ಆ್ಯಪ್ನಗರ

ವಿಜಯಪುರದ ಎನ್‌ಆರ್‌ಸಿ ವಿರುದ್ಧದ ಬೃಹತ್‌ ಜನಾಂದೋಲನದಲ್ಲಿ ಮಹಿಳೆ ಸಾವು!

ನಗರದ ಹೊರವಲಯದ ಜುಮನಾಳ‌ ಕ್ರಾಸ್ ಬಳಿ ನಡೆಯುತ್ತಿರುವ ಜನಾಂದೋಲನದಲ್ಲಿ ಭಾಗವಹಿಸಿದ್ದ ಮಹಿಳೆ ಒಬ್ಬರು ಕಡಿಮೆ ರಕ್ತದೊತ್ತಡದಿಂದಾಗಿ‌ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ನಗರದ ನಿವಾಸಿ ಮಾಲನಬಿ ಕಲಾದಗಿ (50) ಮೃತರು.

Vijaya Karnataka Web 24 Feb 2020, 7:37 pm
ವಿಜಯಪುರ: ನಗರದ ಹೊರವಲಯದ ಜುಮನಾಳ‌ ಕ್ರಾಸ್ ಬಳಿ ನಡೆಯುತ್ತಿರುವ ಜನಾಂದೋಲನದಲ್ಲಿ ಭಾಗವಹಿಸಿದ್ದ ಮಹಿಳೆ ಒಬ್ಬರು ಕಡಿಮೆ ರಕ್ತದೊತ್ತಡ ಉಂಟಾದ ಕಾರಣದಿಂದ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.
Vijaya Karnataka Web citizenship law


ವಿಜಯಪುರದ‌ ಮಾಲನಬಿ ಕಲಾದಗಿ (50) ಮೃತಪಟ್ಟವರು. ಜನಾಂದೋಲನಕ್ಕೆ ಕುಟುಂಬ ಸಮೇತ ಬಂದಿದ್ದ ಮಹಿಳೆ,ಸಮಾವೇಶ ಆರಂಭಕ್ಕೆ ಮುನ್ನವೇ ಮಹಿಳೆಗೆ ರಕ್ತದೊತ್ತಡ ಕಡಿಮೆಯಾಗಿದ್ದರಿಂದ, ಮಹಿಳೆ ಸಮಾವೇಶ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತಳ ಶವವನ್ನು 108 ಆರೋಗ್ಯಕವಚ ವಾಹನದ ಮೂಲಕ ಕರೆದೊಯ್ಯಲಾಯಿತು. ಸಮಾವೇಶದತ್ತ ಜನರು ಸಾಗರೊಪಾದಿಯಲ್ಲಿ‌ ಹರಿದು ಬರುತ್ತಿದ್ದುದರಿಂದ ವಿಪರೀತ ಸಂಚಾರ ದಟ್ಟಣೆ ಉಂಟಾಗಿತ್ತು.

ಸುಮಾರು 50 ಎಕರೆಯಷ್ಟು ವಿಶಾಲ ಜಾಗದಲ್ಲಿ ಜನಾಂದೋಲನ ನಡೆಯುತ್ತಿದೆ. ದೃಷ್ಟಿ ಹರಿಸಿದ ಕಡೆಯಲ್ಲೆಲ್ಲ ಭಾರತದ ಧ್ವಜಗಳೇ ರಾರಾಜಿಸುತ್ತಿದ್ದವು. ಆಂದೋಲನಕ್ಕೆ ಭಾಗವಹಿಸಿದ್ದ ಎಲ್ಲರೂ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ