೆ 8 ರೂ.ನಂತೆ ತೆಗೆದುಕೊಂಡು ಹೋಗುತ್ತಿದ್ದಾರೆ. ನಾವೇ ಮಾರಾಟಕ್ಕೆ ಹೋದರೆ ಗಾಡಿ ಬಾಡಿಗೆ ಸೇರಿದಂತೆ ಮತ್ತಷ್ಟೂ ಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ಸಿಕ್ಕ ಬೆಲೆಗೆ ಮಾರಾಟ ಮಾಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ರೈತ ಆಂಜನೇಯ.

ಈ ಮೊದಲು 3 ಲಕ್ಷ ರೂ. ವೆಚ್ಚದಲ್ಲಿ6 ಎಕರೆಯಲ್ಲಿಮೆಣಸಿನಕಾಯಿ ಹಾಗೂ 8 ಲಕ್ಷ ರೂ. ವೆಚ್ಚದಲ್ಲಿ10 ಎಕರೆ ಚೆಂಡು ಹೂವು ಬೆಳೆಯಲಾಗಿತ್ತು. ಅವು ಕೂಡ ಮಾರಾಟವಾಗದೇ ಗಿಡದಲ್ಲೇ ಹೂವು, ಕಾಯಿ ಒಣಗಿ ಹಾನಿಯಾಗಿದೆ.

ವರ್ಷಕ್ಕೆ 5.40 ಲಕ್ಷ ರೂ.ಗಳಿಗೆ 24 ಎಕರೆ ಪ್ರದೇಶದ ಲೀಜ್‌ಗೆ ಪಡೆದು ಸಾಕಷ್ಟು ಖರ್ಚು ಹೂವು, ಹಣ್ಣು ಬೆಳೆದಿದ್ದೆ. ಲಾಕ್‌ಡೌನ್‌ದಿಂದಾಗಿ ಅಂದಾಜು 25 ಲಕ್ಷ ರೂ.ಗಳಿಗೂ ಅಧಿಕ ಹಾನಿಯಾಗಿದೆ. ಸರಕಾರ ನಮಗೆ ಮಾಡಿದ ಖರ್ಚನ್ನಾದರೂ ಪರಿಹಾರ ರೂಪದಲ್ಲಿನೀಡಬೇಕು. ಇಲ್ಲವಾದಲ್ಲಿಸಾಲದ ಸುಳಿಯಲ್ಲಿಸಿಲುಕುವ ಭೀತಿ ಕಾಡುತ್ತಿದೆ.
-ಆಂಜನೇಯಲು, ಹಣ್ಣು ಬೆಳೆಗಾರ, ನಿಡಗುಂದಿ

ಸರಕಾರದ ಮಾರ್ಗಸೂಚಿಯಂತೆ ಹಣ್ಣು ಬೆಳೆಗಾರರಿಗೆ ಪರಿಹಾರ ನೀಡಲಾಗುವುದು. ಹೂವು ಬೆಳೆಗಾರರಿಗೆ ಪರಿಹಾರ ನೀಡಲು ಈಗಾಗಲೇ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ.
-ಶಿವಲಿಂಗಪ್ರಭು ವಾಲಿ, ತಹಸೀಲ್ದಾರ್‌ ನಿಡಗುಂದಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ