ಆ್ಯಪ್ನಗರ

'ಪಾಕಿಸ್ತಾನ ಮುರ್ದಾಬಾದ್' ಎಂದರೆ ಚಿಕನ್‌ಗೆ ಸಿಗುತ್ತೆ 10 ರೂ. ರಿಯಾಯಿತಿ !

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಕ್ಕೆ ಇಡೀ ದೇಶವೇ ಪಾಕ್ ವಿರುದ್ಧ ದ್ವೇಷ ಕಾರುತ್ತಿದೆ. ಇದೇ ರೀತಿ ಛತ್ತೀಸ್‌ಗಢದ ಆಹಾರ ಮಳಿಗರಯ ಮಾಲೀಕರೊಬ್ಬರು 'ಪಾಕಿಸ್ತಾನ ಮುರ್ದಾಬಾದ್' ಹೇಳಿದರೆ ರಿಯಾಯಿತಿ ಕೊಡುವುದಾಗಿ ಬೋರ್ಡ್ ಹಾಕಿಕೊಂಡಿದ್ದಾರೆ.

Navbharat Times 21 Feb 2019, 12:13 pm
ರಾಯ್ಪುರ: ಛತ್ತೀಸ್‌ಗಢದ ಜಗದಾಲ್‌ಪುರದ ಆಹಾರ ಮಳಿಗೆಯೊಂದರ ಮಾಲೀಕರೊಬ್ಬರು ಒಂದು ಚಿಕನ್ ಲೆಗ್‌ ಪೀಸ್‌, ಚಿಕನ್ ತಂದೂರಿಗೆ 10 ರೂ. ಡಿಸ್ಕೌಂಟ್‌ ನೀಡುತ್ತಿದ್ದಾರೆ. ಆದರೆ, ಇದಕ್ಕೊಂದು ಷರತ್ತನ್ನು ಅವರು ಹಾಕಿದ್ದಾರೆ. ಅದೇನೆಂದರೆ 'ಪಾಕಿಸ್ತಾನ ಮುರ್ದಾಬಾದ್' ಎಂದು ಗ್ರಾಹಕರು ಹೇಳಿದರೆ ಸಾಕು ನಿಮಗೆ 10 ರೂ. ಕಡಿಮೆ ದರದಲ್ಲಿ ಚಿಕನ್ ಲೆಗ್ ಪೀಸ್, ತಂದೂರಿ ದೊರೆಯುತ್ತದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
Vijaya Karnataka Web chicken discount


ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಫೆಬ್ರವರಿ 14ರಂದು ನಡೆದ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಈ ಆಹಾರ ಮಳಿಗೆಯ ಮಾಲೀಕ ಅಂಜಲ್ ಸಿಂಗ್ ಆರೋಪಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಅಲ್ಲದೆ, ''ಪಾಕಿಸ್ತಾನ ಮಾನವೀಯತೆಗೆ ಎಂದೂ ಬೆಲೆ ಕೊಟ್ಟಿಲ್ಲ. ಎಂದೂ ಕೊಡುವುದೂ ಇಲ್ಲ. ಹೀಗಾಗಿ, ಎಲ್ಲರೂ ತಮ್ಮ ಹೃದಯದಲ್ಲಿ ಪಾಕಿಸ್ತಾನ ಮುರ್ದಾಬಾದ್‌ ಎಂದು ಹೇಳಬೇಕು'' ಎಂದು ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ.

ಫೆಬ್ರವರಿ 14ರಂದು ನಡೆದ ದಾಳಿಯಲ್ಲಿ 40 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು. ದಾಳಿಯನ್ನು ನಡೆಸಿರುವುದಾಗಿ ಪಾಕ್ ಮೂಲದ ಜೈಷ್ - ಎ - ಮೊಹಮ್ಮದ್ ಹೊಣೆ ಹೊತ್ತುಕೊಂಡಿತ್ತು. ಈ ದುಷ್ಕೃತ್ಯದ ಬಳಿಕ ಪಾಕಿಸ್ತಾನದ ವಿರುದ್ಧ ಭಾರತದ ಜನತೆಯಲ್ಲಿ ದ್ವೇಷ ಹೆಚ್ಚಾಗುತ್ತಿದೆ. ರಸ್ತೆಗಿಳಿದು ಸಹ ದೇಶದ ಅಸಂಖ್ಯಾತ ಜನರು ಪಾಕಿಸ್ತಾನ ಹಾಗೂ ಉಗ್ರರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.


ಇನ್ನು, ಪಾಕಿಸ್ತಾನ ಧ್ವಜವನ್ನು ಸುಡುವುದು, ಪಾಕ್ ಮೂಲದ ಬಾಲಿವುಡ್ ನಟ - ನಟಿಯರನ್ನು ದೇಶದಿಂದ ಹೊರಕ್ಕೆ ಕಳಿಸಿರುವಂತಹ ಅನೇಕ ಘಟನೆಗಳು ವರದಿಯಾಗಿದ್ದು, ಶತೃ ರಾಷ್ಟ್ರದ ವಿರುದ್ಧ ಯುದ್ಧ ಮಾಡಲೇಬೇಕೆಂದು ಹಲವರು ಪಣ ತೊಟ್ಟಿದ್ದಾರೆ.

ಪುಲ್ವಾಮಾ ದಾಳಿಯನ್ನು ವಿಶ್ವದ ಅನೇಕ ರಾಷ್ಟ್ರಗಳು ಖಂಡಿಸಿದ್ದು, ಭಯೋತ್ಪಾದನೆ ವಿಚಾರದಲ್ಲಿ ಭಾರತವನ್ನು ಬೆಂಬಲಿಸುವುದಾಗಿ ಪಣ ತೊಟ್ಟಿವೆ.

ಇನ್ನೊಂದೆಡೆ, ಪುಲ್ವಾಮಾ ದಾಳಿ ಬಳಿಕ ಭಾರತ ಸಹ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು ನೆರೆಯ ದೇಶವನ್ನು ಏಕಾಂಗಿಯನ್ನಾಗಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಿವೆ. ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಹಿನ್ನೆಲೆ ಭಾರತ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ