ಆ್ಯಪ್ನಗರ

ಚಂದ್ರಗಿರಿ ಬೆಟ್ಟದಲ್ಲಿ ಜನಸಾಗರ

ಗಣ್ಯರು, ಪಾಸ್‌ ಉಳ್ಳವರು ವಿಂಧ್ಯಗಿರಿಯಲ್ಲಿನಿರ್ಮಿಸಿರುವ ಅಟ್ಟಣಿಗೆ ಮೇಲಿಂದ ಬಾಹುಬಲಿ ಮಸ್ತಕಾಭಿಷೇಕ ವೀಕ್ಷಿಸಿದರೆ, ಉಳಿದವರು ಚಂದ್ರಗಿರಿ ಬೆಟ್ಟದ ಮೇಲೆ ನಿಂತು ಅಭಿಷೇಕವನ್ನು ಕಣ್ತುಂಬಿಕೊಂಡರು. ಬೆಳಗ್ಗೆ ಆರಂಭಗೊಂಡ ಧಾರ್ಮಿಕ ವಿಧಿವಿಧಾನ ಸಂಜೆವರೆಗೂ ನಡೆದವು.

Vijaya Karnataka Web 18 Feb 2018, 10:40 am
- ನಾಗರಾಜ್‌ ನವೀಮನೆ ಶ್ರವಣಬೆಳಗೊಳ
Vijaya Karnataka Web mahamastakabhisheka in vindhyagiri
ಚಂದ್ರಗಿರಿ ಬೆಟ್ಟದಲ್ಲಿ ಜನಸಾಗರ


ಗಣ್ಯರು, ಪಾಸ್‌ ಉಳ್ಳವರು ವಿಂಧ್ಯಗಿರಿಯಲ್ಲಿನಿರ್ಮಿಸಿರುವ ಅಟ್ಟಣಿಗೆ ಮೇಲಿಂದ ಬಾಹುಬಲಿ ಮಸ್ತಕಾಭಿಷೇಕ ವೀಕ್ಷಿಸಿದರೆ, ಉಳಿದವರು ಚಂದ್ರಗಿರಿ ಬೆಟ್ಟದ ಮೇಲೆ ನಿಂತು ಅಭಿಷೇಕವನ್ನು ಕಣ್ತುಂಬಿಕೊಂಡರು. ಬೆಳಗ್ಗೆ ಆರಂಭಗೊಂಡ ಧಾರ್ಮಿಕ ವಿಧಿವಿಧಾನ ಸಂಜೆವರೆಗೂ ನಡೆದವು. ಸಾರ್ವಜನಿಕರಿಗೆ ವಿಂಧ್ಯಗಿರಿ ಪ್ರವೇಶ ನಿಷೇಧಿಸಿದ್ದರಿಂದ ದೊಡ್ಡಬೆಟ್ಟ ಕೆಳಗೆಯೇ ಭಕ್ತಿಗೀತೆ ಹಾಡುತ್ತ ವೈರಾಗ್ಯ ಮೂರ್ತಿಯ ಸ್ಮರಣೆ ಮಾಡಿದರು. ''ಬಾಹುಬಲಿ ಸ್ವಾಮಿ ಜಗಕೆ ನೀ ಸ್ವಾಮಿ, ಶಾಂತಿಯ ಮೂರುತಿಯೇ ನಮಿಪೆವು, ಅನುದಿನವೂ...'' ಎಂದು ನೆನೆದರು.

ಜಗಸಾಗರ: ವಿಂಧ್ಯಗಿರಿ ಪ್ರವೇಶ ನಿಷೇಧಿಸಿದ್ದರಿಂದ ಅದರ ಎದುರಿಗಿರುವ ಚಂದ್ರಗಿರಿ ಬೆಟ್ಟಕ್ಕೆ ಪ್ರವಾಸಿಗರ ದಂಡು ಹರಿದುಬಂತು. ವೃದ್ಧರಾದಿಯಾಗಿ ಎಲ್ಲರೂ ಉತ್ಸಾಹದಿಂದ ಚಿಕ್ಕಬೆಟ್ಟ ಹತ್ತಿದರು. ಬೆಟ್ಟ ಹತ್ತಲು ಬಸ್‌ ನಿಲ್ದಾಣದವರೆಗೂ ಜನರು ಸರತಿ ಸಾಲಿನಲ್ಲಿನಿಂತಿದ್ದರು. ಮಧ್ಯಾಹ್ನದವರೆಗೂ ಜನಸಾಗರ ತಗ್ಗಲೇ ಇಲ್ಲ. ಏಕಕಾಲಕ್ಕೆ ಹೆಚ್ಚಿನ ಪ್ರವಾಸಿಗರು ಹರಿದು ಬಂದ ಕಾರಣ, ಪೊಲೀಸರು ನೂಕುನುಗ್ಗಲು ತಪ್ಪಿಸಲು ಹರಸಾಹಸ ಪಟ್ಟರು.

ಚಂದ್ರಗಿರಿ ಬೆಟ್ಟದ ಮೇಲೆ ನಿಂತರೆ ವಿಂಧ್ಯಗಿರಿಯಲ್ಲಿವಿರಾಜಮಾನನಾಗಿರುವ ಬಾಹುಬಲಿಯ ತಲೆಯ ಭಾಗದವರೆಗೂ ಕಾಣುತ್ತದೆ. ಈ ಕಾರಣದಿಂದ ಬಹುತೇಕ ಭಕ್ತರು ಚಿಕ್ಕಬೆಟ್ಟದಿಂದಲೇ ಬಾಹುಬಲಿಯ ಮೊದಲ ಅಭಿಷೇಕವನ್ನು ಕಣ್ತುಂಬಿಕೊಂಡರು. ಇಲ್ಲಿನ ಬಸದಿಯೊಂದರಲ್ಲಿನೆಲೆಸಿರುವ ದಿಗಂಬರ ಮುನಿ ಚಿನ್ಮಯಿಸಾಗರ ಅವರಿಂದ ಜನರು ಬೆಳಗ್ಗೆ ಆಶೀರ್ವಾದ ಪಡೆದರು. ಬಸದಿಗಳಲ್ಲಿನಡೆದ ಪೂಜಾ ಕಾರ್ಯಕ್ರಮದಲ್ಲಿಪಾಲ್ಗೊಂಡು ತೀರ್ಥ ಪಡೆದರು. ಮಸ್ತಕಾಭಿಷೇಕ ಆರಂಭಗೊಳ್ಳುತ್ತಿದ್ದಂತೆ ಮುನಿಗಳು ವಿಂಧ್ಯಗಿರಿ ಬೆಟ್ಟದತ್ತ ಮುಖ ಮಾಡಿದರು. ಮಧ್ಯಾಹ್ನ ಸೂರ್ಯನ ಪ್ರಖರತೆ ಹೆಚ್ಚಾದರೂ ಲೆಕ್ಕಸದೇ ಚಂದ್ರಗಿರಿ ಬೆಟ್ಟ ಸುತ್ತಾಡಿದರು.

''ಅತಿಹೆಚ್ಚು ಸಂಖ್ಯೆಯಲ್ಲಿಚಂದ್ರಗಿರಿ ಬೆಟ್ಟಕ್ಕೆ ಪ್ರವಾಸಿಗರು ಇಂದು ಭೇಟಿ ನೀಡಿದ್ದಾರೆ. ಸಂಜೆವರೆಗೆ 2530 ಸಾವಿರ ಜನ ಚಂದ್ರಗಿರಿಗೆ ಬಂದು ಹೋಗಿರಬಹುದು'' ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಜಿತೇಂದ್ರನಾಥ ವಿಜಯ ಕರ್ನಾಟಕಕ್ಕೆ ತಿಳಿಸಿದರು.

9 ಸ್ಥಳಗಳಲ್ಲಿ ಎಲ್‌ಇಡಿ

ಮಸ್ತಕಾಭಿಷೇಕ ವೀಕ್ಷಣೆಗೆ ಬೆಟ್ಟದಲ್ಲಿಹೆಚ್ಚಿನ ಜನರಿಗೆ ಅವಕಾಶವಿಲ್ಲದ್ದರಿಂದ ಜಿಲ್ಲಾಡಳಿತ ಬಸ್‌ ನಿಲ್ದಾಣ, ಚಂದ್ರಗಿರಿ ಬೆಟ್ಟ, ರೈಲು ನಿಲ್ದಾಣ ಸೇರಿದಂತೆ 9 ಸ್ಥಳಗಳಲ್ಲಿಎಲ…ಇಡಿ ಸ್ಕ್ರೀನ್‌ ಅಳವಡಿಸಿತ್ತು. ವಿಂಧ್ಯಗಿರಿಯಲ್ಲಿನಡೆಯುವ ಪ್ರತಿಯೊಂದು ವಿಧಿವಿಧಾನಗಳನ್ನು ಸಾರ್ವಜನಿಕರು ನೇರ ಪ್ರಸಾರದಲ್ಲಿನೋಡಿ ಸಮಾಧಾನಪಟ್ಟುಕೊಂಡರು.

ಇದೊಂದು ಐತಿಹಾಸಿಕ ಗಳಿಗೆ. ಮಸ್ತಕಾಭಿಷೇಕ ನೋಡಲೆಂದೇ ಕುಟುಂಬದೊಂದಿಗೆ ಶ್ರವಣಬೆಳಗೊಳಕ್ಕೆ ಬಂದಿದ್ದೇನೆ. ಸಂಜೆವರೆಗೂ ವಿಂಧ್ಯಗಿರಿಗೆ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿಲ್ಲ. ಹಾಗಾಗಿ ಚಂದ್ರಗಿರಿ ಬೆಟ್ಟಕ್ಕೆ ಬಂದಿದ್ದೇವೆ. ಇಲ್ಲಿನ ಬಸದಿ, ಶಾಸನಗಳನ್ನು ಉತ್ತಮವಾಗಿ ಸಂರಕ್ಷಿಸಿರುವುದನ್ನು ನೋಡಿ ಖುಷಿಯಾಯಿತು.

-ರಮಣಸಿಂಗ್‌, ಮಧ್ಯ ಪ್ರದೇಶ್‌

ಬಾಹುಬಲಿ ದರ್ಶನಕ್ಕೆಂದೇ ಬೆಳಗಾವಿಯಿಂದ ಬಂದಿದ್ದೇವೆ. ಬಿಸಿಲು ಜಾಸ್ತಿ ಇದ್ದರೂ ಮನಸ್ಸಿನಲ್ಲಿವೈರಾಗ್ಯ ಮೂರ್ತಿಯನ್ನು ಕಣ್ತುಂಬಿಕೊಳ್ಳುವ ತವಕ. ಎರಡು ದಿನ ಇಲ್ಲೇ ಇದ್ದು ಊರಿಗೆ ಹೊರಡುತ್ತೇವೆ.

-ಮಹಾವೀರ, ಬೆಳಗಾವಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ