ದೀಪಾವಳಿ ಸಂದರ್ಭ ಹೊಸಬಟ್ಟೆ ತೊಟ್ಟು, ಪಟಾಕಿ ಹಚ್ಚಿ, ಸಿಹಿ ತಿಂದು ಸಂಭ್ರಮಿಸುವುದು ವಾಡಿಕೆ. ಆದರೆ 'ದೀಪದಿಂದ ದೀಪವ ಹಚ್ಚಬೇಕು ಮಾನವ' ಎಂಬ ಕವಿವಾಣಿಯಂತೆ, ಕತ್ತಲೆ ಕಳೆಯುವುದೇ ನಿಜಾರ್ಥದ ದೀಪಾವಳಿ ಆಗಬೇಕು. ನಮ್ಮ ಹಿತಾನುಕೂಲಕ್ಕೆ ಸದಾ ದುಡಿಯುವ ಕಾಯಕಯೋಗಿಗಳನ್ನು ಭೇಟಿ ಮಾಡಿ, ಅವರಿಗೊಂದು ಶುಭಾಶಯ ಹೇಳಿ; ಸಾಧ್ಯವಾದರೆ ಒಂದು ಉಡುಗೊರೆ ಕೊಟ್ಟು ಥ್ಯಾಂಕ್ಸ್ ಹೇಳುವ ಮೂಲಕ ದೀಪಾವಳಿಯನ್ನು ಸಾರ್ಥಕವಾಗಿ ಆಚರಿಸಿ ಎಂಬ ವಿಜಯ ಕರ್ನಾಟಕದ ಕರೆಗೆ ಅಸಂಖ್ಯ ಓದುಗರು ಸ್ಪಂದಿಸಿದ್ದಾರೆ. ಇತರರಿಗೂ ಸ್ಫೂರ್ತಿ, ಆದರ್ಶವಾಗಬಲ್ಲ ಇಂಥ ಕೆಲಸ ಮಾಡಿದ ನಮ್ಮ ಓದುಗರಿಗೆ ಧನ್ಯವಾದಗಳು. ಈ ಸ್ಮರಣೀಯ ಕ್ಷ ಣವನ್ನು ಸೆರೆ ಹಿಡಿದು ಓದುಗರು ಕಳುಹಿಸಿದ ಆಯ್ದ ಕೆಲವು ಚಿತ್ರಗಳನ್ನು ಇಲ್ಲಿ ಪ್ರಕಟಿಸಿದ್ದೇವೆ.
ಬಾಳು ಬೆಳಗುವವರ ಜತೆ ಬೆಳಕಿನ ಹಬ್ಬ
ದೀಪಾವಳಿ ಸಂದರ್ಭ ಹೊಸಬಟ್ಟೆ ತೊಟ್ಟು, ಪಟಾಕಿ ಹಚ್ಚಿ, ಸಿಹಿ ತಿಂದು ಸಂಭ್ರಮಿಸುವುದು ವಾಡಿಕೆ. ಆದರೆ 'ದೀಪದಿಂದ ದೀಪವ ಹಚ್ಚಬೇಕು ಮಾನವ' ಎಂಬ ಕವಿವಾಣಿಯಂತೆ, ಕತ್ತಲೆ ಕಳೆಯುವುದೇ ನಿಜಾರ್ಥದ ದೀಪಾವಳಿ ಆಗಬೇಕು. ನಮ್ಮ ಹಿತಾನುಕೂಲಕ್ಕೆ ಸದಾ ದುಡಿಯುವ ಕಾಯಕಯೋಗಿಗಳನ್ನು ಭೇಟಿ ಮಾಡಿ, ಅವರಿಗೊಂದು ಶುಭಾಶಯ ಹೇಳಿ; ಸಾಧ್ಯವಾದರೆ ಒಂದು ಉಡುಗೊರೆ ಕೊಟ್ಟು ಥ್ಯಾಂಕ್ಸ್ ಹೇಳುವ ಮೂಲಕ ದೀಪಾವಳಿಯನ್ನು ಸಾರ್ಥಕವಾಗಿ ಆಚರಿಸಿ ಎಂಬ ವಿಜಯ ಕರ್ನಾಟಕದ ಕರೆಗೆ ಅಸಂಖ್ಯ ಓದುಗರು ಸ್ಪಂದಿಸಿದ್ದಾರೆ. ಇತರರಿಗೂ ಸ್ಫೂರ್ತಿ, ಆದರ್ಶವಾಗಬಲ್ಲ ಇಂಥ ಕೆಲಸ ಮಾಡಿದ ನಮ್ಮ ಓದುಗರಿಗೆ ಧನ್ಯವಾದಗಳು. ಈ ಸ್ಮರಣೀಯ ಕ್ಷ ಣವನ್ನು ಸೆರೆ ಹಿಡಿದು ಓದುಗರು ಕಳುಹಿಸಿದ ಆಯ್ದ ಕೆಲವು ಚಿತ್ರಗಳನ್ನು ಇಲ್ಲಿ ಪ್ರಕಟಿಸಿದ್ದೇವೆ.
Vijaya Karnataka 22 Oct 2017, 4:00 am