ಆ್ಯಪ್ನಗರ

ಸ್ವಿಗ್ಗಿ ಯಡವಟ್ಟು: ತಮಿಳುನಾಡಿನ ಚೆನ್ನೈನಲ್ಲಿ ಊಟ ಆರ್ಡರ್ ಮಾಡಿದ್ದಕ್ಕೆ ರಾಜಸ್ಥಾನದಿಂದ ಪಿಕಪ್ ಮಾಡಿದ್ರು !

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಆಹಾರವನ್ನು ಡೆಲಿವರಿ ಮಾಡಲು ಯತ್ನಿಸಿರುವುದು ಕಂಡು ಬಂದಿದೆ. ಇದು ಟ್ವಿಟರ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು, ನೀವು ನಂಬಿದ್ರೆ ನಂಬಿ ಬಿಟ್ಟರೆ ಬಿಡಿ ರಾಜಸ್ಥಾನದಿಂದ ಚೆನ್ನೈಗೆ ಸ್ವಿಗ್ಗಿ ಆ್ಯಪ್‌ನವರು ಡೆಲಿವರಿ ಮಾಡಲು ಯತ್ನಿಸಿದ್ದಾರೆ.

Times Now 19 Feb 2019, 8:41 pm
ಹೊಸದಿಲ್ಲಿ: ಇತ್ತೀಚೆಗೆ ಮನೆಗೆ ಆಹಾರ ವಿತರಣಾ ಕಂಪನಿ ಅಪ್ಲಿಕೇಷನ್‌ಗಳ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿದೆ. ಕಳೆದ ವಾರ ಫುಟ್‌ ಪ್ಯಾಕೆಟ್‌ನಲ್ಲಿ ರಕ್ತದ ಕಲೆಯಿರುವ ಬ್ಯಾಂಡೇಜ್ ಪತ್ತೆಯಾಗಿತ್ತು. ಅಲ್ಲದೆ, ನ್ಯೂಡಲ್ಸ್‌ನ ಫೋಟೋವೊಂದು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ, ಕೆಲವು ತಿಂಗಳ ಹಿಂದೆ ಜೊಮ್ಯಾಟೋ ಆಹಾರ ವಿತರಣ ಕಂಪನಿ ಜೊಮ್ಯಾಟೋ ಸಿಬ್ಬಂದಿ, ಆಹಾರ ಡೆಲಿವರಿ ನೀಡುವ ಮುನ್ನ ಟೇಸ್ಟ್‌ ನೋಡಿ ಸಿಕ್ಕಿಬಿದ್ದಿದ್ದ ಘಟನೆ ವರದಿಯಾಗಿತ್ತು. ಜತೆಗೆ, ಜೊಮ್ಯಾಟೋ ಡೆಲಿವರಿ ಮಾಡುವವರೊಬ್ಬರು ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದೂ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
Vijaya Karnataka Web 1


ಆದರೆ, ಇತ್ತೀಚೆಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಆಹಾರವನ್ನು ಡೆಲಿವರಿ ಮಾಡಲು ಯತ್ನಿಸಿರುವುದು ಕಂಡು ಬಂದಿದೆ. ಇದು ಟ್ವಿಟರ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು, ನೀವು ನಂಬಿದ್ರೆ ನಂಬಿ ಬಿಟ್ಟರೆ ಬಿಡಿ ರಾಜಸ್ಥಾನದಿಂದ ಚೆನ್ನೈಗೆ ಸ್ವಿಗ್ಗಿ ಆ್ಯಪ್‌ನವರು ಡೆಲಿವರಿ ಮಾಡಲು ಯತ್ನಿಸಿದ್ದಾರೆ.


ಈ ಸಂಬಂಧ ಡೆಲಿವರಿಯ ಸ್ಟೇಟಸ್‌ನ ಸ್ಕ್ರೀನ್‌ಶಾಟ್‌ ಅನ್ನು ಭಾರ್ಗವ್ ರಾಜನ್ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ವ್ಯಕ್ತಿಯೊಬ್ಬರು ಚೆನ್ನೈನ ಹೋಟೆಲ್‌ವೊಂದರಲ್ಲಿ ಊಟ ಬುಕ್‌ ಮಾಡಿದ್ದು, ಆದರೆ ಸ್ವಿಗ್ಗಿಯವರು ಅದನ್ನು ರಾಜಸ್ಥಾನದ ರೆಸ್ಟೋರೆಂಟ್ ಎಂದು ಅಂದುಕೊಂಡಿದ್ದಾರೆ.


ಭಾರತದ ಭೂಪಟವನ್ನು ಆಹಾರ ವಿತರಣಾ ಆ್ಯಪ್‌ನವರು ಹಾಕಿಕೊಂಡಿದ್ದು, ಅದರಲ್ಲಿ ಬೈಕ್‌ನ ಎಮೋಜಿ ಸಹ ಶೇರ್ ಆಗಿತ್ತು. ಆತ ರಾಜಸ್ಥಾನದಲ್ಲಿ ಇದ್ದದ್ದು ಭೂಪಟದಲ್ಲಿ ತೋರಿಸಿದೆ. ಅಲ್ಲದೆ, ಡೆಲಿವರಿ ಮಾಡುವವರು ಆರ್ಡರ್ ಅನ್ನು ತೆಗೆದುಕೊಂಡಿದ್ದಾರೆ.

ಇದಕ್ಕೆ ಜೋಕ್ ಮಾಡಿರುವ ಸ್ವಿಗ್ಗಿಯವರು ಇದು ಮಿಸ್‌ಚೀಫ್‌ ಲೋಕಿ ಎಂಬ ದೇವರ ಕೆಲಸವಿರಬಹುದು ಎಂದಿದ್ದಾರೆ. ಅಲ್ಲದೆ, ಇಂತಹ ತಪ್ಪುಗಳು ಆಗದಂತೆ ನೋಡಿಕೊಳ್ಳುವುದಾಗಿಯೂ ಭಾರ್ಗವ್‌ ರಾಜನ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದಕ್ಕೆ ಟ್ವೀಟಿಗರು ಸಾಕಷ್ಟು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದು, ಸ್ವಿಗ್ಗಿಯವರು ಸಹ ಇದಕ್ಕೆ'' ನಾವು ಗ್ರಾಹಕರಿಗೋಸ್ಕರ ಚಂದ್ರನಲ್ಲಿಗೆ ಹೋಗಿ ವಾಪಸ್ ಬರುತ್ತೇವೆ'' ಎಂದೂ ಹೇಳಿಕೊಂಡಿದ್ದಾರೆ. ಅಲ್ಲದೆ, ರಾಜಸ್ಥಾನದಿಂದ ಚೆನ್ನೈಗೆ ಕೇವಲ 12 ನಿಮಿಷ ಎಂದು ಸ್ಕ್ರೀನ್‌ಶಾಟ್‌ನಲ್ಲಿ ತೋರಿಸಿದ್ದು, ಹೀಗಾಗಿ ಸೂಪರ್‌ಸಾನಿಕ್‌ ಮಿಸೈಲ್‌ನಲ್ಲಿ ಕೊಡುತ್ತೀರಾ ಎಂದು ಹಾಗೂ ಇದನ್ನು ರಜನೀಕಾಂತ್ ಡ್ರೈವಿಂಗ್ ಮಾಡುವಾಗ ಮಾತ್ರ ಸಾಧ್ಯವೆಂದೂ ಹೇಳಿಕೊಂಡಿದ್ದಾರೆ. ಒಟ್ಟಾರೆ ಟ್ವಿಟರ್‌ನಲ್ಲಿ ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ