ಆ್ಯಪ್ನಗರ

ಪಾಕಿಸ್ತಾನ್ ಜಿಂದಾಬಾದ್ ಹೇಳಿಕೆ ನೀಡಿ ಫೇಮಸ್ ಆಗಲು ಮೈಕ್ ಸಾಕೆ? ರಾಜಕೀಯವೂ ಬೇಕೇ?

ಸ್ಕಾಲರ್‌ಶಿಪ್‌ಗೆ ಅಪ್ಲಿಕೇಶನ್ ಹಾಕುವುದಕ್ಕೂ, ಕಾಲೇಜಿನಲ್ಲಿ ಸೀಟ್ ಗಿಟ್ಟಿಸಿಕೊಳ್ಳುವುದಕ್ಕೂ ಜಾತಿ ಧರ್ಮ ಎಂದು ಕೇಳಿದಾಗ ಮಗುವಿಗೂ, ನಾವೆಲ್ಲಾ ಒಂದೇ ಎನ್ನುವ ಪುಸ್ತಕದ ಬದನೇಕಾಯಿ ಪಾಠ ಸುಳ್ಳು ಎಂದು ಅರಿವಾಗಿತ್ತು.

Vijaya Karnataka Web 21 Feb 2020, 7:14 pm
ಜನ ನಮ್ಮ ಮಾತುಗಳನ್ನು ಕೇಳಲು ಇಷ್ಟ ಪಡುತ್ತಾರೆ ಎಂದರೆ ಅದೊಂದು ವರವೇ ನಿಜ. ಅದನ್ನು ಸಮಾಜದ ತಿದ್ದುವಿಕೆಗೆ ಬಳಸಿದರೆ ಖುಷಿಯೇ ಸರಿ. ಬದಲಿಗೆ ಪಕ್ಷಗಳ ಪರ ಪ್ರಚಾರ ಮಾಡುವುದಾದರೆ, ಭಾಷಣಕಾರರು ಸಮಾಜದ ಒಳಿತಿಗೆ ಮಾತನಾಡುವ ಬದಲು, ರಾಜಕೀಯ ಬೀಜಗಳನ್ನು ಬಿತ್ತುತ್ತಿರುವುದು ಅಷ್ಟೇ ನಿಜ. ಸುಮ್ಮನೆ ಮಾತನಾಡಿದರೆ ಸರಿ, ಇಲ್ಲದಿರುವ ಇರುವೆಗಳನ್ನು ಹುಡುಕಿ ಧರ್ಮ, ಕರ್ಮ ಎಂದು ಜನರ ತಲೆಯಲ್ಲಿ ತುಂಬುವ ಕೆಲಸವೇಕೆ..?
Vijaya Karnataka Web amulya pro pak
ಪಾಕಿಸ್ತಾನ್ ಜಿಂದಾಬಾದ್ ಹೇಳಿಕೆ ನೀಡಿ ಫೇಮಸ್ ಆಗಲು ಮೈಕ್ ಸಾಕೆ? ರಾಜಕೀಯವೂ ಬೇಕೇ?


ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಗಲಾಟೆ ಗದ್ದಲಗಳನ್ನು ಉಂಟು ಮಾಡಿರುವ ವಿಷಯ ಎಂದರೆ CAA, NRC. ಅಷ್ಟೇ ಅಲ್ಲದೆ ಮೈಕ್ ಸಿಕ್ಕರೆ ಗಂಟಲು ಕೀಳುವಂತೆ ಕಿರುಚಿ ದೇಶ ದ್ರೋಹದ ಹೇಳಿಕೆ ಕೊಟ್ಟು, ಯುವಜನರ ತಲೆ ಕೆಡಿಸುತ್ತಿರುವವರು ಇನ್ನೊಂದೆಡೆ.. ಒಂದು ಕಾನೂನು ಪೂರ್ಣವಾಗಿ ಜಾರಿಯಾಗುವ ಮೊದಲು ಜನರ ಎದುರೇ ಆರು ತಿಂಗಳ ಕಾಲ ಇಟ್ಟರೆ, ಐದು ತಿಂಗಳು ಸುಮ್ಮನಿದ್ದ ಜನ ಆರನೇ ತಿಂಗಳಿಗೆ ಒಟ್ಟಿಗೆ ಗಲಭೆ ಗೊಂದಲಗಳನ್ನು ಶುರು ಮಾಡಿದರು ಹೇಗೆ? ಈ ದಿಢೀರ್ ಘಟನೆಗಳು ಯಾಕೆ? ಕಾರಣ? ಯಾರಿಗೂ ಗೊತ್ತಿರದ ಕೆಲವು ಸತ್ಯಗಳು ಕಾಡುವುದಂತೂ ಖಚಿತ.

ಇಲ್ಲಿ ಮುಖ್ಯವಾಗಿ ಬಲಿಯಾಗುತ್ತಿರುವುದು ಹೆಚ್ಚು ಯುವ ಜನರೇ. ಮೈಕ್ ಸಿಕ್ಕರೆ ಸಾಕು ಅವನು ಇವನು ಎಂದು ಶುರು ಮಾಡುವ ಇವರುಗಳಿಗೆ ದೇಶದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯಲ್ಲದಿದ್ದರೂ, ಆ ಸ್ಥಾನಗಳಿಗಾದರು ಮರ್ಯಾದೆ ಕೊಡುವಷ್ಟು ಜ್ಞಾನದ ಕೊರತೆಯಾ? ಬಾಯಿಗೆ ಬಂದಂತೆ ಮಾತನಾಡುವ ಮೊದಲು, ತಾನು ಯಾವ ದೇಶದಲ್ಲಿ ಹುಟ್ಟಿದ್ದೇನೆ, ಎಂತಹ ಸಮಾಜದಲ್ಲಿ ಬದುಕುತ್ತಿದ್ದೇನೆ ಎನ್ನುವ ಅರಿವಿರಬೇಕು. ಭಾರತದ ಪ್ರಜೆಯಾಗಿಯಾದರು ಕಾನೂನಿಗೆ ಬೆಲೆ ಕೊಡಬಾರ್ದಾ? ನಿಜವಾಗಿ CAA ಮತ್ತು NRC ವಿರುದ್ಧ ಹೋರಾಡುವವರು ಕೇವಲ ಅದನ್ನೇ ವಿಷಯವಾಗಿಟ್ಟುಕೊಳ್ಳದೆ ಪಕ್ಷ, ದೇಶ, ಜಾತಿ, ಜಾಗ, ಪ್ರಧಾನಿ, ಮಂತ್ರಿ ಪರ, ವಿರುದ್ಧದ ಮಾತುಗಳೇಕೋ..!

‘ಕೀರ್ತಿ ಶನಿ’ ಹಿಂದೆ ಬಿದ್ದವರು ಉಳಿವುದುಂಟೇ..? ‘ಅಮೂಲ್ಯ’ ಯುವ ಭವಿಷ್ಯ ಎತ್ತ ಸಾಗ್ತಿದೆ..?

ಇದಕ್ಕೆಲ್ಲಾ ಮುಖ್ಯ ಕಾರಣ, ಮೂಲ ಕಾರಣ ಶಿಕ್ಷಣವೆನ್ನುವುದು ಬೇಸರದ ವಿಷಯ. ವಿದ್ಯಾರ್ಥಿಗಳು ಇದಕ್ಕೆಲ್ಲಾ ಪ್ರಚೋದಿತರಾಗುತ್ತಿರುವುದು ವಿಶೇಷವೇನಿಲ್ಲ ಬಿಡಿ. ಉದಾಹರಣೆಗೆ, ಮಕ್ಕಳಿಗೆ ನಮ್ಮ ಸಮಾಜ, ಶಾಲೆಯ ಪಾಠದಿಂದಲೇ, ನೀನು ಆ ಜಾತಿ, ನಾನು ಈ ಜಾತಿ ಎನ್ನುವುದನ್ನು ಕಲಿಸುತ್ತಿದೆ. ಶಾಲೆ ಸೇರುವ ಮೊದಲು ಅದ್ಯಾವುದರ ಜ್ಞಾನವಿಲ್ಲದ ಮಗು, ಶಿಕ್ಷಣ ಕಲಿಯಲು ಬಂದು ಜಾತಿ ಬಗ್ಗೆ ತಿಳಿದು, ಸ್ಕಾಲರ್‌ಶಿಪ್‌ಗೆ ಅಪ್ಲಿಕೇಶನ್ ಹಾಕುವುದಕ್ಕೂ, ಕಾಲೇಜಿನಲ್ಲಿ ಸೀಟ್ ಗಿಟ್ಟಿಸಿಕೊಳ್ಳುವುದಕ್ಕೂ ಜಾತಿ ಧರ್ಮ ಎಂದು ಕೇಳಿದಾಗ ಮಗುವಿಗೂ, ನಾವೆಲ್ಲಾ ಒಂದೇ ಎನ್ನುವ ಪುಸ್ತಕದ ಬದನೇಕಾಯಿ ಪಾಠ ಸುಳ್ಳು ಎಂದು ಅರಿವಾಗಿತ್ತು.

'ಪಾಕಿಸ್ತಾನ್ ಜಿಂದಾಬಾದ್' ಎನ್ನುವ ಮುನ್ನ ಈ ಅಂಶಗಳು ಗಮನದಲ್ಲಿರಲಿ..!

ಮರದ ಎಲೆಗಳಿಗೆ ರೋಗ ಬಂದರೆ ಔಷಧಿ ಹಾಕಿಸಬಹುದು, ಬೇರಿಗೆ ರೋಗವೆಂದರೆ ಏನು ಮಾಡುವುದು? ಇನ್ನು ರಾಜಕೀಯದವರಿಗೆ ವಾಗ್ಮಿಗಳು ದಾಳವೋ ಅಥವಾ ವಾಗ್ಮಿಗಳಿಗೆ ರಾಜಕೀಯ ದಾಳವೋ? ಒಟ್ಟಿನಲ್ಲಿ ಮೈಕ್ ಹಿಡಿಯುವ ಕೈಗಳ ಹಿಂದೆ ಒಂದು ರಾಜಕೀಯ ಪಕ್ಷದ ಅಚ್ಚಿರುತ್ತದೆ. ಬಾಯಿ ಬಿಟ್ಟರೆ ಒಂದು ಪರ ಮತ್ತೊಂದು ವಿರೋಧದ ಪಕ್ಷ ಹೊರ ಬರುತ್ತದೆ. ಧರ್ಮಗಳ ಪೂರ್ತಿ ಇತಿಹಾಸ ಹೊರ ಬರುತ್ತದೆ. ಚಂದವಾಗಿ, ಕಂಚಿನ ಕಂಠದಲ್ಲಿ ಮಾತನಾಡುವ ಯುವಜನತೆ ಒಂದಷ್ಟು ಒಳ್ಳೆಯ ವಿಷಯಗಳನ್ನಿಟ್ಟುಕೊಂಡರೆ ಚಂದ ಮತ್ತು ಚಂದ. ರಾಜಕೀಯ, ಧರ್ಮ, ದೇಶ ಇವುಗಳ ಬಗ್ಗೆ ಮಾತನಾಡುವಷ್ಟು ದೊಡ್ಡವಳು ನಾನಲ್ಲದಿದ್ದರೂ ಭಾರತ ದೇಶದ ಯುವ ಜನರಲ್ಲಿ ಒಬ್ಬಳಾಗಿ ಒಂದಷ್ಟು ಇಲ್ಲಿ ಹೇಳಿದ್ದೇನೇ. ತಪ್ಪಿದ್ದರೆ ತಿದ್ದಿ ಬುದ್ಧಿ ಹೇಳಿ.

ಲೇಖಕರು: ರೂಪಾ ಮಂಜಪ್ಪ ನರಸಾಪುರ

'ಪಾಕಿಸ್ತಾನ್ ಜಿಂದಾಬಾದ್ ಅನ್ನೋದು, ಬಾಂಬ್ ಇಡೋದು ಅನಾರೋಗ್ಯಕರ': ಬರಗೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ