ಆ್ಯಪ್ನಗರ

ಒತ್ತಡ ನಿವಾರಣೆಗೆ ಬ್ಯಾಡ್ಮಿಂಟನ್‌

625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ಎಂಇಎಸ್‌ ಕಿಶೋರ್‌ ಕೇಂದ್ರ ಪ್ರೌಢಶಾಲೆ ವಿದ್ಯಾರ್ಥಿ ಸುಮಂತ್‌ ಹೆಗ್ಡೆ ಹೀಗೆಂದು ತಮ್ಮ ಯಶಸ್ಸಿನ ಹಿಂದಿನ ಶ್ರಮ ವಿವರಿಸಿದರು.

Vijaya Karnataka Web 13 May 2017, 4:00 am

ಸುಮಂತ್‌ ಹೆಗ್ಡೆ , ಬೆಂಗಳೂರಿನ ಕಿಶೋರ್‌ ಕೇಂದ್ರ ಪ್ರೌಢಶಾಲೆ

625/625

Vijaya Karnataka Web sslc result
ಒತ್ತಡ ನಿವಾರಣೆಗೆ ಬ್ಯಾಡ್ಮಿಂಟನ್‌


ಬೆಂಗಳೂರು: ಓದಿದ್ದನ್ನು ಮರೆಯದಿರಲು ಮತ್ತೆ ಮತ್ತೆ ಓದುತ್ತಿದ್ದೆ. ಓದು ಹೆಚ್ಚಾಗಿ ಒತ್ತಡ ಅತಿಯಾದಾಗ ಕೆಲ ಗಂಟೆಗಳ ಕಾಲ ಬ್ಯಾಡ್ಮಿಂಟನ್‌ ಆಡುತ್ತಿದ್ದೆ...

625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ಎಂಇಎಸ್‌ ಕಿಶೋರ್‌ ಕೇಂದ್ರ ಪ್ರೌಢಶಾಲೆ ವಿದ್ಯಾರ್ಥಿ ಸುಮಂತ್‌ ಹೆಗ್ಡೆ ಹೀಗೆಂದು ತಮ್ಮ ಯಶಸ್ಸಿನ ಹಿಂದಿನ ಶ್ರಮ ವಿವರಿಸಿದರು.

''ಪರೀಕ್ಷೆ ಬರೆಯುವ ಒತ್ತಡದಲ್ಲಿ ಓದಿದ್ದೆಲ್ಲ ಮರೆತುಹೋಗಬಹುದು ಎಂಬ ಅಂದಾಜಿತ್ತು. ಹೀಗಾಗಿ ಪ್ರತಿ ಸಲ ಓದಿದ ಬಳಿಕ ಮತ್ತೆ ಅದನ್ನೇ ನೆನಪು ಮಾಡಿಕೊಳ್ಳುತ್ತಿದ್ದೆ. ನೆನಪಾಗದೇ ಇದ್ದಾಗ ನೋಟ್‌ಬುಕ್‌ನಲ್ಲಿ ಬರೆಯಲು ಪ್ರಯತ್ನಿಸುತ್ತಿದ್ದೆ. ಹೀಗೆಲ್ಲ ಮಾಡುತ್ತಿದ್ದರಿಂದ ಸುಸ್ತಾಗುತ್ತಿತ್ತು. ಬಳಿಕ ಕೆಲ ಗಂಟೆಗಳ ಕಾಲ ಬ್ಯಾಡ್ಮಿಂಟನ್‌, ಕ್ರಿಕೆಟ್‌ ಆಡುತ್ತಿದ್ದೆ. ಇದು ಮತ್ತೆ ಓದಲು ಪ್ರೇರಣೆ ನೀಡುತ್ತಿತ್ತು,'' ಎಂದು ಅವರು ಪ್ರತಿಕ್ರಿಯಿಸಿದರು.

''ನಾನೆಂದೂ ಟೈಮ್‌ ಟೇಬಲ್‌ ಮಾಡಿಕೊಳ್ಳಲಿಲ್ಲ. ಈ ರೀತಿಯ ಅತಿಯಾದ ಶಿಸ್ತಿನ ಓದು ಅಗತ್ಯವಿಲ್ಲ ಎಂದೇ ಅನಿಸಿತ್ತು. ಪ್ರತಿ ದಿನ 3-4 ಗಂಟೆ ಓದುತ್ತಿದ್ದೆ. ಪರೀಕ್ಷೆ ಸಮಯದಲ್ಲಿ ಈ ಅವಧಿಯನ್ನು ಸ್ವಲ್ಪ ಹೆಚ್ಚಿಸಿದೆ. ಆದರೆ ಎಂದೂ ಗಡಿಬಿಡಿ ಮಾಡಿಕೊಂಡು, ಚಿಂತೆ ಮಾಡಿಕೊಂಡು ಓದಲಿಲ್ಲ. ಮುಂದೆ ಪಿಯುಸಿಯಲ್ಲಿ ವಿಜ್ಞಾನ ಆರಿಸಿಕೊಳ್ಳಲು ನಿರ್ಧರಿಸಿದ್ದೇನೆ,'' ಎಂದರು.

ಸುಮಂತ್‌ ಅವರು, ಮಹಾಲಕ್ಷ್ಮಿ ಲೇಔಟ್‌ ನಿವಾಸಿ, ಬಿಬಿಎಂಪಿ ಅರಣ್ಯಾಧಿಕಾರಿ ಸದಾಶಿವ ಹೆಗ್ಡೆ ಹಾಗೂ ಚೇತನಾ ಹೆಗ್ಡೆ ದಂಪತಿಯ ಪುತ್ರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ