ವಿಶ್ವದಲ್ಲಿಯೇ ಅತಿ ದೊಡ್ಡ ಧಾರ್ಮಿಕ ಆಚರಣೆ ಎಂಬ ಹಿರಿಮೆಗೆ ಪಾತ್ರವಾಗಿರುವ ಕುಂಭಮೇಳದ ಪ್ರಮುಖ ಆಕರ್ಷಣೆ ಇರುವುದೇ ಅದರಲ್ಲಿ ಪಾಲ್ಗೊಳ್ಳುವ ವಿವಿಧ ಅಖಾಡಗಳಲ್ಲಿ. ಎಲ್ಲ ಅಖಾಡಗಳ ಸಾಧುಗಳು 'ಶಾಹಿಸ್ನಾನ' ಕೈಗೊಳ್ಳುವ ಮೂಲಕ ಮೇಳಕ್ಕೆ ಚಾಲನೆ ದೊರೆಯುವುದು ಸಂಪ್ರದಾಯ. ಗಂಗಾ, ಯುಮುನಾ, ಗುಪ್ತಗಾಮಿನಿ ಸರಸ್ವತಿ ನದಿಗಳ ತ್ರಿವೇಣಿ ಸಂಗಮವಾಗಿರುವ ಪ್ರಯಾಗ್ರಾಜ್ನಲ್ಲಿ ಈ ಬಾರಿ ಜ.15ರಂದು ಮಕರ ಸಂಕ್ರಾಂತಿಯಂದು ವಿವಿಧ ಅಖಾಡಗಳ ಸಾಧುಗಳು ಶಾಹಿಸ್ನಾನ ಕೈಗೊಳ್ಳುವ ಮೂಲಕ ಗಮನ ಸೆಳೆದಿದ್ದರು. ಅಖಾಡ ಎಂದರೆ ಸಾಧುಗಳ ಪಂಥ. ಶೈವ, ವೈಷ್ಣವ ಹಾಗೂ ಉದಾಸೀನ ಪಂಥದ ಸಾಧುಗಳ ಆಧಾರದ ಮೇಲೆ ಅಖಾಡಗಳನ್ನು ವರ್ಗೀಕರಿಸಲಾಗುತ್ತದೆ. 13 ಅಖಾಡಗಳಲ್ಲಿ ಏಳು ಶೈವ, ತಲಾ ಮೂರು ವೈಷ್ಣವ ಮತ್ತು ಉದಾಸೀನ ಪಂಥಗಳಿಗೆ ಸೇರಿದ್ದಾಗಿವೆ. ಪ್ರಮುಖ ಅಖಾಡಗಳ ಪರಿಚಯ ಇಲ್ಲಿದೆ.
ಪಂಚ ದಶನಾಮ್ ಜುನಾ ಅಖಾಡ
ಕೇಂದ್ರ ಕಚೇರಿ: ವಾರಾಣಸಿ
ವಿಶೇಷತೆ: 13 ಅಖಾಡಗಳ ಪೈಕಿ ಅತಿ ದೊಡ್ಡದು
ಪಂಥ: ಶೈವ
ಮುಖ್ಯಸ್ಥ: ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ
ಜಗದ್ಗುರು ಆದಿ ಶಂಕರಾಚಾರ್ಯರು ಪರಿಚಯಿಸಿದ ದಶನಾಮಿ ಸಂಪ್ರದಾಯದ ವ್ಯಾಪ್ತಿಗೆ ಬರುವ ಈ ಜುನಾ ಅಖಾಡ ಶೈವ ಪಂಥಕ್ಕೆ ಸೇರಿದ್ದಾಗಿದೆ. ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ, ದ್ವಾರಕಾ, ಪುರಿ ಮತ್ತು ಜ್ಯೋತಿರ್ಮಠಗಳ ಜತೆಗೆ ಸಂಬಂಧ ಬೆಸೆದುಕೊಂಡಿದೆ. ಜುನಾ ಅಖಾಡದವರು ಭಗವಾನ್ ದತ್ತಾತ್ರೇಯ ಹಾಗೂ 52 ಅಡಿ ಎತ್ತರದ ಪವಿತ್ರ ಧ್ವಜವನ್ನು ಪೂಜಿಸುವರು. ಓಂ ನಮೋ ನಾರಾಯಣ ಇವರ ನಾಮಜಪದ ಮಂತ್ರ. ಅಖಾಡದ ಆಡಳಿತ ವೈಖರಿ ನೋಡಿಕೊಳ್ಳುವ 'ಶ್ರೀಪಂಚ'ದ ಸದಸ್ಯರನ್ನು ಅರ್ಧ ಕುಂಭಮೇಳ ಹಾಗೂ ಪೂರ್ಣಕುಂಭ ಮೇಳದಲ್ಲಿ ಚುನಾಯಿಸಲಾಗುತ್ತದೆ. ಇದು ನಾಗಾ ಸಾಧುಗಳನ್ನು ಹೊಂದಿದೆ. ಈ ಅಖಾಡ ಅಸ್ತ್ರಧಾರಿ (ಯುದ್ಧ ಕಲೆಗೆ ಸಂಬಂಧಿಸಿದ್ದು) ಹಾಗೂ ಶಾಸ್ತ್ರಧಾರಿ (ಶಾಸ್ತ್ರ ಕಲೆಗೆ ಸಂಬಂಧಿಸಿದ್ದು) ಸ್ವಾಮೀಜಿಗಳನ್ನೂ ಹೊಂದಿದೆ.
ಪಂಚಾಯತಿ ಅಖಾಡ ನಿರಂಜನಿ
ಕೇಂದ್ರ ಕಚೇರಿ: ದಾರಾಗಂಜ್(ಪ್ರಯಾಗ್ರಾಜ್)
ವಿಶೇಷತೆ: ಅನುಯಾಯಿಗಳು ಸುಶಿಕ್ಷಿತರು. ಡಾಕ್ಟರೇಟ್, ಸ್ನಾತಕೋತ್ತರ ಪದವಿ ಪೂರೈಸಿದವರೂ ಇದರ ಸದಸ್ಯರು
ಪಂಥ: ಶೈವ
ಮುಖ್ಯಸ್ಥ: ಸ್ವಾಮಿ ಮಹಾಂತ ರವೀಂದ್ರಪುರಿ
ಪಂಚಾಯತಿ ಅಖಾಡ ನಿರಂಜನಿ ಪ್ರಯಾಗ್ರಾಜ್ನಲ್ಲಿ ದೊಡ್ಡ ನೆಲೆ ಹೊಂದಿದೆ. ಇದು ಕೂಡ ಶೈವ ಪಂಥಕ್ಕೆ ಸೇರಿದ್ದಾಗಿದೆ. ಈ ಅಖಾಡದ ಕಾರ್ಯದರ್ಶಿ ಸ್ವಾಮಿ ನರೇಂದ್ರಗಿರಿ ಅಖಿಲ ಭಾರತೀಯ ಅಖಾಡ ಪರಿಷತ್ನ ಅಧ್ಯಕ್ಷರೂ ಹೌದು. ಶಿವ-ಪಾರ್ವತಿಯ ಮಗ ಕಾರ್ತಿಕೇಯನ ಆರಾಧಕರು. ಕ್ರಿ.ಶ. 904ರಲ್ಲಿ ಗುಜರಾತಿನ ಮಾಂಡವಿಯಲ್ಲಿ ಇದರ ಸ್ಥಾಪನೆಯಾಯಿತು ಎನ್ನಲಾಗುತ್ತಿದೆ. ಜುನಾ ಅಖಾಡದ ನಂತರ ನಿರಂಜನಿ ಅಖಾಡವೇ ಎರಡನೇ ಅತಿದೊಡ್ಡ ಅಖಾಡವೆನಿಸಿದೆ. ಇಲ್ಲೂ ಸಹ ಸಾಧುಗಳು ಅರ್ಧಕುಂಭ ಮತ್ತು ಪೂರ್ಣ ಕುಂಭಮೇಳಗಳಲ್ಲಿ 52 ಅಡಿ ಎತ್ತರದ ಧ್ವಜವನ್ನು ಪೂಜಿಸುವುದು ಸಂಪ್ರದಾಯ.
ಶಂಭು ಪಂಚಾಯತಿ ಅಟಲ್ ಅಖಾಡ
ಕೇಂದ್ರ ಕಚೇರಿ: ವಾರಾಣಸಿ
ವಿಶೇಷತೆ: ಮೂರು ಅತ್ಯಂತ ಹಳೆಯ ಅಖಾಡಗಳ ಪೈಕಿ ಒಂದು.
ಪಂಥ: ಶೈವ
ಮುಖ್ಯಸ್ಥ: ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ವಿಶ್ವಾತ್ಮಾನಂದ ಸರಸ್ವತಿ
ಹಿಂದೂ ಧರ್ಮ ಸಂಸ್ಕೃತಿ ರಕ್ಷಣೆಗಿರುವ ಅಖಾಡಗಳ ಪೈಕಿ ಇದು ಕೂಡ ಅತ್ಯಂತ ಹಳೆಯದರಲ್ಲಿ ಒಂದಾಗಿದೆ. ಶ್ರೀ ಮಹಾಂತ ಸ್ವಾಮಿ ಸತ್ಯಂಗಿರಿ ಅವರ ನೇತೃತ್ವದಲ್ಲಿ ಈ ಬಾರಿಯ ಕುಂಭಮೇಳದಲ್ಲಿ ಪಾಲ್ಗೊಂಡಿದೆ. ಗಣೇಶ ಇವರ ಆರಾಧ್ಯ ದೈವ. ಕುಂಭಮೇಳದಲ್ಲಿ ಎರಡನೇ ಶಾಹಿಸ್ನಾನದ ಸಂದರ್ಭದಲ್ಲಿ ನಾಗಾ ಸಾಧುಗಳಿಗೆ ದೀಕ್ಷೆ ಕೊಡುವ ಕಾರ್ಯಕ್ರಮ ಆಯೋಜಿಸುವುದು ಇದೇ ಅಖಾಡ.
ಪಂಚಾಯತಿ ಅಖಾಡ ಮಹಾನಿರ್ವಾಣಿ
ಕೇಂದ್ರ ಕಚೇರಿ: ಪ್ರಯಾಗ್ರಾಜ್
ವಿಶೇಷತೆ: ಆದಿ ಶಂಕರರಿಂದ ಸ್ಥಾಪಿತವಾದ ದಶನಾಮಿ ಅಖಾಡ.
ಪಂಥ: ಶೈವ
ಮುಖ್ಯಸ್ಥ: ಐವರು ಸದಸ್ಯರ ಮಂಡಳಿ
ಈ ಅಖಾಡದವರು ಕಪಿಲಮುನಿ ಮಹಾರಾಜರನ್ನು ಆರಾಧಿಸುವರು. ಕುಂಭಮೇಳದಲ್ಲಿ ಶ್ರೀ ಮಹಾಂತ ಯಮುನಾಪುರಿ ಮಹಾರಾಜ್ ಮತ್ತು ಮಹಾಂತ ರವಸೇವಕ ಗಿರಿ ಪಂಚಾಯತಿ ಅಖಾಡ ಮಹಾನಿರ್ವಾಣಿಯ ಆಡಳಿತ ಮಂಡಳಿಯ ಉಸ್ತುವಾರಿ ಹೊತ್ತಿರುವರು. ಈ ಅಖಾಡಕ್ಕೆ ನಿರ್ದಿಷ್ಟ ಮುಖ್ಯಸ್ಥರಿಲ್ಲ. ಐವರು ಸದಸ್ಯರ ಮಂಡಳಿಯೇ ಮುಖ್ಯಸ್ಥನ ಜವಾಬ್ದಾರಿ ನಿರ್ವಹಿಸುತ್ತದೆ.
ಪಂಚಾಯತಿ ಅಖಾಡ ಬಡಾ ಉದಾಸೀನ್
ಕೇಂದ್ರ ಕಚೇರಿ: ಪ್ರಯಾಗ್ರಾಜ್
ವಿಶೇಷತೆ: ಭವ್ಯತೆಗೆ ಹೆಸರುವಾಸಿ
ಪಂಥ: ಉದಾಸೀನ ಪಂಥ (ಗುರು ನಾನಕ್ರ ಪುತ್ರ ಶ್ರೀ ಚಾಂದ್ ಬೋಧನೆಗಳಿಂದ ಹುಟ್ಟಿಕೊಂಡಿದ್ದು)
ಮುಖ್ಯಸ್ಥ: ಹಿರಿಯ ಪಂಚ ಸದಸ್ಯರ ಮಂಡಳಿ
ಈ ಅಖಾಡ, ಸ್ವಾಮಿ ಯೋಗರಾಜ್ ಶ್ರೀ ನಿರ್ವಾಣದೇವ್ಜಿ ಮಹಾರಾಜ್ ಅವರಿಂದ 1825ರಲ್ಲಿ ಹರಿದ್ವಾರದಲ್ಲಿ ಸ್ಥಾಪನೆಯಾಗಿದೆ. ಜಗದ್ಗುರು ಭಗವಾನ್ ಶ್ರೀ ಚಂದ್ರಜೀ ಇವರ ಆರಾಧ್ಯ ದೈವ. ಅರ್ಧಕುಂಭ ಮತ್ತು ಪೂರ್ಣಕುಂಭ ಮೇಳದಲ್ಲಿ 75 ಅಡಿ ಧ್ವಜವನ್ನು ಪೂಜಿಸುವುದು ವಾಡಿಕೆ. ಭವ್ಯತೆಯಲ್ಲಿ ಈ ಅಖಾಡ ಹೆಸರುವಾಸಿಯಾಗಿದೆ.
ಪಂಚಾಯತಿ ಅಖಾಡ ನಯಾ ಉದಾಸೀನ್
ಕೇಂದ್ರ ಕಚೇರಿ: ಹರಿದ್ವಾರ
ವಿಶೇಷತೆ: ಸರಳತೆ
ಪಂಥ: ಉದಾಸೀನ ಪಂಥ
ಮುಖ್ಯಸ್ಥ: ಹಿರಿಯ ಪಂಚ ಸದಸ್ಯರ ಮಂಡಳಿ
ಬಡಾ ಉದಾಸೀನ್ ಅಖಾಡ ಜತೆಗಿನ ಧಾರ್ಮಿಕ ಸಂಘರ್ಷದ ಬಳಿಕ ರೂಪಿತಗೊಂಡ ಅಖಾಡ ಇದಾಗಿದೆ. 1846ರಲ್ಲಿ ಸ್ಥಾಪನೆ. ಮಹಾಂತ ಸುಧೀರ್ ದಾಸ್ ಇದರ ಸಂಸ್ಥಾಪಕರು. ವಿವಿಧ ಸಂಪ್ರದಾಯಗಳ ಸಂಗಮ ಈ ಅಖಾಡ. ಸಾಧುಗಳ ಮೆರವಣಿಗೆಯಲ್ಲಿ ಯಾವುದೇ ಭವ್ಯತೆ ಇರುವುದಿಲ್ಲ. ಸರಳತೆಯೇ ಇವರ ಬೋಧನೆ. 15ನೇ ಶತಮಾನದ ಸಂತ ಶ್ರೀ ಚಂದ್ರ ಭಗವಾನ್ ಇವರ ದೈವ.
ಪಂಚ ನಿರ್ಮೋಹಿ ಅಣಿ ಅಖಾಡ
ಕೇಂದ್ರ ಕಚೇರಿ: ಹರಿದ್ವಾರ
ವಿಶೇಷತೆ: ಶ್ವೇತವರ್ಣದ 52 ಅಡಿ ಎತ್ತರದ ಧ್ವಜ
ಪಂಥ: ವೈಷ್ಣವ
ಮುಖ್ಯಸ್ಥ: ಪಂಚ ಸದಸ್ಯರ ಮಂಡಳಿ
ಆಂಜನೇಯನನ್ನು ಆರಾಧಿಸುವ ವೈಷ್ಣವ ಪಂಥದ ಅಖಾಡ ಇದು. ವೃಂದಾವನದಲ್ಲಿ ಇದು ಜನ್ಮ ತೆಳೆದಿದೆ. ಒಂದೇ ಬಗೆಯ ಧರ್ಮ ಸಿದ್ಧಾಂತ ಹೊಂದಿರುವ ನಾಲ್ಕು ಪಂಥ ಹಾಗೂ 18 ವೈಷ್ಣವ ಗುಂಪುಗಳು ಸೇರಿ ಈ ಅಖಾಡ ರೂಪುಗೊಂಡಿದೆ. ಪಂಚ ಸದಸ್ಯರ ಮಂಡಳಿ ಇದರ ಕಾರ್ಯವೈಖರಿ ನೋಡಿಕೊಳ್ಳುತ್ತದೆ.
ಪಂಚ ದಿಗಂಬರ ಅಣಿ ಅಖಾಡ
ಕೇಂದ್ರ ಕಚೇರಿ: ಹರಿದ್ವಾರ
ವಿಶೇಷತೆ: ಪಂಚವರ್ಣದ ಧ್ವಜ
ಪಂಥ: ವೈಷ್ಣವ
ಮುಖ್ಯಸ್ಥ: ಪಂಚ ಸದಸ್ಯರ ಮಂಡಳಿ
ಪುರಾತನ ಅಸ್ತ್ರಗಳನ್ನು ಪೂಜಿಸುವ ಈ ಅಖಾಡ ಸನಾತನ ಧರ್ಮ ಪ್ರಚಾರದಲ್ಲಿ ಮುಂಚೂಣಿಯಲ್ಲಿದೆ. ಅಖಾಡದ ಸಾಧುಗಳು ಸದಾಕಾಲ ಕಾವಿಧಾರಿಗಳು. ಬೇರೆ ವರ್ಣದ ಬಟ್ಟೆ ಇವರಿಗೆ ನಿಷಿದ್ಧ. ಪರಸ್ಪರ ಗೌರವ, ಧರ್ಮ ಸಂರಕ್ಷಣೆಯ ಮೂಲಕ ಹೆಸರು ಮಾಡಿದೆ.
ಪಂಚ ನಿರ್ವಾಣಿ ಅಣಿ ಅಖಾಡ
ಕೇಂದ್ರ ಕಚೇರಿ: ಹರಿದ್ವಾರ
ವಿಶೇಷತೆ: ಕೆಂಪು ವರ್ಣದ ಧ್ವಜ
ಪಂಥ: ವೈಷ್ಣವ
ಮುಖ್ಯಸ್ಥ: ಪಂಚ ಸದಸ್ಯರ ಮಂಡಳಿ
ಈ ಅಖಾಡದ ಸಾಧುಗಳು ಹುನುಮಂತನ ವಿಗ್ರಹ ಆರಾಧಿಸುವುದು ಹೆಚ್ಚು. ಹಣೆಗೆ ತಿಲಕ ಹಚ್ಚಿಕೊಳ್ಳುವುದು ಇವರ ಸಂಪ್ರದಾಯ. ಮಹಾಂತ ಧರ್ಮದಾಸ್ಜೀ ಮತ್ತು ಮಹಾಂತ ಮೋಹನ್ದಾಸ್ ಜೀ ಪಂಚ ಸದಸ್ಯ ಮಂಡಳಿಯ ಪ್ರಮುಖ ಪ್ರತಿನಿಧಿಗಳು. ಇದು ಸಹ ಸನಾತನ ಧರ್ಮ ಪ್ರಚಾರದಲ್ಲಿ ತೊಡಗಿದೆ.
ಶಂಭು ಪಂಚಾಗ್ನಿ ಅಖಾಡ
ಕೇಂದ್ರ ಕಚೇರಿ: ಜುನಾಗಢ (ಗುಜರಾತ್)
ವಿಶೇಷತೆ: ಬ್ರಹ್ಮಚಾರಿಗಳನ್ನು ಸಂತರನ್ನಾಗಿ ನೇಮಿಸುವುದು
ಪಂಥ: ಶೈವ
ಮುಖ್ಯಸ್ಥ: ಸಭಾಪತಿ ಬ್ರಹ್ಮಚಾರಿ ಮುಕ್ತಾನಂದಜೀ ಮಹಾರಾಜ್
ಈ ಅಖಾಡ ನಾಗಾ ಸಾಧುಗಳನ್ನು ಹೊಂದಿಲ್ಲ. ಕಠಿಣ ವ್ರತ ಆಚರಣೆಯ ಬಳಿಕ ಬ್ರಹ್ಮಚಾರಿಗಳಿಗೆ ಸಾಧುಗಳ ಗೌರವ ನೀಡುತ್ತದೆ. ಪವಿತ್ರ ದಾರವನ್ನು ಧರಿಸುವ ಇವರು ನಂತರದಲ್ಲಿ ಬೇಕಿದ್ದರೆ ಬೇರೆ ಅಖಾಡಗಳಿಗೆ ಸೇರಿ ನಾಗಾ ಸಾಧುಗಳಾಗಲು ಅವಕಾಶ ಒದಗಿಸುತ್ತದೆ. ಈ ಅಖಾಡದ ಸಾಧುಗಳು ಮತ್ತು ಭರಿಸುವ ಯಾವುದನ್ನೂ ಸೇವಿಸುವುದಿಲ್ಲ. ತಮ್ಮ ಆಹಾರವನ್ನು ತಾವೇ ಸಿದ್ಧಪಡಿಸಿಕೊಳ್ಳುವರು.
ಪಂಚ ದಶನಾಮ್ ಜುನಾ ಅಖಾಡ
ಕೇಂದ್ರ ಕಚೇರಿ: ವಾರಾಣಸಿ
ವಿಶೇಷತೆ: 13 ಅಖಾಡಗಳ ಪೈಕಿ ಅತಿ ದೊಡ್ಡದು
ಪಂಥ: ಶೈವ
ಮುಖ್ಯಸ್ಥ: ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ
ಜಗದ್ಗುರು ಆದಿ ಶಂಕರಾಚಾರ್ಯರು ಪರಿಚಯಿಸಿದ ದಶನಾಮಿ ಸಂಪ್ರದಾಯದ ವ್ಯಾಪ್ತಿಗೆ ಬರುವ ಈ ಜುನಾ ಅಖಾಡ ಶೈವ ಪಂಥಕ್ಕೆ ಸೇರಿದ್ದಾಗಿದೆ. ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ, ದ್ವಾರಕಾ, ಪುರಿ ಮತ್ತು ಜ್ಯೋತಿರ್ಮಠಗಳ ಜತೆಗೆ ಸಂಬಂಧ ಬೆಸೆದುಕೊಂಡಿದೆ. ಜುನಾ ಅಖಾಡದವರು ಭಗವಾನ್ ದತ್ತಾತ್ರೇಯ ಹಾಗೂ 52 ಅಡಿ ಎತ್ತರದ ಪವಿತ್ರ ಧ್ವಜವನ್ನು ಪೂಜಿಸುವರು. ಓಂ ನಮೋ ನಾರಾಯಣ ಇವರ ನಾಮಜಪದ ಮಂತ್ರ. ಅಖಾಡದ ಆಡಳಿತ ವೈಖರಿ ನೋಡಿಕೊಳ್ಳುವ 'ಶ್ರೀಪಂಚ'ದ ಸದಸ್ಯರನ್ನು ಅರ್ಧ ಕುಂಭಮೇಳ ಹಾಗೂ ಪೂರ್ಣಕುಂಭ ಮೇಳದಲ್ಲಿ ಚುನಾಯಿಸಲಾಗುತ್ತದೆ. ಇದು ನಾಗಾ ಸಾಧುಗಳನ್ನು ಹೊಂದಿದೆ. ಈ ಅಖಾಡ ಅಸ್ತ್ರಧಾರಿ (ಯುದ್ಧ ಕಲೆಗೆ ಸಂಬಂಧಿಸಿದ್ದು) ಹಾಗೂ ಶಾಸ್ತ್ರಧಾರಿ (ಶಾಸ್ತ್ರ ಕಲೆಗೆ ಸಂಬಂಧಿಸಿದ್ದು) ಸ್ವಾಮೀಜಿಗಳನ್ನೂ ಹೊಂದಿದೆ.
ಪಂಚಾಯತಿ ಅಖಾಡ ನಿರಂಜನಿ
ಕೇಂದ್ರ ಕಚೇರಿ: ದಾರಾಗಂಜ್(ಪ್ರಯಾಗ್ರಾಜ್)
ವಿಶೇಷತೆ: ಅನುಯಾಯಿಗಳು ಸುಶಿಕ್ಷಿತರು. ಡಾಕ್ಟರೇಟ್, ಸ್ನಾತಕೋತ್ತರ ಪದವಿ ಪೂರೈಸಿದವರೂ ಇದರ ಸದಸ್ಯರು
ಪಂಥ: ಶೈವ
ಮುಖ್ಯಸ್ಥ: ಸ್ವಾಮಿ ಮಹಾಂತ ರವೀಂದ್ರಪುರಿ
ಪಂಚಾಯತಿ ಅಖಾಡ ನಿರಂಜನಿ ಪ್ರಯಾಗ್ರಾಜ್ನಲ್ಲಿ ದೊಡ್ಡ ನೆಲೆ ಹೊಂದಿದೆ. ಇದು ಕೂಡ ಶೈವ ಪಂಥಕ್ಕೆ ಸೇರಿದ್ದಾಗಿದೆ. ಈ ಅಖಾಡದ ಕಾರ್ಯದರ್ಶಿ ಸ್ವಾಮಿ ನರೇಂದ್ರಗಿರಿ ಅಖಿಲ ಭಾರತೀಯ ಅಖಾಡ ಪರಿಷತ್ನ ಅಧ್ಯಕ್ಷರೂ ಹೌದು. ಶಿವ-ಪಾರ್ವತಿಯ ಮಗ ಕಾರ್ತಿಕೇಯನ ಆರಾಧಕರು. ಕ್ರಿ.ಶ. 904ರಲ್ಲಿ ಗುಜರಾತಿನ ಮಾಂಡವಿಯಲ್ಲಿ ಇದರ ಸ್ಥಾಪನೆಯಾಯಿತು ಎನ್ನಲಾಗುತ್ತಿದೆ. ಜುನಾ ಅಖಾಡದ ನಂತರ ನಿರಂಜನಿ ಅಖಾಡವೇ ಎರಡನೇ ಅತಿದೊಡ್ಡ ಅಖಾಡವೆನಿಸಿದೆ. ಇಲ್ಲೂ ಸಹ ಸಾಧುಗಳು ಅರ್ಧಕುಂಭ ಮತ್ತು ಪೂರ್ಣ ಕುಂಭಮೇಳಗಳಲ್ಲಿ 52 ಅಡಿ ಎತ್ತರದ ಧ್ವಜವನ್ನು ಪೂಜಿಸುವುದು ಸಂಪ್ರದಾಯ.
ಶಂಭು ಪಂಚಾಯತಿ ಅಟಲ್ ಅಖಾಡ
ಕೇಂದ್ರ ಕಚೇರಿ: ವಾರಾಣಸಿ
ವಿಶೇಷತೆ: ಮೂರು ಅತ್ಯಂತ ಹಳೆಯ ಅಖಾಡಗಳ ಪೈಕಿ ಒಂದು.
ಪಂಥ: ಶೈವ
ಮುಖ್ಯಸ್ಥ: ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ವಿಶ್ವಾತ್ಮಾನಂದ ಸರಸ್ವತಿ
ಹಿಂದೂ ಧರ್ಮ ಸಂಸ್ಕೃತಿ ರಕ್ಷಣೆಗಿರುವ ಅಖಾಡಗಳ ಪೈಕಿ ಇದು ಕೂಡ ಅತ್ಯಂತ ಹಳೆಯದರಲ್ಲಿ ಒಂದಾಗಿದೆ. ಶ್ರೀ ಮಹಾಂತ ಸ್ವಾಮಿ ಸತ್ಯಂಗಿರಿ ಅವರ ನೇತೃತ್ವದಲ್ಲಿ ಈ ಬಾರಿಯ ಕುಂಭಮೇಳದಲ್ಲಿ ಪಾಲ್ಗೊಂಡಿದೆ. ಗಣೇಶ ಇವರ ಆರಾಧ್ಯ ದೈವ. ಕುಂಭಮೇಳದಲ್ಲಿ ಎರಡನೇ ಶಾಹಿಸ್ನಾನದ ಸಂದರ್ಭದಲ್ಲಿ ನಾಗಾ ಸಾಧುಗಳಿಗೆ ದೀಕ್ಷೆ ಕೊಡುವ ಕಾರ್ಯಕ್ರಮ ಆಯೋಜಿಸುವುದು ಇದೇ ಅಖಾಡ.
ಪಂಚಾಯತಿ ಅಖಾಡ ಮಹಾನಿರ್ವಾಣಿ
ಕೇಂದ್ರ ಕಚೇರಿ: ಪ್ರಯಾಗ್ರಾಜ್
ವಿಶೇಷತೆ: ಆದಿ ಶಂಕರರಿಂದ ಸ್ಥಾಪಿತವಾದ ದಶನಾಮಿ ಅಖಾಡ.
ಪಂಥ: ಶೈವ
ಮುಖ್ಯಸ್ಥ: ಐವರು ಸದಸ್ಯರ ಮಂಡಳಿ
ಈ ಅಖಾಡದವರು ಕಪಿಲಮುನಿ ಮಹಾರಾಜರನ್ನು ಆರಾಧಿಸುವರು. ಕುಂಭಮೇಳದಲ್ಲಿ ಶ್ರೀ ಮಹಾಂತ ಯಮುನಾಪುರಿ ಮಹಾರಾಜ್ ಮತ್ತು ಮಹಾಂತ ರವಸೇವಕ ಗಿರಿ ಪಂಚಾಯತಿ ಅಖಾಡ ಮಹಾನಿರ್ವಾಣಿಯ ಆಡಳಿತ ಮಂಡಳಿಯ ಉಸ್ತುವಾರಿ ಹೊತ್ತಿರುವರು. ಈ ಅಖಾಡಕ್ಕೆ ನಿರ್ದಿಷ್ಟ ಮುಖ್ಯಸ್ಥರಿಲ್ಲ. ಐವರು ಸದಸ್ಯರ ಮಂಡಳಿಯೇ ಮುಖ್ಯಸ್ಥನ ಜವಾಬ್ದಾರಿ ನಿರ್ವಹಿಸುತ್ತದೆ.
ಪಂಚಾಯತಿ ಅಖಾಡ ಬಡಾ ಉದಾಸೀನ್
ಕೇಂದ್ರ ಕಚೇರಿ: ಪ್ರಯಾಗ್ರಾಜ್
ವಿಶೇಷತೆ: ಭವ್ಯತೆಗೆ ಹೆಸರುವಾಸಿ
ಪಂಥ: ಉದಾಸೀನ ಪಂಥ (ಗುರು ನಾನಕ್ರ ಪುತ್ರ ಶ್ರೀ ಚಾಂದ್ ಬೋಧನೆಗಳಿಂದ ಹುಟ್ಟಿಕೊಂಡಿದ್ದು)
ಮುಖ್ಯಸ್ಥ: ಹಿರಿಯ ಪಂಚ ಸದಸ್ಯರ ಮಂಡಳಿ
ಈ ಅಖಾಡ, ಸ್ವಾಮಿ ಯೋಗರಾಜ್ ಶ್ರೀ ನಿರ್ವಾಣದೇವ್ಜಿ ಮಹಾರಾಜ್ ಅವರಿಂದ 1825ರಲ್ಲಿ ಹರಿದ್ವಾರದಲ್ಲಿ ಸ್ಥಾಪನೆಯಾಗಿದೆ. ಜಗದ್ಗುರು ಭಗವಾನ್ ಶ್ರೀ ಚಂದ್ರಜೀ ಇವರ ಆರಾಧ್ಯ ದೈವ. ಅರ್ಧಕುಂಭ ಮತ್ತು ಪೂರ್ಣಕುಂಭ ಮೇಳದಲ್ಲಿ 75 ಅಡಿ ಧ್ವಜವನ್ನು ಪೂಜಿಸುವುದು ವಾಡಿಕೆ. ಭವ್ಯತೆಯಲ್ಲಿ ಈ ಅಖಾಡ ಹೆಸರುವಾಸಿಯಾಗಿದೆ.
ಪಂಚಾಯತಿ ಅಖಾಡ ನಯಾ ಉದಾಸೀನ್
ಕೇಂದ್ರ ಕಚೇರಿ: ಹರಿದ್ವಾರ
ವಿಶೇಷತೆ: ಸರಳತೆ
ಪಂಥ: ಉದಾಸೀನ ಪಂಥ
ಮುಖ್ಯಸ್ಥ: ಹಿರಿಯ ಪಂಚ ಸದಸ್ಯರ ಮಂಡಳಿ
ಬಡಾ ಉದಾಸೀನ್ ಅಖಾಡ ಜತೆಗಿನ ಧಾರ್ಮಿಕ ಸಂಘರ್ಷದ ಬಳಿಕ ರೂಪಿತಗೊಂಡ ಅಖಾಡ ಇದಾಗಿದೆ. 1846ರಲ್ಲಿ ಸ್ಥಾಪನೆ. ಮಹಾಂತ ಸುಧೀರ್ ದಾಸ್ ಇದರ ಸಂಸ್ಥಾಪಕರು. ವಿವಿಧ ಸಂಪ್ರದಾಯಗಳ ಸಂಗಮ ಈ ಅಖಾಡ. ಸಾಧುಗಳ ಮೆರವಣಿಗೆಯಲ್ಲಿ ಯಾವುದೇ ಭವ್ಯತೆ ಇರುವುದಿಲ್ಲ. ಸರಳತೆಯೇ ಇವರ ಬೋಧನೆ. 15ನೇ ಶತಮಾನದ ಸಂತ ಶ್ರೀ ಚಂದ್ರ ಭಗವಾನ್ ಇವರ ದೈವ.
ಪಂಚ ನಿರ್ಮೋಹಿ ಅಣಿ ಅಖಾಡ
ಕೇಂದ್ರ ಕಚೇರಿ: ಹರಿದ್ವಾರ
ವಿಶೇಷತೆ: ಶ್ವೇತವರ್ಣದ 52 ಅಡಿ ಎತ್ತರದ ಧ್ವಜ
ಪಂಥ: ವೈಷ್ಣವ
ಮುಖ್ಯಸ್ಥ: ಪಂಚ ಸದಸ್ಯರ ಮಂಡಳಿ
ಆಂಜನೇಯನನ್ನು ಆರಾಧಿಸುವ ವೈಷ್ಣವ ಪಂಥದ ಅಖಾಡ ಇದು. ವೃಂದಾವನದಲ್ಲಿ ಇದು ಜನ್ಮ ತೆಳೆದಿದೆ. ಒಂದೇ ಬಗೆಯ ಧರ್ಮ ಸಿದ್ಧಾಂತ ಹೊಂದಿರುವ ನಾಲ್ಕು ಪಂಥ ಹಾಗೂ 18 ವೈಷ್ಣವ ಗುಂಪುಗಳು ಸೇರಿ ಈ ಅಖಾಡ ರೂಪುಗೊಂಡಿದೆ. ಪಂಚ ಸದಸ್ಯರ ಮಂಡಳಿ ಇದರ ಕಾರ್ಯವೈಖರಿ ನೋಡಿಕೊಳ್ಳುತ್ತದೆ.
ಪಂಚ ದಿಗಂಬರ ಅಣಿ ಅಖಾಡ
ಕೇಂದ್ರ ಕಚೇರಿ: ಹರಿದ್ವಾರ
ವಿಶೇಷತೆ: ಪಂಚವರ್ಣದ ಧ್ವಜ
ಪಂಥ: ವೈಷ್ಣವ
ಮುಖ್ಯಸ್ಥ: ಪಂಚ ಸದಸ್ಯರ ಮಂಡಳಿ
ಪುರಾತನ ಅಸ್ತ್ರಗಳನ್ನು ಪೂಜಿಸುವ ಈ ಅಖಾಡ ಸನಾತನ ಧರ್ಮ ಪ್ರಚಾರದಲ್ಲಿ ಮುಂಚೂಣಿಯಲ್ಲಿದೆ. ಅಖಾಡದ ಸಾಧುಗಳು ಸದಾಕಾಲ ಕಾವಿಧಾರಿಗಳು. ಬೇರೆ ವರ್ಣದ ಬಟ್ಟೆ ಇವರಿಗೆ ನಿಷಿದ್ಧ. ಪರಸ್ಪರ ಗೌರವ, ಧರ್ಮ ಸಂರಕ್ಷಣೆಯ ಮೂಲಕ ಹೆಸರು ಮಾಡಿದೆ.
ಪಂಚ ನಿರ್ವಾಣಿ ಅಣಿ ಅಖಾಡ
ಕೇಂದ್ರ ಕಚೇರಿ: ಹರಿದ್ವಾರ
ವಿಶೇಷತೆ: ಕೆಂಪು ವರ್ಣದ ಧ್ವಜ
ಪಂಥ: ವೈಷ್ಣವ
ಮುಖ್ಯಸ್ಥ: ಪಂಚ ಸದಸ್ಯರ ಮಂಡಳಿ
ಈ ಅಖಾಡದ ಸಾಧುಗಳು ಹುನುಮಂತನ ವಿಗ್ರಹ ಆರಾಧಿಸುವುದು ಹೆಚ್ಚು. ಹಣೆಗೆ ತಿಲಕ ಹಚ್ಚಿಕೊಳ್ಳುವುದು ಇವರ ಸಂಪ್ರದಾಯ. ಮಹಾಂತ ಧರ್ಮದಾಸ್ಜೀ ಮತ್ತು ಮಹಾಂತ ಮೋಹನ್ದಾಸ್ ಜೀ ಪಂಚ ಸದಸ್ಯ ಮಂಡಳಿಯ ಪ್ರಮುಖ ಪ್ರತಿನಿಧಿಗಳು. ಇದು ಸಹ ಸನಾತನ ಧರ್ಮ ಪ್ರಚಾರದಲ್ಲಿ ತೊಡಗಿದೆ.
ಶಂಭು ಪಂಚಾಗ್ನಿ ಅಖಾಡ
ಕೇಂದ್ರ ಕಚೇರಿ: ಜುನಾಗಢ (ಗುಜರಾತ್)
ವಿಶೇಷತೆ: ಬ್ರಹ್ಮಚಾರಿಗಳನ್ನು ಸಂತರನ್ನಾಗಿ ನೇಮಿಸುವುದು
ಪಂಥ: ಶೈವ
ಮುಖ್ಯಸ್ಥ: ಸಭಾಪತಿ ಬ್ರಹ್ಮಚಾರಿ ಮುಕ್ತಾನಂದಜೀ ಮಹಾರಾಜ್
ಈ ಅಖಾಡ ನಾಗಾ ಸಾಧುಗಳನ್ನು ಹೊಂದಿಲ್ಲ. ಕಠಿಣ ವ್ರತ ಆಚರಣೆಯ ಬಳಿಕ ಬ್ರಹ್ಮಚಾರಿಗಳಿಗೆ ಸಾಧುಗಳ ಗೌರವ ನೀಡುತ್ತದೆ. ಪವಿತ್ರ ದಾರವನ್ನು ಧರಿಸುವ ಇವರು ನಂತರದಲ್ಲಿ ಬೇಕಿದ್ದರೆ ಬೇರೆ ಅಖಾಡಗಳಿಗೆ ಸೇರಿ ನಾಗಾ ಸಾಧುಗಳಾಗಲು ಅವಕಾಶ ಒದಗಿಸುತ್ತದೆ. ಈ ಅಖಾಡದ ಸಾಧುಗಳು ಮತ್ತು ಭರಿಸುವ ಯಾವುದನ್ನೂ ಸೇವಿಸುವುದಿಲ್ಲ. ತಮ್ಮ ಆಹಾರವನ್ನು ತಾವೇ ಸಿದ್ಧಪಡಿಸಿಕೊಳ್ಳುವರು.