ಆ್ಯಪ್ನಗರ

ಜಲದಲ್ಲಿ ಮಹಿಳೆಯರ ಲೀಲಾಜಾಲ ಯೋಗ

ಆಲಮಟ್ಟಿ ( ವಿಜಯಪುರ) : ಯೋಗ ಮಾಡಲು ಬಹುತೇಕರು ನೆಲವನ್ನೇ ಆಯ್ದುಕೊಳ್ಳುತ್ತಾರೆ. ಆದರೆ ಈ ಗಟ್ಟಿಗಿತ್ತಿ ಮಹಿಳೆಯರು ಜಲಾಶಯದ ನೀರಿನಲ್ಲೇ ಆಸನಗಳನ್ನು ಮಾಡುವ ಮೂಲಕ ವಿಶ್ವ ಯೋಗ ದಿನವನ್ನು ವಿಶಿಷ್ಟವಾಗಿ ಆಚರಿಸಿದರು.

Vijaya Karnataka 22 Jun 2019, 5:00 am
ಗುಲಾಬಚಂದ ಆರ್‌.ಜಾಧವ, ಆಲಮಟ್ಟಿ ( ವಿಜಯಪುರ)
Vijaya Karnataka Web yoga for women in water
ಜಲದಲ್ಲಿ ಮಹಿಳೆಯರ ಲೀಲಾಜಾಲ ಯೋಗ


ಯೋಗ ಮಾಡಲು ಬಹುತೇಕರು ನೆಲವನ್ನೇ ಆಯ್ದುಕೊಳ್ಳುತ್ತಾರೆ. ಆದರೆ ಈ ಗಟ್ಟಿಗಿತ್ತಿ ಮಹಿಳೆಯರು ಜಲಾಶಯದ ನೀರಿನಲ್ಲೇ ಆಸನಗಳನ್ನು ಮಾಡುವ ಮೂಲಕ ವಿಶ್ವ ಯೋಗ ದಿನವನ್ನು ವಿಶಿಷ್ಟವಾಗಿ ಆಚರಿಸಿದರು.

ಆಲಮಟ್ಟಿಯ ಲಾಲ್‌ಬಹುದ್ದೂರ್‌ ಜಲಾಶಯದ ಹಿನ್ನೀರಿನಲ್ಲಿ ಶುಕ್ರವಾರ ಬೆಳಗ್ಗೆ ಇಂತಹದೊಂದು ಅಪರೂಪದ ದೃಶ್ಯ ನೋಡುಗರಲ್ಲಿ ಅಚ್ಚರಿ ಮೂಡಿಸಿತು.

ಆಲಮಟ್ಟಿಯ ಎಂಎಚ್‌ಎಂ ಪ್ರೌಢಶಾಲೆಯ ದೈಹಿಕ ಶಿಕ್ಷ ಣ ಶಿಕ್ಷ ಕ, ಯೋಗ ಗುರು ಗಂಗಾಧರ ಹಿರೇಮಠ ಮಾರ್ಗದರ್ಶನಲ್ಲಿ ಅದೇ ಊರಿನ ಹತ್ತಕ್ಕೂ ಹೆಚ್ಚು ಮಹಿಳೆಯರು ಹಿನ್ನೀರಿಗೆ ಧುಮುಕಿ ಯೋಗ ಸಾಹಸ ನಡೆಸಿದರು.

ಈ ನಾರಿಯರು ಲೀಲಾಜಾಲವಾಗಿ ನೀರಿನಮೇಲೆ ಶವಾಸನದ ಮೂಲಕ ಧ್ಯಾನಾಸಕ್ತರಾಗಿದ್ದು ನೋಡುಗರ ಗಮನಸೆಳೆಯಿತು. ಒಂದು ಗಂಟೆಗೂ ಹೆಚ್ಚುಕಾಲ ಯಾವುದೇ ಭಯ, ಅಡೆತಡೆಗಳಿಲ್ಲದೇ ಆನಂದದಿಂದ ನೀರಿನ ಮೇಲೆ ಯೋಗ ವಿದ್ಯೆ ಪ್ರದರ್ಶಿಸಿದ್ದು ಗಂಡಸರಿಗೂ ಹುಬ್ಬೇರಿಸುವಂತೆ ಮಾಡಿತ್ತು.

ಕಳೆದ ನಾಲ್ಕೈದು ವರ್ಷದಿಂದ ಈ ಮಹಿಳೆಯರು ನೀರಿನಲ್ಲಿ ಈಜುವ ಕಲೆ ನಿರಾಯಾಸಕವಾಗಿ ಕರಗತ ಮಾಡಿಕೊಂಡಿದ್ದಾರೆ. ಯೋಗ ಗುರುವಿನ ಮಾರ್ಗದರ್ಶನಲ್ಲಿ ನಿತ್ಯವೂ ನೀರಿಗಿಳಿದು ಯೋಗದ ಕಸರತ್ತು ಮಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಹೀಗಾಗಿ ಯೋಗ ದಿನ ಪ್ರಾಣಾಯಾಮ, ಶವಾಸನವನ್ನು ಸಲೀಸಾಗಿ ನೀರಿನಲ್ಲಿ ಪ್ರದರ್ಶಿಸಿದರು. ಈ ಅಪರೂಪದ ಯೋಗ ವಿದ್ಯೆಯನ್ನು ವೈದ್ಯೆ ಡಾ.ಸುಮಿತ್ರಾ ರೇವಡಿ, ಗೃಹಿಣಿಯರಾದ ಗೀತಾ, ಯಮುನಾ ಪೂಜಾರಿ, ಕೋಮಲಾ ಬಡಿಗೇರ, ಶಾಂತಾ ಪತ್ತಾರ ಜತೆಗೆ ಹಲವು ಮಹಿಳೆಯರು ಕರಗತ ಮಾಡಿಕೊಂಡಿದ್ದರ ಫಲವಾಗಿ ಜಲಯೋಗ ಪ್ರದರ್ಶನ ಮಾಡಿದರು. ಇವರ ಜತೆಗೆ ಬಸವರಾಜ ಮಹೇಂದ್ರಕರ ಕೂಡ ನೀರಿಗೆ ಇಳಿದು ಸಾಥ್‌ ನೀಡಿದರು.

ಆಸನಗಳಲ್ಲೇ ಕಠಿಣ ಆಸನ ಎಂದು ಹೇಳಲಾಗುವ ಶವಾಸನ ನೀರಿನ ಮೇಲೆ ಹಾಕುವುದು ಅಷ್ಟೊಂದು ಸರಳವಲ್ಲ. ಗಟ್ಟಿ ಮನಸ್ಸು , ಧೈರ್ಯದೊಂದಿಗೆ ನೀರಿಗಿಳಿದರೆ ಈ ವಿದ್ಯೆ ಕರಗತ ಎನ್ನುತ್ತಾರೆ ಯೋಗ ಗುರು ಗಂಗಾಧರ ಹಿರೇಮಠ.

--------

ನೀರಿನ ಮೇಲೆ ಶವಾಸನದ ಕಸರತ್ತು ಮಾಡುವುದರಿಂದ ಶರೀರ ಹಗುರವಾಗಿ ಏಕಾಗ್ರತೆಯಿಂದ ಧ್ಯಾನದೆಡೆಗೆ ಕೊಂಡೊಯ್ಯುತ್ತದೆ. ಮಾನಸಿಕ ಸಮಸ್ಯೆ ತೊಳಲಾಟ ನಿವಾರಣೆಗೆ ಇದು ಸಹಕಾರಿಯಾಗಿದೆ.

-ಡಾ.ಸುಮತ್ರಾರೇವಡಿ, ವೈದ್ಯೆ ಆಲಮಟ್ಟಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ