ಆ್ಯಪ್ನಗರ

74ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ..! ದೇಶಭಕ್ತಿ ಬೀರುವ ಸಂದೇಶ, ಶುಭಾಶಯಗಳು

ಈ ವರ್ಷ ಕೊರೊನಾ ವೈರಸ್‌ ಪರಿಸ್ಥಿತಿಯ ನಡುವೆಯೂ ಭಾರತ 74ನೇ ಸ್ವಾತಂತ್ಯ್ರ ದಿನಾಚರಣೆ ಆಚರಿಸಿಕೊಳ್ಳುತ್ತಿದೆ. 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇನ್ನಷ್ಟು ಚಂದ ಮಾಡಲು, ಸ್ವಾತಂತ್ರ್ಯೋತ್ಸವದ ಮಹತ್ವ ತಿಳಿದುಕೊಳ್ಳಲು ಒಂದಿಷ್ಟು ಮಹತ್ವಪೂರ್ಣ ಸಂದೇಶಗಳು ಇಲ್ಲಿವೆ.

Vijaya Karnataka Web 14 Aug 2020, 8:03 pm
ಈ ವರ್ಷ ಕೊರೊನಾ ವೈರಸ್‌ ಪರಿಸ್ಥಿತಿಯ ನಡುವೆಯೂ ಭಾರತ 74ನೇ ಸ್ವಾತಂತ್ಯ್ರ ದಿನಾಚರಣೆ ಆಚರಿಸಿಕೊಳ್ಳುತ್ತಿದೆ. 1947 ಆಗಸ್ಟ್‌ 15 ಮಧ್ಯರಾತ್ರಿ 12 ಗಂಟೆಗೆ ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತವಾಯಿತು. ಸುಮಾರು 200 ವರ್ಷಗಳ ಕಾಲ ನಮ್ಮ ಹಕ್ಕಾದ ಸ್ವಾತಂತ್ರ್ಯ ಪಡೆಯಲು ಅಸಂಖ್ಯಾತ ಜನ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ಬಲಿದಾನ-ತ್ಯಾಗದಿಂದಲೇ ನಮಗೆ ಸ್ವಾತಂತ್ರ್ಯ ಸಿಕ್ಕಿದೆ.
Vijaya Karnataka Web independence day 2020 top quotes and wishes to share on social media
74ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ..! ದೇಶಭಕ್ತಿ ಬೀರುವ ಸಂದೇಶ, ಶುಭಾಶಯಗಳು


74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇನ್ನಷ್ಟು ಚಂದ ಮಾಡಲು, ಸ್ವಾತಂತ್ರ್ಯೋತ್ಸವದ ಮಹತ್ವ ತಿಳಿದುಕೊಳ್ಳಲು ಒಂದಿಷ್ಟು ಮಹತ್ವಪೂರ್ಣ ಸಂದೇಶಗಳನ್ನು ಇಲ್ಲಿ ನೀಡಲಾಗಿದೆ.

* ಉಸಿರಿರುವ ತನಕ ಭಾರತೀಯನೆಂದು ಬೀಗು, ಕೊನೆಯುಸಿರೆಳೆಯುವಾಗಲೂ ವಂದೇ ಮಾತರಂ ಎಂದು ಕೂಗು.
* ಸ್ವಾತಂತ್ರ್ಯ ಎಂಬುವುದು ಪ್ರತಿಯೊಬ್ಬರ ಜೀವನದಲ್ಲಿ ಬಹುಮುಖ್ಯವಾದ ಅಂಶ. ಇದನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ, ನಮ್ಮ ಸಮಾಜದ ರಕ್ಷಣೆಗೆ ಬದ್ಧರಾಗಿರೋಣ.

ನನಗೆ ಎರಡು ಹನಿ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡುತ್ತೇನೆ.
ನೇತಾಜಿ ಸುಭಾಷ್‌ ಚಂದ್ರ ಬೋಸ್‌

* ಸ್ವಾತಂತ್ರ್ಯ ದಿನಾಚರಣೆ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಫಲ. ಅವರ ಬಲಿದಾನವನ್ನು ಸಾರ್ಥಕವಾಗಿಸೋಣ.
* ಸ್ವಾತಂತ್ರ್ಯ ದಿನಾಚರಣೆ ಎಂಬುವುದು ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದ ಹೀರೋಗಳನ್ನು ಸ್ಮರಿಸುವ ದಿನ. ಜೈ ಹಿಂದ್.

ಸ್ವಾತಂತ್ರ್ಯವು ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯವನ್ನು ಹೊಂದಿರದಿದ್ದರೆ ಅದರು ಯೋಗ್ಯವಾದ ಸ್ವಾತಂತ್ರ್ಯವಲ್ಲ.
ಮಹಾತ್ಮ ಗಾಂಧಿ

* ದೇಶದ ತಿರಂಗ ಧ್ವಜ ಹಾರುವಾಗ ನಮ್ಮ ಎದೆಯು ಹೆಮ್ಮೆಯಿಂದ ಉಬ್ಬುತ್ತದೆ, ಸಂತೋಷವನ್ನು ಹರಡುತ್ತದೆ. ನಮ್ಮ ದೇಶ ನಮ್ಮ ಹೆಮ್ಮೆ. ಜೈ ಹಿಂದ್.. ವಂದೇ ಮಾತರಂ‌..
* ನಮ್ಮನ್ನು ನಿನ್ನ ತೋಳಿನಲ್ಲಿ ಅಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು ಭಾರತ ಮಾತೆ, ನಿನ್ನ ರಕ್ಷಣೆ ನಮ್ಮ ಹೊಣೆ, ಅದಕ್ಕಾಗಿ ಎಂಥ ಬಲಿದಾನಕ್ಕೂ ಸದಾ ಸಿದ್ಧ.

ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು. ಅದನ್ನು ನಾನು ಪಡೆದೇ ತೀರುತ್ತೇನೆ.
ಬಾಲ ಗಂಗಾಧರ್‌ ತಿಲಕ್‌

* ಸ್ವಾತಂತ್ರ್ಯವಿಲ್ಲದ ಮೇಲೆ ಹೆಸರಿಲ್ಲ, ಗುರಿಯಿಲ್ಲ, ದೇಶವಿಲ್ಲ, ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ವಿರುದ್ಧ ಹೋರಾಡಿ ನಮಗೆ ಸ್ವಾತಂತ್ರ್ಯ ಕೊಡಿಸಿದ್ದಾರೆ, ಅವರಿಗೆ ನಮ್ಮ ನಮನಗಳು.
* ನಮ್ಮ ಹಿರಿಯರ ಬಲಿದಾನ ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ, ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು, ನಾವು ದೇಶದ ರಕ್ಷಣೆಗಾಗಿ ಸದಾ ಹೋರಾಡುತ್ತೇವೆ.

ನನ್ನ ದೇಶ ನನ್ನನ್ನು ಕರೆಯುತ್ತಿದೆ. ನನ್ನ ಹೃದಯ ಮತ್ತು ನನ್ನ ಆತ್ಮವನ್ನು ದೇಶಕ್ಕಾಗಿ ಸಮರ್ಪಿಸಲು ನಾನು ಶಪಥ ಮಾಡಿದ್ದೇನೆ.
ಭಗತ್‌ ಸಿಂಗ್‌

* "ಒಬ್ಬ ವ್ಯಕ್ತಿ ಒಂದು ಚಿಂತನೆಗಾಗಿ ಸಾಯಬಹುದು. ಆದರೆ, ಆ ಚಿಂತನೆಯು ಆ ವ್ಯಕ್ತಿಯ ಮರಣದ ನಂತರ, ಸಾವಿರಾರು ಜನರ ಜೀವನದಲ್ಲಿ ಹುಟ್ಟುತ್ತದೆ."
- ನೇತಾಜಿ ಸುಭಾಷ್ ಚಂದ್ರ ಬೋಸ್

* “ಅನ್ಯಾಯ ಮತ್ತು ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಅತ್ಯಂತ ದೊಡ್ಡ ಅಪರಾಧ ಎಂಬುದನ್ನು ಮರೆಯಬೇಡಿ. ನೀವು ಪಡೆಯಲು ಬಯಸಿದರೆ ನೀವು ನೀಡಬೇಕು ಎಂಬ ಕಾನೂನನ್ನು ನೆನಪಿಡಿ.” - ನೇತಾಜಿ ಸುಭಾಷ್ ಚಂದ್ರ ಬೋಸ್

* “ನಿಮ್ಮ ರಕ್ತವು ಇನ್ನೂ ಕುದಿಯದಿದ್ದರೆ, ಅದು ನಿಮ್ಮ ರಕ್ತನಾಳಗಳಲ್ಲಿ ಹರಿಯುವ ನೀರಿದ್ದಂತೆ. ಮಾತೃಭೂಮಿಗಾಗಿ ಸೇವೆ ಮಾಡದಿದ್ದರೆ, ಯುವಕರ ಶಕ್ತಿ ಏನು?”
- ಚಂದ್ರ ಶೇಖರ್ ಆಜಾದ್

* "ನೀವು ಸಾಮಾಜಿಕ ಸ್ವಾತಂತ್ರ್ಯವನ್ನು ಸಾಧಿಸದಿದ್ದಾಗ, ಕಾನೂನಿನಿಂದ ನಿಮಗೆ ಯಾವುದೇ ಸ್ವಾತಂತ್ರ್ಯವನ್ನು ಒದಗಿಸಿದರೂ ಯಾವುದೇ ಪ್ರಯೋಜನವಿಲ್ಲ." - ಡಾ.ಬಿ.ಆರ್‌.ಅಂಬೇಡ್ಕರ್

"ವ್ಯಕ್ತಿಗಳನ್ನು ಕೊಲ್ಲುವುದು ಸುಲಭ. ಆದರೆ, ನೀವು ಅವರ ಆಲೋಚನೆಗಳನ್ನು ಕೊಲ್ಲಲು ಸಾಧ್ಯವಿಲ್ಲ. ದೊಡ್ಡ ಸಾಮ್ರಾಜ್ಯಗಳು ಕುಸಿದಿವೆ. ಆದರೆ ಆಲೋಚನೆಗಳು ಇನ್ನು ಉಳಿದುಕೊಂಡಿವೆ."
ಭಗತ್ ಸಿಂಗ್

* “ನಿಮ್ಮ ದೇಶ ನಿಮಗಾಗಿ ಏನು ಮಾಡುತ್ತದೆ ಎಂದು ಕೇಳಬೇಡಿ. ನಿಮ್ಮ ದೇಶಕ್ಕಾಗಿ ನೀವು ಏನು ಮಾಡಬೇಕು ಎಂದು ಕೇಳಿ.”
- ಜವಾಹರಲಾಲ್ ನೆಹರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ