ಆ್ಯಪ್ನಗರ

ಕರುನಾಡ ಕಟ್ಟೋಣ ಬನ್ನಿ ಅಭಿಯಾನಕ್ಕೆ ಬುಧವಾರ ಸಿ ಟಿ ರವಿ ಚಾಲನೆ

ಜೂನ್‌ 3, ಬುಧವಾರ ರಾಜ್ಯ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ ಅವರು ಕೊರೊನೋತ್ತರ ಕರ್ನಾಟಕದ ಪುನರುಜ್ಜೀವನಕ್ಕೆ ವಿಜಯ ಕರ್ನಾಟಕ ಆರಂಭಿಸಿದ ಕರುನಾಡ ಕಟ್ಟೋಣ ಬನ್ನಿ ಅಭಿಯಾನ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

Vijaya Karnataka Web 2 Jun 2020, 7:34 am
ಬೆಂಗಳೂರು: ಕೊರೊನೋತ್ತರ ಕರ್ನಾಟಕದ ಪುನಶ್ಚೇತನದ ಉದ್ದೇಶದಿಂದ ವಿಜಯ ಕರ್ನಾಟಕ ರೂಪಿಸಿರುವ 'ಕರುನಾಡ ಕಟ್ಟೋಣ ಬನ್ನಿ' ಅಭಿಯಾನಕ್ಕೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ. ರವಿ ಅವರು ಬುಧವಾರ ಚಾಲನೆ ನೀಡಲಿದ್ದಾರೆ.
Vijaya Karnataka Web CT Ravi


ಈ ಸಂದರ್ಭದಲ್ಲಿ ರಾಜ್ಯ ಪ್ರವಾಸೋದ್ಯಮ ಉತ್ತೇಜನದ ಕುರಿತು ಸಂವಾದ, ಚಿಂತನ-­ಮಂಥನವೂ ನಡೆಧಿಯಲಿದೆ. ಕರ್ನಾ­ಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇ­ಶಕ ಕುಮಾರ್‌ ಪುಷ್ಕರ್‌, ಕರ್ನಾಟಕ ಪ್ರದೇಶ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಸಂಘದ ಅಧ್ಯಕ್ಷ ಚಂದ್ರ­ಶೇಖರ್‌ ಹೆಬ್ಬಾರ್‌, ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್‌, ಕರ್ನಾಟಕ ರಾಜ್ಯ ಟ್ರಾವೆಲ್ಸ್‌ ಆಪರೇಟರ್ಸ್ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ, ಖಾಸಗಿ ಬಸ್‌ ಮಾಲೀಕರ ಸಂಘ ಅಧ್ಯಕ್ಷದ ನಟರಾಜ್‌ ಶರ್ಮಾ ಮತ್ತು ರಾಜ್ಯದ ನಾನಾ ಭಾಗಗಳ ಪ್ರವಾಸೋಧಿದ್ಯಮ ವಲಯದ ಪ್ರತಿನಿಧಿಗಳು ಭಾಗವಹಿಸ­ಲಿದ್ದಾರೆ.

ಕೈಗಾರಿಕೆ, ಕೃಷಿ, ಆರೋಗ್ಯ, ಶಿಕ್ಷಣ ಇತ್ಯಾದಿ ಕ್ಷೇತ್ರಗಳ ಪುನ­ಶ್ಚೇತನದ ಕುರಿತೂ ಸಂವಾದ ಸರಣಿ ಮುಂದುವರಿಯಲಿದೆ.

ವಿಕ ಅಭಿಯಾನ: ಕರುನಾಡ ಕಟ್ಟೋಣ... ಜೊತೆಯಾಗಿ ಮುನ್ನಡೆಯೋಣ ಬನ್ನಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ