ಆ್ಯಪ್ನಗರ

ಸಾವಿನಲ್ಲೂ ಒಂದಾದ ಅಕ್ಕ ತಂಗಿ

ಅಕ್ಕನ ಸಾವಿನ ನೋವಿನಲ್ಲಿ ತಂಗಿಯೂ ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ.

Vijaya Karnataka 10 Sep 2019, 7:42 am
ಢವಳಗಿ: ಸಜ್ಜನ ಮನೆತನಕ್ಕೆ ಸೇರಿದ ಸಹೋದರಿಯರಿಬ್ಬರು ಒಂದೇ ದಿನ ಇಹಲೋಕ ತ್ಯಜಿಸಿ ಸಾವಿನಲ್ಲೂ ಒಂದಾದ ಘಟನೆ ಢವಳಗಿ ಸಮೀಪದ ಹಳ್ಳೂರ ಮತ್ತು ತಾಳಿಕೋಟೆ ಸಮೀಪದ ತುಂಬಗಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
Vijaya Karnataka Web Death


ತುಂಬಗಿಯ ಸಜ್ಜನ ಮನೆತನದಲ್ಲಿ7 ಸಹೋದರಿಯರು ಇದ್ದಾರೆ. ಇವರಲ್ಲಿ ಗೌರಮ್ಮ (85)ಹಿರಿಯವಳು. ಈಕೆಯನ್ನು ತುಂಬಗಿ ಗ್ರಾಮದ ಸಿದ್ದಪ್ಪ ಸಜ್ಜನ ಎನ್ನುವವರೊಂದಿಗೆ ಮದುವೆ ಮಾಡಿಕೊಟ್ಟಿದ್ದರಿಂದ ಅವರು ತುಂಬಗಿಯಲ್ಲೇ ವಾಸವಾಗಿದ್ದರು. ಇವರು ಭಾನುವಾರ ಬೆಳಗ್ಗೆ ನಿಧನರಾದರು.

ಇದೇ ಮನೆತನಕ್ಕೆ ಸೇರಿದ ಕೊನೆಯ ತಂಗಿ ಕಮಲಾಕ್ಷಿ(55)ಯನ್ನು ಹಳ್ಳೂರ ಗ್ರಾಮದ ಮಹಾಂತಪ್ಪ ಸಜ್ಜನ ಎನ್ನುವವರಿಗೆ ಮದುವೆ ಮಾಡಿಕೊಟ್ಟಿದ್ದರಿಂದ ಅವರು ಹಳ್ಳೂರಲ್ಲಿವಾಸವಿದ್ದರು. ತಂಗಿ ಕಮಲಾಕ್ಷಿ ಅಕ್ಕನ ಅಂತ್ಯಸಂಸ್ಕಾರಕ್ಕೆ ಬಂಧುಗಳೊಂದಿಗೆ ತುಂಬಗಿಗೆ ತೆರಳಿದ್ದಾಗ ಅಕ್ಕನ ಅಗಲಿಕೆಯ ನೋವಿನಲ್ಲಿ ತೀವ್ರವಾಗಿ ದು:ಖಿಸಿದ್ದರು. ಇದರಿಂದಾಗಿ ಅವರಿಗೆ ಬ್ಲಡ್‌ಪ್ರಶರ್‌ನಲ್ಲಿ ವ್ಯತ್ಯಾಸ ಆಗಿ ಅಲ್ಲೇ ಕುಸಿದುಬಿದ್ದರು. ತಕ್ಷಣ ಬಂಧುಗಳು ಅವರನ್ನು ವಿಜಯಪುರಕ್ಕೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವಾಗ ಮಾರ್ಗ ನಡುವೆ ಮೃತಪಟ್ಟಿದ್ದಾರೆ.

ಭಾನುವಾರ ಸಂಜೆ ತುಂಬಗಿಯಲ್ಲಿ ಅಕ್ಕ ಗೌರಮ್ಮಳ ಅಂತ್ಯಕ್ರಿಯೆ ನಡೆದರೆ, ಸೋಮವಾರ ಬೆಳಗ್ಗೆ ಹಳ್ಳೂರಲ್ಲಿತಂಗಿ ಕಮಲಾಕ್ಷಿಯ ಅಂತ್ಯಕ್ರಿಯೆ ನೆರವೇರಿತು. ಎರಡೂ ಅಂತ್ಯಕ್ರಿಯೆಗಳಲ್ಲಿ ಭಾಗವಹಿಸಿದ ಬಂಧುಗಳು ಸಹೋದರಿಯರಿಬ್ಬರೂ ಸಾವಿನಲ್ಲೂ ಒಂದಾದರು ಎಂದು ಮಾತನಾಡಿಕೊಂಡು ಶೋಕ ವ್ಯಕ್ತಪಡಿಸಿದರು.

ಗೌರಮ್ಮಗೆ ಮೂವರು ಪುತ್ರರು, ಪುತ್ರಿ ಇದ್ದಾರೆ. ಕಮಲಾಕ್ಷಿಗೆ ಪತಿ, ಮೂವರು ಪುತ್ರಿಯರು, ಪುತ್ರ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ