ಆ್ಯಪ್ನಗರ

ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಕೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕನಿಗೆ ಹಣದ ಮಳೆ

​ಪುಲ್ವಾಮಾ ದಾಳಿಗೆ ಇಡೀ ದೇಶವಷ್ಟೆ ಅಲ್ಲ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೇರಿ ವಿಶ್ವದ ಹಲವು ರಾಷ್ಟ್ರಗಳು ತೀವ್ರ ಖಂಡನೆ ವ್ಯಕ್ತಪಡಿಸಿದ್ದವು. ಆದರೆ, ನಮ್ಮ ದೇಶದ ರಾಜಕಾರಣಿಗಳ ವರ್ತನೆಗೆ ಜನತೆ ಕಿಡಿ ಕಾರುತ್ತಿದ್ದಾರೆ. ಪುಲ್ವಾಮಾ ಹುತಾತ್ಮರಿಗಾಗಿ ಗೌರವ ನಮನ ಸಮಾರಂಭದಲ್ಲಿ ಕಾಂಗ್ರೆಸ್‌ ಮಾಜಿ ಸಿಎಂ ಪುತ್ರನಿಗೆ ಹಣದ ಮಳೆ ಸುರಿಸಿರುವ ಘಟನೆಯೂ ನಡೆದಿದೆ.

Times Now 23 Feb 2019, 6:34 pm
ರೂರ್ಕಿ: ಫೆಬ್ರವರಿ 14ರಂದು ಉಗ್ರರ ದಾಳಿ ವೇಳೆ 40 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಆದರೆ, ಪುಲ್ವಾಮಾ ಹುತಾತ್ಮರಿಗಾಗಿ ಗೌರವ ನಮನ ಸಮಾರಂಭದಲ್ಲಿ ಕಾಂಗ್ರೆಸ್‌ ಮಾಜಿ ಸಿಎಂ ಪುತ್ರನಿಗೆ ಹಣದ ಮಳೆ ಸುರಿಸಿದ್ದಾರೆ.
Vijaya Karnataka Web uttarakhand congress


ಪುಲ್ವಾಮಾ ಉಗ್ರರ ದಾಳಿ ಬಳಿಕ ದೇಶದ ಜನತೆಯಲ್ಲಿ ಆಕ್ರೋಶ ಹೆಚ್ಚಾಗಿದ್ದರೆ ಹಲವು ರಾಜಕಾರಣಿಗಳು ಮಾತ್ರ ಯೋಧರ ಬಗ್ಗೆಯಾಗಲೀ ಜನರ ಆಕ್ರೋಶದ ಬಗ್ಗೆಯಾಗಲೀ ತಲೆಕೆಡಿಸಿಕೊಳ್ಳುತ್ತಿಲ್ಲ. ಹುತಾತ್ಮ ಯೋಧರಿಗೆ ರಾಜಕಾರಣಿಗಳು ಗೌರವ ನಮನ ಸಲ್ಲಿಸುತ್ತಿರುವವರ ವೇಳೆಯಲ್ಲೂ ಕೆಲ ರಾಜಕಾರಣಿಗಳ ವರ್ತನೆ ಬಗ್ಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಉತ್ತರಾಖಂಡದ ಈ ಘಟನೆ ನೋಡುತ್ತಿದ್ದರೆ ಹುತಾತ್ಮ ಯೋಧರ ಕುಟುಂಬಗಳು ಹಾಗೂ ನಾಗರಿಕರಿಗೆ ಮತ್ತಷ್ಟು ಬೇಸರ ಉಂಟಾಗುತ್ತದೆ.


ಉತ್ತರಾಖಂಡದ ರೂರ್ಕಿಯಲ್ಲಿ ಸಿಆರ್‌ಪಿಎಫ್‌ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉತ್ತರಾಖಂಡ ಮಾಜಿ ಸಿಎಂ ಹರೀಶ್ ರಾವತ್ ಪುತ್ರ ಹಾಗೂ ಕಾಂಗ್ರೆಸ್ ನಾಯಕರಾಗಿರುವ ವೀರೇಂದ್ರ ರಾವತ್‌ಗೆ ಕಂತುಗಟ್ಟಲೆ ಹಣವನ್ನು ಎಸೆದಿದ್ದಾರೆ. ಇನ್ನು, ಪಕ್ಷದ ಕಾರ್ಯಕರ್ತರು ಹಣದ ಮಳೆ ಸುರಿಸುತ್ತಿದ್ದರೂ ಮಾಜಿ ಸಿಎಂ ಪುತ್ರ ಮಾತ್ರ ನಗುತ್ತಾ ಸುಮ್ಮನೆ ನಿಂತಿದ್ದರು. ಈ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

ಕಾಂಗ್ರೆಸ್ ವರ್ತನೆಗೆ ಜನರ ಆಕ್ರೋಶ


ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ದೇಶದ ಜನತೆ ಇದಕ್ಕೆ ಆಕ್ಷೇಪಿಸಿದ್ದು, ರಾಜಕೀಯ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಈ ವೇಳೆ ಸಂಗೀತ ಕಾರ್ಯಕ್ರಮವನ್ನೂ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದು ಗಾಯಕರಿಗೂ ಸಹ ಹಣದ ಮಳೆ ಸುರಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ವರ್ತನೆಗೆ ಜನರ ಆಕ್ರೋಶ


ಪುಲ್ವಾಮಾ ದಾಳಿಗೆ ಇಡೀ ದೇಶವಷ್ಟೆ ಅಲ್ಲ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೇರಿ ವಿಶ್ವದ ಹಲವು ರಾಷ್ಟ್ರಗಳು ತೀವ್ರ ಖಂಡನೆ ವ್ಯಕ್ತಪಡಿಸಿದ್ದವು. ಆದರೆ, ನಮ್ಮ ದೇಶದ ರಾಜಕಾರಣಿಗಳ ವರ್ತನೆಗೆ ಜನತೆ ಕಿಡಿ ಕಾರುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ