ಆ್ಯಪ್ನಗರ

ದಲಿತರಿಗೆ ಅಪಮಾನ : ಸಿಎಂ ಕ್ಷಮೆ ಕೇಳಲಿ ಎಂದ ಬಿಎಸ್‌ವೈ

ಜಾಹೀರಾತಿನಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕುವ ಬದಲು ಸಿಎಂ ಅವರದೇ ಪೋಟೊ ಹಾಕಿದ್ದಾರೆ.

Vijaya Karnataka Web 27 Nov 2017, 10:47 am
ವಿಜಯಪುರ: ಜಾಹೀರಾತಿನಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕುವ ಬದಲು ಸಿಎಂ ಅವರದೇ ಪೋಟೊ ಹಾಕಿದ್ದಾರೆ. ಇದು ದಲಿತರಿಗೆ ಮಾಡಿದ ಅಪಮಾನ. ಕೂಡಲೇ ಸಿಎಂ ಸಿದ್ಧರಾಮಯ್ಯ ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web yeddyurappa criticise to cm siddaramaiah
ದಲಿತರಿಗೆ ಅಪಮಾನ : ಸಿಎಂ ಕ್ಷಮೆ ಕೇಳಲಿ ಎಂದ ಬಿಎಸ್‌ವೈ


ಸಚಿವರಾದ ವಿನಯ ಕುಲಕರ್ಣಿ ಹಾಗೂ ಕೆ.ಜೆ. ಜಾರ್ಜ್‌ ರಾಜೀನಾಮೆಗೆ ಆಗ್ರಹಿಸಿ ವಿಜಯಪುರದಲ್ಲಿ ಪ್ರತಿಭಟನೆ ಆರಂಭಿಸಿದ ಅವರು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿಯಿಂದ ಸತ್ಯಾಗ್ರಹ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಮೋದಿ ಬಗ್ಗೆ ಮಾತನಾಡುವ ನೈತಿಕತೆ ಸಿಎಂ ಸಿದ್ಧರಾಮಯ್ಯ ಅವರಿಗೆ ಇಲ್ಲ, ಮೋದಿ ವಿರುದ್ಧ ಮಾತನಾಡಿದರೆ ಹೆಚ್ಚು ಪ್ರಚಾರ ಸಿಗುತ್ತದೆ ಎಂಬ ಭ್ರಮೆಯಲ್ಲಿ ಇದ್ದಾರೆ ಎಂದರು.



ಹಗರಣ ಮುಚ್ಚಿ ಹಾಕಲು ಕೆಂಪಯ್ಯ ಅವರನ್ನು ಧಾರವಾಡಕ್ಕೆ ಕಳಿಸಿ ಪ್ರಭಾವ ಬೀರುತ್ತಿದ್ದಾರೆ. ಇದನ್ನೆಲ್ಲ ಸಿದ್ಧರಾಮಯ್ಯ ಮಾಮಾಡುತ್ತಿದ್ದು, ಇದು ಲಜ್ಜೆಗೆಟ್ಟ ಕೆಲಸ. ಇಬ್ಬರು ಸಚಿವರ ರಾಜೀನಾಮೆ ಬಗ್ಗೆ ನನ್ನ ಯಾತ್ರೆ ಉದ್ದಕ್ಕೂ ಪ್ರಸ್ತಾಪ ಮಾಡುತ್ತೇನೆ. ನಮ್ಮ ಸರಕಾರ ಬಂದ ಮೇಲೆ ಈ ಪ್ರಕರಣವನ್ನು ಸಂಪೂರ್ಣ ತನಿಖೆ ಮಾಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ. ನೀರಾವರಿ ಇಲಾಖೆ ಅಷ್ಟೇ ಅಲ್ಲ, ಸರಕಾರದಲ್ಲಿ ಸಾಕಷ್ಟು ಹಗರಣಗಳಾಗಿವೆ ಎಂದು ಬಿಎಸ್‌ವೈ ಹೇಳಿದರು.

ಸಾಹಿತ್ಯ ಸಮ್ಮೇಳನದಲ್ಲಿ ಚಂಪಾ ರಾಜಕೀಯ ಭಾಷಣ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ಅನಂತಕುಮಾರ ಸಮ್ಮೇಳನದಲ್ಲೆ ಚಂಪಾಗೆ ಛೀಮಾರಿ ಹಾಕಿದ್ದಾರೆ ಎಂದರು.

ಬಿಜೆಪಿ ಮಿಷನ್ 150 ಠುಸ್ ಎಂದ ಸಿದ್ದರಾಮಯ್ಯ ಹೇಳಿಕೆಗೆ ಯಡ್ಡಿಯೂರಪ್ಪ ತಿರುಗೇಟು ನೀಡಿ, ಬೀದಿಲಿ ಹೋಗುವ ದಾಸಯ್ಯ ಹೇಳಿದ್ದಕ್ಕೆ ನನಗೇಕೆ ಪ್ರಶ್ನೆ ಮಾಡುತ್ತೀರಿ, ಈ ಮುಖ್ಯಮಂತ್ರಿಗೆ ಕವಡೆಕಾಸು ಕಿಮ್ಮತ್ತಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ