ವಿಜಯಪುರ: ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಮಾಡಿದ್ದ ಡೀಲರ್ನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಮಾಡಿದ್ದ ಆರೋಪದಡಿ ಬಾಡಿ ವಾರಂಟ್ ಮೇಲೆ ವೆಪನ್ ಡೀಲರ್ ಭಾಷಾಸಾಬ್ ನದಾಫ್ನನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಬಿ ಪೊಲೀಸರ ವಶದಲ್ಲಿರುವ ಭಾಷಾಸಾಬ್ ನದಾಫ್ ದರ್ಗಾ ಜೈಲಿನಲ್ಲಿದ್ದ. ಭೀಮಾತೀರದ ಹಂತಕ ಚಡಚಣ ಸಹೋದರರ ಹತ್ಯೆ ಪ್ರಕರಣದಲ್ಲಿ ಭಾಷಾಸಾಬ್ ನದಾಫ್ ಬಂಧನಕ್ಕೊಳಗಾಗಿದ್ದ.
ಅಂದಿನ ಪಿಎಸ್ಐ ಗೋಪಾಲ್ ಹಳ್ಳೂರಗೆ ಅಕ್ರಮವಾಗಿ ಶಸ್ತ್ರಾಸ್ತ್ರ ಪುರೈಕೆ ಮಾಡಿದ ಆರೋಪದ ಮೇರೆಗೆ ಸಿಸಿಬಿ ಪೊಲೀಸರು ನದಾಫ್ನನ್ನು ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. 2018ರ ಅಗಸ್ಟ್ನಲ್ಲಿ ಸಿಐಡಿ ಪೊಲೀಸರು ಭಾಷಾಸಾಬ್ನನ್ನು ಬಂಧಿಸಿದ್ದರು.
ಬೆಂಗಳೂರಿನಲ್ಲಿ ನಡೆದ ಶೂಟೌಟ್ ಪ್ರಕರಣವೊಂದರಲ್ಲಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಭಾಷಾಸಾಬ್ನನ್ನು ಬಾಡಿ ವಾರಂಟ್ ಮೇಲೆ ಸಿಸಿಬಿ ಅಧಿಕಾರಿಗಳು ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಮಾಡಿದ್ದ ಆರೋಪದಡಿ ಬಾಡಿ ವಾರಂಟ್ ಮೇಲೆ ವೆಪನ್ ಡೀಲರ್ ಭಾಷಾಸಾಬ್ ನದಾಫ್ನನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಬಿ ಪೊಲೀಸರ ವಶದಲ್ಲಿರುವ ಭಾಷಾಸಾಬ್ ನದಾಫ್ ದರ್ಗಾ ಜೈಲಿನಲ್ಲಿದ್ದ. ಭೀಮಾತೀರದ ಹಂತಕ ಚಡಚಣ ಸಹೋದರರ ಹತ್ಯೆ ಪ್ರಕರಣದಲ್ಲಿ ಭಾಷಾಸಾಬ್ ನದಾಫ್ ಬಂಧನಕ್ಕೊಳಗಾಗಿದ್ದ.
ಅಂದಿನ ಪಿಎಸ್ಐ ಗೋಪಾಲ್ ಹಳ್ಳೂರಗೆ ಅಕ್ರಮವಾಗಿ ಶಸ್ತ್ರಾಸ್ತ್ರ ಪುರೈಕೆ ಮಾಡಿದ ಆರೋಪದ ಮೇರೆಗೆ ಸಿಸಿಬಿ ಪೊಲೀಸರು ನದಾಫ್ನನ್ನು ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. 2018ರ ಅಗಸ್ಟ್ನಲ್ಲಿ ಸಿಐಡಿ ಪೊಲೀಸರು ಭಾಷಾಸಾಬ್ನನ್ನು ಬಂಧಿಸಿದ್ದರು.
ಬೆಂಗಳೂರಿನಲ್ಲಿ ನಡೆದ ಶೂಟೌಟ್ ಪ್ರಕರಣವೊಂದರಲ್ಲಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಭಾಷಾಸಾಬ್ನನ್ನು ಬಾಡಿ ವಾರಂಟ್ ಮೇಲೆ ಸಿಸಿಬಿ ಅಧಿಕಾರಿಗಳು ಬೆಂಗಳೂರಿಗೆ ಕರೆದೊಯ್ದಿದ್ದಾರೆ.