ಆ್ಯಪ್ನಗರ

ರಾಜ್ಯದಿಂದ 22 ಬಿಜೆಪಿ ಸಂಸದರನ್ನು ಆರಿಸಿ ಕಳುಹಿಸುವ ತನಕ ವಿರಮಿಸಲ್ಲ: ಬಿಎಸ್‌ವೈ

ರಾಜ್ಯದಲ್ಲಿ 22 ಸೀಟನ್ನು ಬಿಜೆಪಿ ಗೆದ್ದರೆ ಸಮ್ಮಿಶ್ರ ಸರಕಾರ ಉಳಿಯಲ್ಲ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು. ಮೋದಿ ಅವರ ಸಾಧನೆ, ಜನಪರ ಕೆಲಸಗಳನ್ನು ಮನೆಮನೆಗೆ ಮುಟ್ಟಿಸಿ, ಬೇರೆ ಪಕ್ಷದವರನ್ನು ಕರೆತನ್ನಿ, ಬೇರೆಯವರು ಬಂದರೆ ನಿಮ್ಮ ಕುರ್ಚಿ ಹೋಗುತ್ತದೆ ಎಂಬ ಭಯ ಬೇಡ ಎಂದು ಯಡಿಯೂರಪ್ಪ ಕಾರ್ಯರ್ತರಿಗೆ ಕರೆ ನೀಡಿದರು.

Vijaya Karnataka Web 23 Feb 2019, 6:53 pm
ವಿಜಯಪುರ: ಚುನಾವಣೆ ಮುಗಿಯುವ ತನಕ ಮನೆ ಸೇರಲ್ಲ ರಾಜ್ಯದಿಂದ ಕನಿಷ್ಠ 22 ಸಂಸದರನ್ನು ಆರಿಸಿ ಕಳುಹಿಸುವ ತನಕ ವಿರಮಿಸುವುದಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದರು.
Vijaya Karnataka Web BSY


ವಿಜಯಪುರದಲ್ಲಿ ವಿಜಯ ಸಂಕಲ್ಪ ಯಾತ್ರೆ ಹಾಗೂ ಶಕ್ತಿ ಕೇಂದ್ರ ಸಮಾವೇಶ ಉದ್ಘಾಟಿಸಿದ ಅವರು, ಸಮೀಕ್ಷೆಗಳಲ್ಲಿ ಮತ್ತೆ ಮೋದಿ ಸರಕಾರ ಎಂದು ಜನಾಭಿಪ್ರಾಯ ವ್ಯಕ್ತವಾಗಿದೆ. ಎಲ್ಲಿ ನರೇಂದ್ರ ಮೋದಿ, ಎಲ್ಲಿಯ ರಾಹುಲ್ ಗಾಂಧಿ ಎಂದು ಟೀಕಿಸಿದರು.

ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ನಡುವೆ ಲೋಕಸಭೆ ಚುನಾವಣೆಗೆ ಸೀಟು ಹೊಂದಾಣಿಕೆಯಾದರೂ ಆ ಪಕ್ಷಗಳ ಕಾರ್ಯಕರ್ತರು ಹೊಂದಾಣಿಕೆ ಆಗಲ್ಲ ಎಂದು ಯಡಿಯೂರಪ್ಪ ಟೀಕಿಸಿದರು.

ಯೋಧನ ಒಂದೊಂದು ರಕ್ತದ ಹನಿಗೂ ಉತ್ತರ ಕೊಡುವುದಾಗಿ ಮೋದಿ ಪ್ರತ್ಯುತ್ತರ ನೀಡಿದ್ದಾರೆ. ಕಾಂಗ್ರೆಸ್ ನ ಕೆಲವರು ಪಾಕಿಸ್ತಾನ ಪರ ಮಾತಾಡುತ್ತಿದ್ದಾರೆ. ಅದು ದೇಶದ್ರೋಹದ ಕೆಲಸ ಎಂದರು.

ರಾಜ್ಯದಲ್ಲಿ 22 ಸೀಟನ್ನು ಬಿಜೆಪಿ ಗೆದ್ದರೆ ಸಮ್ಮಿಶ್ರ ಸರಕಾರ ಉಳಿಯಲ್ಲ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು. ಮೋದಿ ಅವರ ಸಾಧನೆ, ಜನಪರ ಕೆಲಸಗಳನ್ನು ಮನೆಮನೆಗೆ ಮುಟ್ಟಿಸಿ, ಬೇರೆ ಪಕ್ಷದವರನ್ನು ಕರೆತನ್ನಿ, ಬೇರೆಯವರು ಬಂದರೆ ನಿಮ್ಮ ಕುರ್ಚಿ ಹೋಗುತ್ತದೆ ಎಂಬ ಭಯ ಬೇಡ ಎಂದು ಯಡಿಯೂರಪ್ಪ ಕಾರ್ಯರ್ತರಿಗೆ ಕರೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ