ಆ್ಯಪ್ನಗರ

ಮುಂಬೈಯಲ್ಲಿ ಶ್ವಾನಗಳಿಗೂ ನಡೀತು ರಕ್ತದಾನ ಶಿಬಿರ

ಆರೋಗ್ಯವಂತ ಶ್ವಾನಗಳು ಅನೀಮಿಯಾ ಹಾಗೂ ಇತರೆ ಕಾಯಿಲೆಗೊಳಗಾಗಿರುವ ನಾಯಿಗಳಿಗೆ ರಕ್ತದಾನ ಮಾಡಿದವು. ಇತ್ತೀಚಿನ ದಿನಗಳಲ್ಲಿ ನಾಯಿಗಳಲ್ಲಿ ಅನೀಮಿಯಾ ಹಾಗೂ ಟಿಕ್‌ ಫೀವರ್ ಹೆಚ್ಚಾಗಿದೆ. ಇಂತಹ ಕಾಯಿಲೆಗಳು ಬಂದಾಗ ಅವುಗಳಿಗೆ ಚಿಕಿತ್ಸೆ ನೀಡಲು ಹಾಗೂ ಆಪರೇಷನ್‌ ಮಾಡಲು ರಕ್ತ ಬೇಕಾಗುತ್ತದೆ.

Maharashtra Times 12 Apr 2019, 6:47 pm
[This story originally published in Maharashtra Times on April 12, 2019]
Vijaya Karnataka Web 5

ಮುಂಬಯಿ:
ಮನುಷ್ಯರಿಗೆ ರಕ್ತದಾನ ಶಿಬಿರ ನಡೆಯುವುದು ಸಾಮಾನ್ಯ. ಆದರೆ, ಬಾಂಬೆಯ ವೆಟರಿನರಿ ಕಾಲೇಜಿನಲ್ಲಿ ಇತ್ತೀಚೆಗೆ ವಿಶೇಷವಾದ ರಕ್ತದಾನ ಶಿಬಿರವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಏನಿದು ವಿಶೇಷ ಅಂತೀರಾ? ಈ ಸ್ಟೋರಿ ನೋಡಿ.

ಆರೋಗ್ಯವಂತ ಶ್ವಾನಗಳು ಅನೀಮಿಯಾ ಹಾಗೂ ಇತರೆ ಕಾಯಿಲೆಗೊಳಗಾಗಿರುವ ನಾಯಿಗಳಿಗೆ ರಕ್ತದಾನ ಮಾಡಿದವು. ಇತ್ತೀಚಿನ ದಿನಗಳಲ್ಲಿ ನಾಯಿಗಳಲ್ಲಿ ಅನೀಮಿಯಾ ಹಾಗೂ ಟಿಕ್‌ ಫೀವರ್ ಹೆಚ್ಚಾಗಿದೆ. ಇಂತಹ ಕಾಯಿಲೆಗಳು ಬಂದಾಗ ಅವುಗಳಿಗೆ ಚಿಕಿತ್ಸೆ ನೀಡಲು ಹಾಗೂ ಆಪರೇಷನ್‌ ಮಾಡಲು ರಕ್ತ ಬೇಕಾಗುತ್ತದೆ.

ರಕ್ತದಾನ ಶಿಬಿರ


ಈ ಹಿನ್ನೆಲೆ ಸೋಮವಾರ ( ಏಪ್ರಿಲ್ 8, 2019)ರಂದು ಬಾಂಬೆ ವೆಟರಿನರಿ ಕಾಲೇಜಿನಲ್ಲಿ ಶ್ವಾನಗಳಿಗಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಪ್ರತಿ ವರ್ಷ ಇದೇ ರೀತಿ ರಕ್ತದಾನ ಶಿಬಿರ, ಕ್ಯಾಂಪ್‌ಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದೂ ತಿಳಿದುಬಂದಿದೆ.

ಶ್ವಾನಗಳಿಗೆ ಬರಬಹುದಾದ ಕಾಯಿಲೆಗಳ ಬಗ್ಗೆ ಅವುಗಳ ಮಾಲೀಕರಿಗೆ ಹೆಚ್ಚು ಅರಿವು ಮೂಡಿಸಲಾಗುತ್ತಿದೆ. ಈ ಹಿನ್ನೆಲೆ ಶ್ವಾನಗಳು ರಕ್ತದಾನ ಮಾಡುವ ಸಂಖ್ಯೆ ಶೇ. 25ರಷ್ಟು ಹೆಚ್ಚಾಗಿದೆ.

ರಕ್ತದಾನ ಮಾಡಲು ಬಂದ ಶ್ವಾನ


ಇನ್ನು, ಬಾಂಬೆ ವೆಟರಿನರಿ ಕಾಲೇಜಿನಲ್ಲಿ ಶ್ವಾನಗಳಿಗಾಗಿ ನಡೆದ ರಕ್ತದಾನ ಶಿಬಿರದಲ್ಲಿ 20 ಮಂದಿ ತಮ್ಮ ಸಾಕುನಾಯಿಗಳ ರಕ್ತದಾನ ಮಾಡಲು ಮುಂದಾಗಿದ್ದು, ನೋಂದಾಯಿಸಿಕೊಂಡಿದ್ದರು. ಆದರೆ, ಕೇವಲ 12 ಆಯಿಗಳು ಮಾತ್ರ ಹಾಜರಿದ್ದು, ಕೊನೆಗೆ 7 ರಿಂದ 8 ನಾಯಿಗಳು ಮಾತ್ರ ರಕ್ತದಾನ ಮಾಡಿದವು ಎಂದು ಮೂಲಗಳು ತಿಳಿಸಿವೆ.

ರಕ್ತದಾನ ಶಿಬಿರ


ಮನುಷ್ಯರ ಹಾಗೆ ನಾಯಿಗಳಲ್ಲೂ ರಕ್ತದ ಗುಂಪುಗಳಿರುತ್ತವೆ. ಅಲ್ಲದೆ, 14 - 16 ಗ್ರಾಮ್‌ಗಳು / ಡೆಸಿ ಲೀಟರ್‌ ಹ್ಯೂಮೋಗ್ಲೋಬಿನ್‌ ಇರುತ್ತದೆ. ಜತೆಗೆ, ಶ್ವಾನಗಳ ರಕ್ತವನ್ನು ರಕ್ತದ ರೂಪದಲ್ಲಿ 6 ತಿಂಗಳ ಕಾಲ ಸಂಗ್ರಹ ಮಾಡಬಹುದು. ಈ ಮೊದಲು ವೆಟರಿನರಿ ವೈದ್ಯರು ಇದೇ ರೀತಿಯಲ್ಲಿ ಸಂಗ್ರಹಿಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ಲಾಸ್ಮಾ ರೂಪದಲ್ಲಿ ರಕ್ತವನ್ನು ಸಂಗ್ರಹಿಸಲಾಗುತ್ತದೆ. ಇದರಿಂದಾಗಿ ಒಂದು ವರ್ಷ ಕಾಲ ರಕ್ತವನ್ನು ಸಂಗ್ರಹಿಸಬಹುದಾಗಿದೆ.

ರಕ್ತ ನೀಡುತ್ತಿರುವ ಶ್ವಾನ


ನಾಯಿಗಳ ರಕ್ತದಾನ ಶಿಬಿರದಲ್ಲಿ ಶ್ವಾನ ಪ್ರೇಮಿಯೊಬ್ಬರು ಮಾತನಾಡಿದ್ದು, ''ಮನುಷ್ಯರಂತೆ ನಾಯಿಗಳಿಗೂ ರಕ್ತ ಬೇಕಾಗಿದೆ. ನಾವು ಕೇವಲ ಸಾಕು ನಾಯಿಗಳ ಬಗ್ಗೆ ಮಾತ್ರ ಆರೈಕೆ ಮಾಡುವುದಲ್ಲ, ಬೀದಿ ನಾಯಿಗಳಿಗೂ ಸಹಾಯ ಮಾಡಬೇಕು'' ಎಂದು ಗುಂಜನ್‌ ಚೌಹಾಣ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ