ಆ್ಯಪ್ನಗರ

ಸಬ್‌ಇನ್ಸ್‌ಪೆಕ್ಟರ್‌ ಸಾವಿನ ಬಳಿಕ ಆಹಾರ ಸೇವಿಸುವುದನ್ನು ಬಿಟ್ಟ ಕುದುರೆ

ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ಯೊಬ್ಬರು ಹೃದಯಾಘಾತದಿಂದ ಮರಣವನ್ನಪ್ಪಿದ ಬಳಿಕ ಅವರು ಸಾಕಿದ ಕುದುರೆ ಆಹಾರ ಸೇವಿಸದಿರುವುದನ್ನು ನೋಡಿ, ಆ ಪ್ರಾಣಿಯ ಪ್ರೀತಿ ನೋಡಿದವರು ಮೂಕ ವಿಸ್ಮಿತರಾಗಿದ್ದಾರೆ.

TIMESOFINDIA.COM 20 Jul 2018, 12:24 pm
ಚಂಡೀಗಢ: ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ಯೊಬ್ಬರು ಹೃದಯಾಘಾತದಿಂದ ಮರಣವನ್ನಪ್ಪಿದ ಬಳಿಕ ಅವರು ಸಾಕಿದ ಕುದುರೆ ಆಹಾರ ಸೇವಿಸದಿರುವುದನ್ನು ನೋಡಿ, ಆ ಪ್ರಾಣಿಯ ಪ್ರೀತಿ ನೋಡಿದವರು ಮೂಕ ವಿಸ್ಮಿತರಾಗಿದ್ದಾರೆ.
Vijaya Karnataka Web itbp police died


ಐಟಿಬಿಪಿ(ಇಂಡೋ-ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌)ಯಲ್ಲಿ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಮಂಗಲ್‌ ಸಿಂಗ್‌ಗೆ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಆದ್ದರಿಂದಲೇ ಅವರು ತಮ್ಮ ಸಾಕುಪ್ರಾಣಿಗಳನ್ನು ಮನೆಯ ಸದಸ್ಯರಂತೆ ಕಾಣುತ್ತಿದ್ದರು.

ಮಂಗಲ್‌ ಪಾಂಡೆ ಅತ್ಯುತ್ತಮ ಪ್ರಾಣಿ ತರಬೇತುದಾರರಾಗಿದ್ದರು. ಅವುಗಳಿಗೆ ಆಹಾರ ನೀಡುವುದು, ಆರೈಕೆ ಮಾಡುವುದು ಎಲ್ಲವನ್ನು ತಾವೇ ಮಾಡುತ್ತಿದ್ದರು, ತಮ್ಮನ್ನು ಪ್ರೀತಿಸುವ ಮಂಗಲ್‌ ಪಾಂಡೆ ಅವರನ್ನು ಕಂಡರೆ ಪ್ರಾಣಿಗಳಿಗೂ ಅಷ್ಟೇ ಪ್ರೀತಿ ಇತ್ತು. ಅವರ ಹಠಾತ್‌ ಮರಣಕ್ಕೆ ಅವರು ಮುದ್ದಿನಿಂದ ಸಾಕಿದ ಪ್ರಾಣಿಗಳು ಕಂಬಿನಿ ಮಿಡಿಯುತ್ತಿವೆ.

ಅವರು ಸಾಯುವ ಸ್ವಲ್ಪ ಹೊತ್ತಿನ ಮೊದಲಷ್ಟೇ ಆ ಕುದುರೆಗೆ ಆಹಾರ ನೀಡಿ ಮುದ್ದಿಸಿದ್ದರು. ಇದೀಗ ಆ ಕುದುರೆ ಅವರ ಅಗಲಿಕೆಯ ನೋವಿನಿಂದ ಆಹಾರವನ್ನೇ ಮುಟ್ಟುತ್ತಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ