ಆ್ಯಪ್ನಗರ

ಕೇರಳ ಪರಿಹಾರ ನಿಧಿಗೆ ಕೂಡಿಟ್ಟ ಹಣವನ್ನೆಲ್ಲಾ ಕೊಟ್ಟ ಟೀ ಮಾರಾಟಗಾರ

ಮಹಾಮಳೆಗೆ ತತ್ತರಿಸಿ ಹೋದ ಕೇರಳಕ್ಕೆ ಎಲ್ಲೆಡೆಯಿಂದ ಪರಿಹಾರ ಹರಿದು ಬರುತ್ತಿದೆ. ಈಗಾಗಲೆ ಕ್ಯಾನ್ಸರ್ ರೋಗಿ ಸೇರಿದಂತೆ, ಕೂಡಿಟ್ಟುಕೊಂಡಿದ್ದ ಹಣವನ್ನೂ ಚಿಕ್ಕಮಕ್ಕಳು ಪರಿಹಾರ ನಿಧಿಗೆ ಕೊಟ್ಟಿದ್ದಾರೆ. ಅಂತಹದ್ದೇ ಒಂದು ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

Vijaya Karnataka Web 10 Sep 2018, 5:06 pm
[This News Originally Published in Ei Samay On Sep 10, 2018]
Vijaya Karnataka Web bakul


ಪಶ್ಚಿಮ ಬಂಗಾಳ:
ಮಹಾಮಳೆಗೆ ತತ್ತರಿಸಿ ಹೋದ ಕೇರಳಕ್ಕೆ ಎಲ್ಲೆಡೆಯಿಂದ ಪರಿಹಾರ ಹರಿದು ಬರುತ್ತಿದೆ. ಈಗಾಗಲೆ ಕ್ಯಾನ್ಸರ್ ರೋಗಿ ಸೇರಿದಂತೆ, ಕೂಡಿಟ್ಟುಕೊಂಡಿದ್ದ ಹಣವನ್ನೂ ಚಿಕ್ಕಮಕ್ಕಳು ಪರಿಹಾರ ನಿಧಿಗೆ ಕೊಟ್ಟಿದ್ದಾರೆ. ಅಂತಹದ್ದೇ ಒಂದು ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಬಕುಲ್ ದತ್ತಾ ಎಂಬ ಟೀ ಮಾರುವವರೊಬ್ಬರು ಕೂಡಿಟ್ಟುಕೊಂಡಿದ್ದ ಎಲ್ಲಾ ಹಣವನ್ನೂ ಕೇರಳ ಪರಿಹಾರ ನಿಧಿಗೆ ಕೊಟ್ಟಿದ್ದಾರೆ. ಜಯನಗರ್-ಮಾಜಿಲ್‌ಪುರದ ದುತ್ತಾಪುರ ಬಳಿ ಸಣ್ಣ ಟೀ ಸ್ಟಾಲ್ ಇಟ್ಟುಕೊಂಡಿದ್ದಾರೆ. ಪತ್ನಿ ಮತ್ತು ಮಗ ಇರುವ ಸಣ್ಣ ಕುಟುಂಬ ಇವರದು. ಇವರ ಮಗಳಿಗೆ ಈಗಾಗಲೆ ಮದುವೆಯಾಗಿದೆ.

ದಿನನಿತ್ಯದ ಜೀವನ ನಡೆಸುವುದೇ ಇವರ ಪಾಲಿಗೆ ಕಷ್ಟದ ಕೆಲಸ. ಆದರೆ ಕೂಡಿಟ್ಟುಕೊಂಡಿದ್ದ 10,000 ರೂ.ಗಳನ್ನು ಹಿಂದೆಮುಂದೆ ಯೋಚನೆ ಮಾಡದೆ ಕೇರಳ ಪರಿಹಾರ ನಿಧಿಗೆ ಕೊಟ್ಟಿದ್ದಾರೆ ಬಕುಲ್ ದತ್ತಾ. ಹಲವಾರು ದಿನಗಳಿಂದ ಕೂಡಿಟ್ಟಿದ್ದ ಹಣವನ್ನು ಕೇರಳ ಪರಿಹಾರ ನಿಧಿಗೆ ನೀಡಿರುವ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2009ರಲ್ಲಿ ಸುಂದರಬನ ಪ್ರದೇಶಕ್ಕೆ ಚಂಡಮಾರುತ ಐಲಾ ಅಪ್ಪಳಿಸಿದಾಗ ಹಲವಾರು ಮಂದಿ ಮನೆ ಮಠ ಕಳೆದುಕೊಂಡಿದ್ದರು. ಆಗ ಈ ಜಯನಗರ ಪ್ರದೇಶಕ್ಕೆ ಬದುಕು ಹರಸಿ ಬಂದವರಲ್ಲಿ ಬಕುಲ್ ದತ್ತಾ ಸಹ ಒಬ್ಬರು. ಆಗ ಅವರಿಗೆ ಹಲವಾರು ಮಂದಿ ಸಹಾಯ ಮಾಡಿದ್ದರು.

ಪ್ರಕೃತಿ ಮುನಿಸಿಕೊಂಡರೆ ಮನುಷ್ಯ ಎಷ್ಟು ಅಸಾಯಕನಾಗುತ್ತಾನೆ ಎಂಬುದನ್ನು ದತ್ತಾ ಕಣ್ಣಾರೆ ನೋಡಿದ್ದರು. ಜಯನಗರದಿಂದ ಕೇರಳಕ್ಕೆ ಎಷ್ಟು ದೂರ ಇದೆ ಎಂಬುದೂ ಅವರಿಗೆ ಗೊತ್ತಿಲ್ಲ. ಆದರೆ ಪ್ರವಾಹದ ದುಷ್ಪರಿಣಾಮದ ಅರಿವು ಅವರಿಗಿದೆ. ಹಾಗಾಗಿ ಹಿಂದೆ ಮುಂದೆ ನೋಡದೆ ತಾನು ಕೂಡಿಟ್ಟಿದ್ದ 10 ಸಾವಿರ ರೂ.ಗಳನ್ನು ಪರಿಹಾರ ನಿಧಿಗೆ ಕೊಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ