ಆ್ಯಪ್ನಗರ

ನುಡಿನಮನ: ಗಡಿನಾಡು-ಕರ್ನಾಟಕದ ಕೊಂಡಿ, ಬಹುಮುಖ ಪ್ರತಿಭೆಗಳ ಡಿ.ಕೆ. ಚೌಟ

ಪ್ರಧಾನವಾಗಿ ಕಲಾಪೋಷಕರಾಗಿದ್ದುಕೊಂಡು ರಂಗಕರ್ಮಿ, ಚಿತ್ರಕಲೆಯೊಂದಿಗಿದ್ದ ಆಸಕ್ತಿಯು ಕಲಾ ಪೋಷಕರೂ ಆಗಿದ್ದರು ಡಿ.ಕೆ. ಚೌಟ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರೊಂದಿಗೆ ನೇರ ಒಡನಾಟದ ಇಟ್ಟುಕೊಂಡಿದ್ದ ಡಿ.ಕೆ.ಚೌಟ ಅವರನ್ನು ಹತ್ತಿರದಿಂದ ಬಲ್ಲ ವ್ಯಕ್ತಿಯಾಗಿದ್ದರು. ಗೋವಿಂದ ಪೈ ಸ್ಮಾರಕ ಗಿಳಿವಿಂಡು ನಿರ್ಮಾಣದಲ್ಲಿ ಕರ್ನಾಟಕ ಹಾಗೂ ಕೇರಳ ಸರಕಾರದ ಪ್ರಧಾನ ಕೊಂಡಿಯಾಗಿ ನಿರಂತರ ಪರಿಶ್ರಮಿಸಿದ ಫಲವಾಗಿ ಮಂಜೇಶ್ವರದಲ್ಲಿ ಗಿಳಿವಿಂಡು ಲೋಕಾರ್ಪಣೆಯಾಗಿದೆ. ತಮ್ಮ 12ನೇ ವಯಸ್ಸಿನಲ್ಲಿಯೇ ನಾಟಕದಲ್ಲಿ ಬಣ್ಣ ಹಚ್ಚಿಕೊಂಡಿದ್ದರು, ಇದುವೇ ರಂಗಭೂಮಿಕೆಯಲ್ಲೂ ಅವರಿಗೆ ಆಸಕ್ತಿ ಹೊಂದಿದ್ದರು. ಬೆಂಗಳೂರಿನಲ್ಲಿಯೇ ಇದ್ದುಕೊಂಡು ಗಡಿನಾಡಿನ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

Vijaya Karnataka Web 19 Jun 2019, 4:26 pm
ಕಾಸರಗೋಡು: ಗಡಿನಾಡು ಕಾಸರಗೋಡು ಹಾಗೂ ಕರ್ನಾಟಕದ ಸಾಹಿತ್ಯ ಲೋಕದ ಪ್ರಮುಖ ಕೊಂಡಿಯಾಗಿದ್ದುಕೊಂಡು ತುಳುಭಾಷೆಯ ಘನತೆಯನ್ನು ಕರ್ನಾಟಕಾದ್ಯಂತ ಪಸರಿಸಿದ, ಕೃಷಿಕ, ರಂಗಕರ್ಮಿ, ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಸದಸ್ಯ, ಬೆಂಗಳೂರು ಚಿತ್ರಕಲಾ ಪರಿಷತ್‌ನ ಮಾಜಿ ಅಧ್ಯಕ್ಷ ಮೂಲತ: ಮಂಜೇಶ್ವರ ಮೀಯಪದವು ನಿವಾಸಿ ಡಿ.ಕೆ. ಚೌಟ ತನ್ನ 82ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಇವರ ಅಗಲುವಿಕೆಯು ಇಡೀ ಗಡಿನಾಡಿಗೆ, ತುಳು ಸಾಹಿತ್ಯಕ್ಕೆ ದೊಡ್ಡ ನಷ್ಟವಾಗಿದೆ. ಡಾ. ದರ್ಬೆ ಕೃಷ್ಣಾನಂದ ಚೌಟ ಅವರು ಡಿ.ಕೆ. ಚೌಟ ಎಂಬ ಹೆಸರಿನಲ್ಲಿಯೇ ಗುರುತಿಸಿಕೊಂಡಿದ್ದರು.
Vijaya Karnataka Web DK Chowta new-1


ಪ್ರಧಾನವಾಗಿ ಕಲಾಪೋಷಕರಾಗಿದ್ದುಕೊಂಡು ರಂಗಕರ್ಮಿ, ಚಿತ್ರಕಲೆಯೊಂದಿಗಿದ್ದ ಆಸಕ್ತಿಯು ಕಲಾ ಪೋಷಕರೂ ಆಗಿದ್ದರು ಡಿ.ಕೆ. ಚೌಟ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರೊಂದಿಗೆ ನೇರ ಒಡನಾಟದ ಇಟ್ಟುಕೊಂಡಿದ್ದ ಡಿ.ಕೆ.ಚೌಟ ಅವರನ್ನು ಹತ್ತಿರದಿಂದ ಬಲ್ಲ ವ್ಯಕ್ತಿಯಾಗಿದ್ದರು. ಗೋವಿಂದ ಪೈ ಸ್ಮಾರಕ ಗಿಳಿವಿಂಡು ನಿರ್ಮಾಣದಲ್ಲಿ ಕರ್ನಾಟಕ ಹಾಗೂ ಕೇರಳ ಸರಕಾರದ ಪ್ರಧಾನ ಕೊಂಡಿಯಾಗಿ ನಿರಂತರ ಪರಿಶ್ರಮಿಸಿದ ಫಲವಾಗಿ ಮಂಜೇಶ್ವರದಲ್ಲಿ ಗಿಳಿವಿಂಡು ಲೋಕಾರ್ಪಣೆಯಾಗಿದೆ. ತಮ್ಮ 12ನೇ ವಯಸ್ಸಿನಲ್ಲಿಯೇ ನಾಟಕದಲ್ಲಿ ಬಣ್ಣ ಹಚ್ಚಿಕೊಂಡಿದ್ದರು, ಇದುವೇ ರಂಗಭೂಮಿಕೆಯಲ್ಲೂ ಅವರಿಗೆ ಆಸಕ್ತಿ ಹೊಂದಿದ್ದರು. ಬೆಂಗಳೂರಿನಲ್ಲಿಯೇ ಇದ್ದುಕೊಂಡು ಗಡಿನಾಡಿನ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

ತುಳು ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ ಡಿ.ಕೆ.ಚೌಟ, ಮಿತ್ತಬಯಿಲ್ ಯಮುನಕ್ಕೆ ಹಾಗೂ ಕರಿಯ ವಜ್ವೆರೆನ ಕಥೆಕುಲು ಎಂಬ ತುಳು ಕಾದಂಬರಿಯೂ, ಪಿಲಿಪತ್ತಿ ಗಡಸ್, ಮೂಜಿ ಮುಟ್ಟು ಮೂಜಿ ಲೋಕ ಹಾಗೂ ಪಾಟ್ ಪಜ್ವೆಲು ತುಳು ನಾಟಕಗಳನ್ನು ರಚಿಸಿದ್ದಾರೆ. ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯು ಲಭಿಸಿದೆ. ಅಲ್ಲದೇ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಸಹ ಲಭಿಸಿದೆ.

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ, ಬಳಿಕ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಚಿತ್ರಕಲಾ ಪರಿಷತ್ತಿನ ಬೆಳವಣಿಗೆಯಲ್ಲಿ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ.

ತುಳು ಸ್ವತಂತ್ರ ಭಾಷೆಯಾಗಬೇಕೆಂಬ ಅಪೇಕ್ಷೆಯೂ ಅವರಲ್ಲಿತ್ತು. ಪ್ರತ್ಯೇಕ ತುಳುನಾಡು ಇನ್ನೊಂದು ರಾಜ್ಯವಾಗಿ ಬೆಳೆಯಬೇಕೆಂಬ ಹಂಬಲವೂ ಇತ್ತು. ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಿಬೇಕೆಂಬ ಬೇಡಿಕೆಯನ್ನು ಸಂಸದರ ಮೂಲಕ ಲೋಕಸಭೆಯಲ್ಲಿ ಪ್ರಸ್ತಾಪಿಸುವಂತೆ ಮಾಡಿದ್ದರು.

ಮಂಜೇಶ್ವರ ತಾಲೂಕಿನ ಮೀಯಪದವು ಬಂಟ್ಸ್ ಕುಟುಂಬದಲ್ಲಿ ಜನಿಸಿದ ಡಿ.ಕೆ.ಚೌಟ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಬಾಲಿವುಡ್ ಸಂಗೀತ ನಿರ್ದೇಶಕ ಸಂದೀಪ್ ಚೌಟ ಪುತ್ರ ಹಾಗೂ ಆನೆ ತಜ್ಞೆ ಎಂದೇ ಪ್ರಸಿದ್ಧಿಯನ್ನು ಪ್ರಜ್ಞಾ ಚೌಟ ಪುತ್ರಿಯಾಗಿದ್ದಾರೆ. ಸುಮಾರು 25 ವರ್ಷಗಳ ಕಾಲ ಆಫ್ರಿಕಾದಲ್ಲಿ ಉದ್ಯೋಗದಲ್ಲಿದ್ದರು. ಬಳಿಕ ಬೆಂಗಳೂರಿಗೆ ಬಂದು ನೆಲೆಸಿದ್ದರು. ಬಳಿಕ ರಫ್ತು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಅದರೊಂದಿಗೆ ಕೃಷಿಯಲ್ಲೂ ತೊಡಗಿಸಿ ಕೃಷಿಕರಾಗಿದ್ದರು.

ಮಂಜೇಶ್ವರದಲ್ಲಿ ರಾಷ್ಟ್ರಕವಿ ಗೋವಿಂದ ಪೈಗಳ ಸ್ಮಾರಕ ನಿರ್ಮಾಣದ ಸಂದರ್ಭದಲ್ಲಿ ಅವರು ನೀಡಿದ ಕೊಡುಗೆ ಅಪರಾವಾದದ್ದು, ಗೋವಿಂದ ಪೈ ಅವರೊಂದಿಗೆ ನಿಕಟ ಸಂಪರ್ಕ ಹೊಂದ್ದಿವರು. ಕೇರಳ ಹಾಗೂ ಕರ್ನಾಟಕ ಸರಕಾರದ ಜೊತೆ ಸಂಪರ್ಕ ಇಟ್ಟುಕೊಂಡು ಗೋವಿಂದ ಸ್ಮಾರಕ ಟ್ರಸ್ಟ್ ಮೂಲಕ ನಿರಂತರ ಪ್ರಯತ್ನಿಸಿದ್ದರು. ವರ್ಷಗಳ ಹಿಂದೆ ಕಾಸರಗೋಡಿನಿಂದ ಮಳೆ ನಿಂತ ಮೇಲೆ ಸಾಂತ್ವನ ರಂಗಯಾತ್ರೆಯು ಬೆಂಗಳೂರು ತಲುಪಿದಾಗ ಸಹಕಾರ ನೀಡಿದಲ್ಲದೇ ಆ ಮೂಲಕ ಸಂಗ್ರಹವಾದ ಮೊತ್ತವನ್ನು ಸರಕಾರಕ್ಕೆ ಹಸ್ತಾಂತರಿಸಿದ್ದರು. ಈಗಲೂ ಅವರ ತುಳು ನಾಟಕ ಕನ್ನಡ ಭಾಷಾಂತರಗೊಂಡು ಮೂರು ಹೆಜ್ಜೆ ಮೂರು ಲೋಕ ಪದವಿ ತರಗತಿಯ ಪಠ್ಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ