ಆ್ಯಪ್ನಗರ

ಅನರ್ಹ ಶಾಸಕರಿಂದ ಸರಕಾರ ರಚನೆಯಾಗಿದೆ, ಅವರ ಋಣ ತೀರಿಸಬೇಕು: ಈಶ್ವರಪ್ಪ

ಬಿಜೆಪಿ ಸರಕಾರ ರಚನೆಯಾಗಿದ್ದೇ ಅನರ್ಹ ಶಾಸಕರಿಂದ. ಅವರು ರಾಜೀನಾಮೆ ನೀಡಿದ್ದರಿಂದ ನಮ್ಮ ಸರಕಾರ ರಚನೆಯಾಗಿದೆ, ಅವರ ಋಣ ತೀರಿಸಬೇಕು ಎಂದಿದ್ದಾರೆ ಈಶ್ವರಪ್ಪ

Vijaya Karnataka Web 3 Dec 2019, 5:25 pm
ವಿಜಯಪುರ: ಅನರ್ಹ ಶಾಸಕರ ಕೃಪೆಯಿಂದ ನಾವು ರಚಿಸಿದ್ದೇವೆ, ಅವರ ಋಣ ತೀರಿಸಬೇಕು. ಉಪ ಚುನಾವಣೆಯಲ್ಲಿ 15 ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ನಾವು ಮಂತ್ರಿ ಮಾಡುತ್ತೇವೆ ಎಂದು ಸಚಿವ ಕೆಎಸ್‌ ಈಶ್ವರಪ್ಪ ತಿಳಿಸಿದ್ದಾರೆ.
Vijaya Karnataka Web ಕೆಎಸ್‌ ಈಶ್ವರಪ್ಪ
ಕೆಎಸ್‌ ಈಶ್ವರಪ್ಪ


ಸಚಿವ ಕೆ.ಎಸ್.ಈಶ್ವರಪ್ಪ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಎಲ್ಲರನ್ನು ಬೈಯ್ಯುವ ಚಾಳಿ ಸಿದ್ದರಾಮಯ್ಯಗಿದೆ. ಮೋದಿ ಅವರನ್ನು ಸಿದ್ದರಾಮಯ್ಯ ಬೈಯುತ್ತಾರೆ. ಬೈದವರಿಗೆ ಜನ ಮತ ಕೊಡಲ್ಲ. ಕೆಲಸ ಮಾಡಿದವರಿಗೆ ಮಾತ್ರ ಮತ ಕೊಡುತ್ತಾರೆ ಎಂದರು.

ಬಿಜೆಪಿಯಲ್ಲಿ ಸಂಘಟನೆ ಇದೆ. ಸಾಮೂಹಿಕ‌ ನಾಯಕತ್ವದಲ್ಲಿ ನಾವು ಚುನಾವಣೆ ಎದುರಿಸುತ್ತಿದ್ದೇವೆ. ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಪಕ್ಷ ಸಂಘಟನೆ ಉತ್ತಮವಾಗಿದೆ. ಬಿಜೆಪಿಯ 15 ಅಭ್ಯರ್ಥಿಗಳು ಉಪ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಲ್ಲಿ ಎಲ್ಲ ನಾಯಕರೂ ಛಿದ್ರವಾಗಿ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಒಡೆದ ಮನೆಯಾಗಿದೆ. ಅವರಲ್ಲಿ ಸಂಘಟನೆಯ ಪ್ರಶ್ನೆಯೇ ಇಲ್ಲ. 15 ಸೀಟು ಗೆದ್ದು ಮುಂದಿನ
ಮೂರುವರೆ ವರ್ಷಗಳ ಕಾಲ ಯಡಿಯೂರಪ್ಪ ನವರೇ ಸಿಎಂ ಆಗಿರುತ್ತಾರೆ ಎಂದು ಈಶ್ವರಪ್ಪ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ