ಆ್ಯಪ್ನಗರ

ಕಾಳಧನಿಕರ ಭರ್ಜರಿ ಬೇಟೆ!

ನೋಟು ರದ್ಧುಪಡಿಸಿದ ಬೆನ್ನಿಗೆ ಕೇಂದ್ರ ಸರಕಾರ ದೇಶದಲ್ಲಿನ ಕಾಳಧನಿಕರ ಭರ್ಜರಿ ಬೇಟೆ ಆರಂಭಿಸಿದೆ. 500, 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿದ ಬಳಿಕ ನಡೆದ 2.5 ಲಕ್ಷ ರೂ.ಗಳಿಗಿಂತ ಹೆಚ್ಚಿನ ವ್ಯವಹಾರದ ಸಮಗ್ರ ವಿವರ ನೀಡುವಂತೆ ಎಲ್ಲ ಬ್ಯಾಂಕುಗಳಿಗೆ ಸೂಚಿಸಲಾಗಿದೆ.

ಏಜೆನ್ಸೀಸ್ 12 Nov 2016, 4:00 am
ಹೊಸದಿಲ್ಲಿ: ನೋಟು ರದ್ಧುಪಡಿಸಿದ ಬೆನ್ನಿಗೆ ಕೇಂದ್ರ ಸರಕಾರ ದೇಶದಲ್ಲಿನ ಕಾಳಧನಿಕರ ಭರ್ಜರಿ ಬೇಟೆ ಆರಂಭಿಸಿದೆ. 500, 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿದ ಬಳಿಕ ನಡೆದ 2.5 ಲಕ್ಷ ರೂ.ಗಳಿಗಿಂತ ಹೆಚ್ಚಿನ ವ್ಯವಹಾರದ ಸಮಗ್ರ ವಿವರ ನೀಡುವಂತೆ ಎಲ್ಲ ಬ್ಯಾಂಕುಗಳಿಗೆ ಸೂಚಿಸಲಾಗಿದೆ.
Vijaya Karnataka Web india withdraws 500 and 1000 rupee notes in effort to fight corruption
ಕಾಳಧನಿಕರ ಭರ್ಜರಿ ಬೇಟೆ!


ಆದೇ ರೀತಿ ದೇಶಾದ್ಯಂತ ಇರುವ 625ಕ್ಕೂ ಹೆಚ್ಚು ಬೃಹತ್ ಚಿನ್ನಾಭರಣ ಹಾಗೂ ವಜ್ರ ವ್ಯಾಪಾರಿಗಳಿಗೆ ನೋಟು ರದ್ದು ಪಡಿಸಿದ ನಂತರ ನಡೆದ ಹೆಚ್ಚಿನ ಮೊತ್ತದ ಖರೀದಿಯ ಪೂರ್ಣ ವಿವರ ಒದಗಿಸುವಂತೆಯೂ ಸರಕಾರ ಆದೇಶ ನೀಡಿದೆ. ಹಳೆ ನೋಟುಗಳನ್ನು ಕಾಳಧನಿಕರು ವಿದೇಶಿ ಕರೆನ್ಸಿಗಳೊಂದಿಗೆ ವಿನಿಮಯ ಮಾಡಿಕೊಂಡಿರುವ ಸಾಧ್ಯತೆಯನ್ನು ಪರಿಗಣಿಸಿರುವ ಸರಕಾರ, ದೇಶದ ಪ್ರಮುಖ 62 ವಿದೇಶಿ ವಿನಿಮಯ ದಲ್ಲಾಳಿಗಳಿಂದಲೂ ವ್ಯವಹಾರದ ವಿವರ ಕೇಳಿದೆ.

ಬಾಹುಬಲಿ ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ

ಗುರುವಾರವಷ್ಟೇ ಚಿನ್ನಾಭರಣ ವ್ಯಾಪಾರಿಗಳು, ಹವಾಲ ದಲ್ಲಾಳಿಗಳ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದ ವರಮಾನ ತೆರಿಗೆ ಅಧಿಕಾರಿಗಳು, ಶುಕ್ರವಾರ ಬಾಹುಬಲಿ ಚಿತ್ರ ನಿರ್ಮಾಪಕರ ಮನೆಗಳ ಮೇಲೆ ಮಿಂಚಿನ ದಾಳಿ ನಡೆಸಿದ್ದಾರೆ. ತೆಲಗು, ತಮಿಳು, ಹಿಂದಿ ಸಹಿತ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಕಳೆದ ವರ್ಷ ತೆರೆಕಂಡಿದ್ದ ಬಾಹುಬಲಿ ಚಿತ್ರ ವಿಶ್ವಾದ್ಯಂತ 650 ಕೋಟಿ ರೂ.ಗಳಿಗೂ ಹೆಚ್ಚು ಹಣ ಸಂಪಾದಿಸಿತ್ತು. ಬಾಹುಬಲಿ-2 ಚಿತ್ರ ಬಿಡುಗಡೆಗೆ ಮುನ್ನವೇ 400 ಕೋಟಿ ರೂ.ಗಳಿಗೂ ಹೆಚ್ಚು ಹಣ ಸಂಪಾದಿಸಿದೆ ಎಂಬ ವರದಿಗಳಿವೆ. ಈ ಹಿನ್ನಲೆಯಲ್ಲಿ ಚಿತ್ರ ನಿರ್ಮಾಪಕರಾದ ಶೋಬು ಯರ್ಲಗಡ್ಡ ಮತ್ತು ಪ್ರಸಾದ್ ದೇವಿನೇನಿ ಅವರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಗಂಗೆಯಲ್ಲಿ ಹರಿದದ್ದು ಹಣದ ಹೊಳೆ

ನೋಟು ರದ್ದು ಭಾರಿ ಪರಿಣಾಮವನ್ನೇ ಬೀರಲಾರಂಭಿಸಿದೆ. ಶುಕ್ರವಾರ ಉತ್ತರ ಪ್ರದೇಶದ ಮಿರ್ಜಾಪುರ ಬಳಿ ಗಂಗಾ ನದಿಯಲ್ಲಿ 500, 1000 ರೂ. ನೋಟುಗಳು ಕಂತೆಕಂತೆಯಾಗಿ ತೇಲಿ ಬಂದಿವೆ. ಇವುಗಳನ್ನು ಸಂಗ್ರಹಿಸಲು ಜನರೂ ಮುಗಿಬಿದ್ದಿದ್ದು ವಿಶೇಷವಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಹಳೆ ನೋಟುಗಳನ್ನು ವಶಕ್ಕೆ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ