ಆ್ಯಪ್ನಗರ

ಎಚ್ಚರಿಕೆ: 100 ವರ್ಷದೊಳಗೆ ಸರ್ವನಾಶವಾಗಲಿವೆ ಕೀಟಗಳು, ಜೈವಿಕ ವ್ಯವಸ್ಥೆಗೆ ಧಕ್ಕೆ!

ಪರಿಸರದ ಸಮತೋಲನ ತಪ್ಪುವ ಜತೆಗೆ, ಜೈವಿಕ ಕ್ರಿಯೆ ಸ್ಥಗಿತಗೊಳ್ಳುವುದರಿಂದ ಒಟ್ಟಾರೆ ಅವ್ಯವಸ್ಥೆ ಸೃಷ್ಟಿಯಾಗುತ್ತದೆ. ಇದರಿಂದ ನೇರವಾಗಿ ಮನುಷ್ಯ ಸಹಿತ ಇತರ ಎಲ್ಲ ಜೀವಿಗಳ ಮೇಲೂ ಪ್ರಭಾವ ಬೀರುತ್ತದೆ.

Vijaya Karnataka Web 11 Feb 2019, 6:35 pm
ಜಾಗತಿಕ ತಾಪಮಾನ ಏರಿಕೆ ಮತ್ತು ಮಾನವನ ಅತಿಯಾದ ಹಸ್ತಕ್ಷೇಪಕ್ಕೆ ತುತ್ತಾಗಿರುವ ಜಗತ್ತಿನ ಎಲ್ಲ ಕೀಟಗಳು ಮುಂದಿನ 100 ವರ್ಷದೊಳಗಾಗಿ ಸರ್ವನಾಶಕ್ಕೀಡಾಗಲಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
Vijaya Karnataka Web 1


ಕೀಟಗಳು ಇಲ್ಲವಾದರೆ ಒಳ್ಳೆಯದಾಯಿತು, ಕಿರಿಕಿರಿ ತಪ್ಪಿತು ಎಂದು ನಾವು ಖುಷಿಪಡಬೇಕಿಲ್ಲ. ಅದಕ್ಕೆ ಬದಲಾಗಿ, ಅದರಿಂದ ದೊಡ್ಡ ಗಂಡಾಂತರವೇ ಮನುಕುಲಕ್ಕೆ ಎದುರಾಗಬಹುದು. ಅತಿಯಾದ ವಿಷ, ರಾಸಾಯನಿಕ ಬಳಕೆ, ವಿವಿಧ ಉದ್ಯಮ, ಪರಿಸರ ನಾಶ ಸಹಿತ ವಿವಿಧ ಕಾರಣಗಳಿಂದಾಗಿ ಕೀಟ ಸಂತತಿ ನಶಿಸಿಹೋಗುತ್ತದೆ ಎನ್ನುವುದು ತಜ್ಞರ ವಾದವಾಗಿದೆ.


ಕೀಟಗಳ ಸಂತತಿ ಸರ್ವನಾಶವಾದರೆ, ಜೈವಿಕ ಸಂಕೋಲೆಯಲ್ಲಿ ಒಂದು ಪ್ರಮುಖ ಹಂತವೇ ಕಳಚಿಹೋಗುತ್ತದೆ. ಅದರಿಂದ ಜೀವವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗುವ ಸಾಧ್ಯತೆಯಿರುತ್ತದೆ. ಜತೆಗೆ ಕೀಟಗಳಿಂದ ಪರಿಸರದಲ್ಲಿ ಉಂಟಾಗುವ ಪರಾಗಸ್ಪರ್ಷ ಸಹಿತ ವಿವಿಧ ಕ್ರಿಯೆಗಳು, ಕೀಟಗಳ ಹಸ್ತಕ್ಷೇಪವಿಲ್ಲದೆ ಪ್ರಕೃತಿಯಲ್ಲಿ ಉಂಟಾಗಬಹುದಾದ ಬದಲಾವಣೆ ಅಲ್ಲಿಗೇ ನಿಂತುಹೋಗುತ್ತದೆ.

ಇದರಿಂದ ಪರಿಸರದ ಸಮತೋಲನ ತಪ್ಪುವ ಜತೆಗೆ, ಜೈವಿಕ ಕ್ರಿಯೆ ಸ್ಥಗಿತಗೊಳ್ಳುವುದರಿಂದ ಒಟ್ಟಾರೆ ಅವ್ಯವಸ್ಥೆ ಸೃಷ್ಟಿಯಾಗುತ್ತದೆ. ಇದರಿಂದ ನೇರವಾಗಿ ಮನುಷ್ಯ ಸಹಿತ ಇತರ ಎಲ್ಲ ಜೀವಿಗಳ ಮೇಲೂ ಪ್ರಭಾವ ಬೀರುತ್ತದೆ.


ಈಗಾಗಲೇ ಕೆಲವು ಕೀಟಗಳ ಪ್ರಬೇಧದಲ್ಲಿ ಶೇ. 40 ಇಳಿಕೆಯಾಗಿದ್ದು, ಮತ್ತೆ ಒಟ್ಟಾರೆ ಕೀಟಗಳ ಸಂಖ್ಯೆಯಲ್ಲಿ ಶೇ. 30 ಇಳಿಕೆಯಾಗಿದೆ. ಪ್ರತಿ ವರ್ಷ ಶೇ. 2.5 ಕೀಟ ಸಂಖ್ಯೆ ಕುಸಿತವಾದರೂ, ಅವುಗಳು ನಶಿಸಿಹೋಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಎಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ