ಆ್ಯಪ್ನಗರ

ವಾಜಪೇಯಿ ಸರಕಾರದಿಂದ ಮೆಟ್ರೊ ಮಂಜೂರು

ವಾಜಪೇಯಿ ಸರಕಾರದಿಂದ ಮೆಟ್ರೊ ಮಂಜೂರು ಬೆಂಗಳೂರಿಗೆ ಮೆಟ್ರೊ ರೈಲು ಯೋಜನೆ ತರವಲ್ಲಿ ಹಲವರು ಕೆಲಸ ಮಾಡಿದ್ದಾರೆ.

ವಿಕ ಸುದ್ದಿಲೋಕ 18 Jun 2017, 12:57 pm

ಬೆಂಗಳೂರಿಗೆ ಮೆಟ್ರೊ ರೈಲು ಯೋಜನೆ ತರವಲ್ಲಿ ಹಲವರು ಕೆಲಸ ಮಾಡಿದ್ದು, ಇದರಲ್ಲಿ ಕೇಂದ್ರ ಸಚಿವ ಅನಂತಕುಮಾರ್‌ ಪ್ರಮುಖರು. ಅಟಲ್‌ ಬಿಹಾರಿ ವಾಜಪೇಯಿ ಸರಕಾರ 2002ರಲ್ಲಿ ಮೆಟ್ರೊ ಯೋಜನೆ ತರಲು ರಾಷ್ಟ್ರೀಯ ನಗರ ಯೋಜನೆ ರೂಪಿಸಿತು.

Vijaya Karnataka Web namma metro in bengaluru
ವಾಜಪೇಯಿ ಸರಕಾರದಿಂದ ಮೆಟ್ರೊ ಮಂಜೂರು


ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಮಹಾನಗರಗಳಿಗೆ ಮೆಟ್ರೊ ಯೋಜನೆ ಮಂಜೂರು ಮಾಡಲಾಯಿತು. ಅಂದಿನ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದ ಅನಂತಕುಮಾರ್‌ ಬೆಂಗಳೂರಿಗೂ ಮೆಟ್ರೊ ಯೋಜನೆ ತಂದುಕೊಡುವಲ್ಲಿ ಕೆಲಸ ಮಾಡಿದರು. ಇದಕ್ಕೆ ಅಂದಿನ ಸಿಎಂ ಎಸ್‌.ಎಂ.ಕೃಷ್ಣ ಸಾಥ್‌ ಕೊಟ್ಟರು.

ಕೊಂಕಣ ರೈಲ್ವೆ ಯೋಜನೆ ರೂವಾರಿ ಹಾಗೂ ಮೆಟ್ರೊ ತಜ್ಞ ಎಂದೇ ಹೆಸರು ಪಡೆದ ಶ್ರೀಧರನ್‌ ಅವರಿಂದ ಕಾರ್ಯಸಾಧ್ಯತಾ ವರದಿಯನ್ನು ಪಡೆಯಲಾಯಿತು. ನಂತರ ಮೆಟ್ರೊ ಯೋಜನೆಗೆ ಚಾಲನೆ ಸಿಕ್ಕಿತು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ